Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇವಸ್ಥಾನದ ಮುಂದೆ ಗೋಲಿ ಸೋಡಾ ಮಾರಿದ 'ಚಿನ್ನಾರಿಮುತ್ತ' ವಿಜಯ್.!
Recommended Video
ತೆರೆಮೇಲೆ ಭಿನ್ನ-ವಿಭಿನ್ನ ಪಾತ್ರಗಳನ್ನು ಪೋಷಿಸುವುದು ಸುಲಭ. ಆದ್ರೆ, ನಿಜ ಜೀವನದಲ್ಲಿ ಸಾಮಾನ್ಯ ಜನರಂತೆ ಹಾದಿ ಬೀದಿಯಲ್ಲಿ ಚಿಲ್ಲರೆ ವ್ಯಾಪಾರ ಮಾಡುವುದು, ಹೋಟೆಲ್ ನಲ್ಲಿ ಕೆಲಸ ಮಾಡುವುದು, ಹೂ ಮಾರುವುದು ತೀರಾ ಕಷ್ಟ.!
ಹೊಟ್ಟೆ ಪಾಡಿಗಾಗಿ ಶ್ರೀಸಾಮಾನ್ಯರು ನಾನಾ ಕೆಲಸ ಮಾಡುತ್ತಾರೆ. ಮೈಬಗ್ಗಿಸಿ ದುಡಿಯುವ ಜನರ ಕಷ್ಟವನ್ನು ಅರಿವು ಮಾಡಿಕೊಳ್ಳುವುದರ ಜೊತೆಗೆ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಲು ನಮ್ಮ ಕನ್ನಡ ತಾರೆಯರು ಮುಂದಾಗಿದ್ದಾರೆ.
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ಒಂದು ದಿನ ಕಾಮನ್ ಮ್ಯಾನ್ ತರಹ ಬೀದಿ ಬದಿಯಲ್ಲಿ ಕೆಲಸ ಮಾಡಿ, ಅದರಿಂದ ಬರುವ ಹಣಕ್ಕೆ ಮತ್ತಷ್ಟನ್ನು ಸೇರಿಸಿ ನೋವಿನಲ್ಲಿರುವವರ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ನಮ್ಮ ಕನ್ನಡದ ಸ್ಟಾರ್ಸ್.
''ನಾವು ತಾರೆಯರು'' ಎಂಬ ಹಮ್ಮು ಬಿಮ್ಮು ಇಲ್ಲದೆ ರೋರಿಂಗ್ ಸ್ಟಾರ್ ಶ್ರೀಮುರಳಿ, 'ಡಾಲಿ' ಧನಂಜಯ್, 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ, ನಟಿ ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಉಪೇಂದ್ರ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಮಣಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ನೊಂದ ಹೃದಯಗಳಿಗೆ ಸಹಾಯ ಹಸ್ತ ಚಾಚಿದ್ದರು. ಇದೀಗ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಸರದಿ. ಮುಂದೆ ಓದಿರಿ...
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಭಾಗವಹಿಸಿದ್ದಾರೆ. ಒಬ್ಬರ ಕಷ್ಟಕ್ಕೆ ಸ್ಪಂದಿಸಲು ವಿಜಯ್ ರಾಘವೇಂದ್ರ ಮುಂದಾಗಿದ್ದಾರೆ.
ದೋಸೆ ಮಾರಿದ ಉಪೇಂದ್ರ: ಇದು ರಿಯಲ್ ಸ್ಟಾರ್ ಮಾಡಿದ ರಿಯಲ್ ಕೆಲಸ.!
ಗೋಲಿ ಸೋಡಾ ಮಾರಿದ ವಿಜಯ್ ರಾಘವೇಂದ್ರ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ದೇವಸ್ಥಾನದ ಮುಂದೆ ಬೀದಿ ಬದಿಯಲ್ಲಿ ನಟ ವಿಜಯ್ ರಾಘವೇಂದ್ರ ಗೋಲಿ ಸೋಡಾ ಮಾರಿದ್ದಾರೆ. ಅಜ್ಜಿಯೊಬ್ಬರಿಗೆ ಸಹಾಯ ಮಾಡಲು ಒಂದು ದಿನದ ಮಟ್ಟಿಗೆ ವಿಜಯ್ ರಾಘವೇಂದ್ರ ಗೋಲಿ ಸೋಡಾ ಮಾರಾಟ ಮಾಡಿದ್ದಾರೆ.
ರಸ್ತೆ ಬದಿಯಲ್ಲಿ ಬೊಟ್ಟು, ಬಾಚಣಿಗೆ ಮಾರಿದ ಪಂಚಭಾಷಾ ಚತುರೆ ಪ್ರಿಯಾಮಣಿ
ಬೀಬಿ ಜಾನ್ ಗೆ ಸಹಾಯ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ಆರ್ಥಿಕ ಸಂಕಷ್ಟದಲ್ಲಿ ಇರುವ ಬೀಬಿ ಜಾನ್ ಎಂಬ ವಯಸ್ಸಾದ ಮಹಿಳೆಗೆ ಸಹಾಯ ಮಾಡಲು ವಿಜಯ್ ರಾಘವೇಂದ್ರ ಮನಸ್ಸು ಮಾಡಿದ್ದಾರೆ.
ಒಂದೊಳ್ಳೆ ಕಾರಣಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂ ಮಾರಿದ ಪ್ರಿಯಾಂಕಾ ಉಪೇಂದ್ರ.!
ಯಾರೀ ಬೀಬಿ ಜಾನ್
ನದಿಯಲ್ಲಿ ತೆಪ್ಪವನ್ನು ನಡೆಸುತ್ತಾ ಬೀಬಿ ಜಾನ್ ಜೀವನ ನಡೆಸುತ್ತಿದ್ದರು. ಆದ್ರೆ, ಅವರಿಗೆ ಈಗ ವಯಸ್ಸಾಗಿದೆ. ತೆಪ್ಪ ನಡೆಸಲು ಅವರಿಗೆ ಶಕ್ತಿ ಇಲ್ಲ. ಇವರಿಗೆ ಇರುವ ಸಾಕು ಮಗ ಬುದ್ಧಿಮಾಂದ್ಯ. ಜೀವನ ನಡೆಸಲು ಒದ್ದಾಡುತ್ತಿರುವ ಬೀಬಿ ಜಾನ್ ಗೆ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಸಹಾಯ ಮಾಡುತ್ತಿದೆ.
ಇದೇ ರಿಯಾಲಿಟಿ: ಬೀದಿಬದಿಯಲ್ಲಿ ಮೂಸಂಬಿ ಜ್ಯೂಸ್ ಮಾರಿದ ಧನಂಜಯ್.!
ಚಿನ್ನಾರಿ ಮುತ್ತ ಸಂಪಾದಿಸಿದ ಹಣ ಎಷ್ಟು.?
ಚಿನ್ನಾರಿ ಮುತ್ತ ಎಷ್ಟು ಗೋಲಿ ಸೋಡಾ ಮಾರಿದ್ದಾರೆ.? ಅದರಿಂದ ಅವರು ಸಂಪಾದಿಸಿದ ಹಣ ಎಷ್ಟು.? ಎಂಬುದನ್ನ ನೀವು ತಿಳಿದುಕೊಳ್ಳಬೇಕು ಅಂದ್ರೆ, ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿ ನೋಡಿ. ಯಾಕಂದ್ರೆ, 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಪ್ರಸಾರ ಆಗುವುದು ಆಗಲೇ.!