Don't Miss!
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೊಳ್ಳೆ ಕಾರಣಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂ ಮಾರಿದ ಪ್ರಿಯಾಂಕಾ ಉಪೇಂದ್ರ.!
ಬರೀ ಮನರಂಜನೆ ನೀಡುವುದು ಮಾತ್ರ ಅಲ್ಲ, ಎಂಟರ್ ಟೇನ್ಮೆಂಟ್ ಜೊತೆಗೆ ಜನರಿಗೆ ಸಹಾಯ ಹಸ್ತ ಚಾಚುವುದು ಉದಯ ವಾಹಿನಿಯ ಉದ್ದೇಶ. ಈ ನಿಟ್ಟಿನಲ್ಲಿ ರೂಪುಗೊಂಡ ಕಾರ್ಯಕ್ರಮವೇ 'ಸದಾ ನಿಮ್ಮೊಂದಿಗೆ'.
ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ರೆಡಿ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಶೋ ಪ್ರತಿ ವಾರಾಂತ್ಯದಲ್ಲಿ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಇದೇ ಕಾರ್ಯಕ್ರಮಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು.
ರೈತರ ಕುಟುಂಬಕ್ಕೆ ಸಹಾಯ ಆಗಲಿ ಅಂತ ರೋರಿಂಗ್ ಸ್ಟಾರ್ ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು. ಎಲೆಕ್ಟ್ರಿಕ್ ಶಾಕ್ ನಿಂದ ಕೈಕಾಲು ಕಳೆದುಕೊಂಡಿದ್ದ ನಾಗೇಶ್ ಗಾಗಿ ಸೃಜನ್ ಲೋಕೇಶ್ ಭೇಲ್ ಪೂರಿ, ಪಾನಿ ಪೂರಿ ಮಾರಾಟ ಮಾಡಿದ್ದರು.
ಇನ್ನೂ ಡಾಲಿ ಧನಂಜಯ್ ಕೂಡ ಮೂಸಂಬಿ ಜ್ಯೂಸ್ ಮಾರಿ ರವಿ ಕುಟುಂಬಕ್ಕೆ ಕೈಲಾದ ಸಹಾಯ ಮಾಡಿದ್ದರು. ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಸರದಿ. ಮುಂದೆ ಓದಿರಿ...
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ
ಉತ್ತಮ ಉದ್ದೇಶ ಹೊಂದಿರುವ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಉಪೇಂದ್ರ ಮಡದಿ ಪ್ರಿಯಾಂಕಾ ಭಾಗವಹಿಸಿದ್ದಾರೆ.
ಇದೇ ರಿಯಾಲಿಟಿ: ಬೀದಿಬದಿಯಲ್ಲಿ ಮೂಸಂಬಿ ಜ್ಯೂಸ್ ಮಾರಿದ ಧನಂಜಯ್.!
ಹೂವಿನ ವ್ಯಾಪಾರ ಮಾಡಿದ ಪ್ರಿಯಾಂಕಾ ಉಪೇಂದ್ರ
'ಹೂವೇ.. ಹೂವೇ...' ಅಂತ ಪ್ರಿಯಾಂಕಾ ಹಾಡಿ ಕುಣಿದಿದ್ದನ್ನ ನೀವು ಸಿನಿಮಾದಲ್ಲಿ ನೋಡಿರಬಹುದು. ಇದೀಗ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂವಿನ ವ್ಯಾಪಾರ ಮಾಡಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.
ಬೀದಿಬೀದಿಯಲ್ಲಿ ಭೇಲ್ ಪೂರಿ ಮಾರಿದ ನಟ ಸೃಜನ್ ಲೋಕೇಶ್.!
ಪುಷ್ಪಲತಾ ಕುಟುಂಬಕ್ಕೆ ಸಹಾಯ
ಪುಷ್ಪಲತಾ ಕುಟುಂಬಕ್ಕೆ ಸಹಾಯ ಆಗಲಿ ಎಂದು ಪ್ರಿಯಾಂಕಾ ಉಪೇಂದ್ರ ಹೂ ಮಾರಿದ್ದಾರೆ. ಪುಷ್ಪಲತಾ ಅವರಿಗೆ 4 ಜನ ಹೆಣ್ಮಕ್ಕಳು. ಬಡತನದಲ್ಲಿ ಜೀವನ ಸಾಗಿಸುತ್ತಿರುವ ಇವರ ಕೊನೆಯ ಮಗಳು ನಯನಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಯನಾ ಚಿಕಿತ್ಸೆಗಾಗಿ ಪ್ರಿಯಾಂಕಾ ಉಪೇಂದ್ರ ಹೂವಿನ ವ್ಯಾಪಾರ ಮಾಡಿದ್ದಾರೆ.
ರೀಲ್ ಅಲ್ಲ ರಿಯಲ್: ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ
ಎಷ್ಟು ಸಂಪಾದನೆ ಮಾಡಿದರು.?
ಹೂ ಮಾರಾಟ ಮಾಡಿದ ಪ್ರಿಯಾಂಕಾ ಉಪೇಂದ್ರ ಸಂಪಾದನೆ ಮಾಡಿದೆಷ್ಟು.? ಪುಷ್ಪಲತಾ ಕುಟುಂಬಕ್ಕೆ ಸಿಕ್ಕ ಹಣವೆಷ್ಟು.? ಈ ಪ್ರಶ್ನೆಗಳಿಗೆ ಉತ್ತರ ಬರುವ ಭಾನುವಾರ ರಾತ್ರಿ 9 ಗಂಟೆಗೆ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಸಿಗಲಿದೆ.