Don't Miss!
- News ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಪುತ್ರನ ಪರ ಮತಯಾಚನೆಗಿಳಿದ ಭವಾನಿ ರೇವಣ್ಣ
- Lifestyle ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- Sports ಕಮಿನ್ಸ್ ಟೆನ್ಷನ್ ಹೆಚ್ಚಿಸಿದ ಸ್ಟಾರ್ ಪ್ಲೇಯರ್ ನಿರ್ಧಾರ: ಎಸ್ಆರ್ಎಚ್ ತಂಡಕ್ಕೆ ಆರಂಭದಲ್ಲೇ ಪೆಟ್ಟು
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧ್ರುವ ಸರ್ಜಾ ಆಟೋ ಓಡಿಸಲು ಸೃಜನ್ ಲೋಕೇಶ್ ಕಾರಣ.!
Recommended Video
'ಚಾಲೆಂಜ್', 'ಚೋಟಾ ಚಾಂಪಿಯನ್', 'ಕಾಸಿಗೆ ಟಾಸ್' ಹಾಗೂ 'ಮಜಾ ಟಾಕೀಸ್'... ಅಂತಹ ರಿಯಾಲಿಟಿ ಶೋಗಳ ಸೂತ್ರಧಾರ ಸೃಜನ್ ಲೋಕೇಶ್ ಇದೀಗ ಹೊಸ ಶೋ ಆರಂಭಿಸುತ್ತಿದ್ದಾರೆ.
ಉದಯ ವಾಹಿನಿಗಾಗಿ 'ಸದಾ ನಿಮ್ಮೊಂದಿಗೆ' ಎಂಬ ಹೆಸರಿನ ಕಾರ್ಯಕ್ರಮವನ್ನ ಸೃಜನ್ ಲೋಕೇಶ್ ಪ್ರಾರಂಭ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಈ ಶೋ ಮೂಡಿಬರಲಿದ್ದು, ಇದರಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಟೋ ಓಡಿಸಿದ್ದಾರೆ.
ಮೈಸೂರಿನ ಓರ್ವ ಆಟೋ ಡ್ರೈವರ್ ಕಷ್ಟಕ್ಕೆ ಸ್ಪಂದಿಸಿದ ಧ್ರುವ ಸರ್ಜಾ, ಆ ಕುಟುಂಬಕ್ಕೆ ಆರ್ಥಿಕ ನೆರವಾಗಲು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ಒಂದು ದಿನ ಆಟೋ ಓಡಿಸಿದ್ದಾರೆ.
ಹುಟ್ಟುಹಬ್ಬದ ದಿನ ಸಿಹಿ ಸುದ್ದಿ ಕೊಟ್ಟ ಸೃಜನ್ ಲೋಕೇಶ್.!
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸೃಜನ್ ಲೋಕೇಶ್, ''ಸದಾ ನಿಮ್ಮೊಂದಿಗೆ' ತುಂಬಾ ಒಳ್ಳೆಯ ಕಾನ್ಸೆಪ್ಟ್ ಹೊಂದಿದೆ. ಯಾರಿಗಾದರೂ ಸಹಾಯ ಆಗುತ್ತೆ ಅನ್ನೋದಾದರೆ, ನಮ್ಮ ಸಿನಿಮಾ ಆರ್ಟಿಸ್ಟ್ ಗಳೇ ಬಂದು ಅವರಿಗೋಸ್ಕರ ಕಾಮನ್ ಮ್ಯಾನ್ ಮಾಡುವ ಕೆಲಸ ಮಾಡಿ ಅದರಲ್ಲಿ ಬರುವ ಹಣದ ಜೊತೆಗೆ ನಮ್ಮ ಪ್ರೊಡಕ್ಷನ್ ಹಾಗೂ ಚಾನೆಲ್ ಕಡೆಯಿಂದಲೂ ಹಣ ಕೊಡುತ್ತೇವೆ. ಈ ಕಾರ್ಯಕ್ರಮಕ್ಕಾಗಿ ಧ್ರುವ ಸರ್ಜಾ ಆಟೋ ಓಡಿಸಿದ್ದಾರೆ'' ಎಂದರು.
'ಮಜಾ ಟಾಕೀಸ್' ಜೊತೆಯಲ್ಲೇ ಹೊಸ ಶೋ ಆರಂಭಿಸಿದ ಸೃಜನ್
ಬರೀ ಧ್ರುವ ಮಾತ್ರ ಅಲ್ಲ. ಈ ಕಾರ್ಯಕ್ರಮದಲ್ಲಿ ಶ್ರೀಮುರಳಿ, ರಶ್ಮಿಕಾ ಮಂದಣ್ಣ, ಪ್ರಿಯಾಮಣಿ, ಧನಂಜಯ್ ಸೇರಿದಂತೆ ಹಲವರು ಭಾಗವಹಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಜುಲೈ 15 ರಿಂದ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.