Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿರಡಿ ಸಾಯಿಬಾಬಾ ಅವತಾರದಲ್ಲಿ ನೀನಾಸಂ ಅಶ್ವತ್ಥ್
ಸುವರ್ಣ ವಾಹಿನಿಯಲ್ಲಿ 'ರಾಘವೇಂದ್ರ ವೈಭವ' ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈ ಹಿನ್ನೆಲೆಯಲ್ಲಿ ವಾಹಿನಿ ಮತ್ತೊಂದು ಭಕ್ತಿ ಪ್ರಧಾನ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. 'ಸಮರ್ಥ ಸದ್ಗುರು' ಹೆಸರಿನ ಶಿರಡಿ ಸಾಯಿಬಾಬಾ ಅವರ ಚರಿತೆ ಪ್ರಸಾರವಾಗುತ್ತಿದೆ.
ಸಾಯಿಗೋಲ್ಡ್ ಪ್ಯಾಲೇಸ್ ನ ಶರವಣನ್ ನಿರ್ಮಿಸಿರುವ ಈ ಧಾರಾವಾಹಿಯನ್ನು ಬುಕ್ಕಾಪಟ್ಟಣ ವಾಸು ನಿರ್ದೇಶಿಸಿದ್ದಾರೆ. ಒಟ್ಟು 300 ಎಪಿಸೋಡುಗಳನ್ನು ನಿರ್ಮಿಸಿ ಮೆಗಾ ಧಾರಾವಾಹಿ ಮಾಡುವ ಬಯಕೆಯನ್ನು ಶರವಣನ್ ಹೊಂದಿದ್ದಾರೆ.
ಸೋಮವಾರದಿಂದ ಶುಕ್ರವಾರದ ತನಕ ಸಂಜೆ 5.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಪ್ರತಿದಿನ ಅರ್ಧಗಂಟೆ ಕಾಲ ಶಿರಡಿ ಸಾಯಿಬಾಬಾ ಅವರ ಜೀವನ, ಪವಾಡ ಹಾಗೂ ಮಹಿಮೆಗಳನ್ನು ವೀಕ್ಷಕರು ನೋಡಬಹುದು. 'ಸಬ್ ಕಾ ಮಾಲಿಕ್ ಏಕ್ ಹೈ' ಎಂದ ಶಿರಡಿ ಸಾಯಿಬಾಬಾ ಅವರು ಜಾತ್ಯಾತೀತ ಗುರು ಎಂಬುದರಲ್ಲಿ ಎರಡು ಮಾತಿಲ್ಲ.
ದೊಡ್ಡಬಿದರಿಕಲ್ಲು, ಕರ್ನಾಟಕದ ಸ್ಥಳಗಳು ಮತ್ತು ಮಹರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಧಾರಾವಾಹಿಯಲ್ಲಿ ಶಿರಡಿ ಸಾಯಿಬಾಬಾ ಪಾತ್ರವನ್ನು ನೀನಾಸಂ ಅಶ್ವತ್ಥ್ ಪೋಷಿಸಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ಗಾಯಕ ರಾಜೇಶ್ ಕೃಷ್ಣನ್ ಮುಂತಾದವರಿದ್ದಾರೆ. (ಏಜೆನ್ಸೀಸ್)