twitter
    For Quick Alerts
    ALLOW NOTIFICATIONS  
    For Daily Alerts

    ಶಿರಡಿ ಸಾಯಿಬಾಬಾ ಅವತಾರದಲ್ಲಿ ನೀನಾಸಂ ಅಶ್ವತ್ಥ್

    By Rajendra
    |

    Neenasam Ashwath
    ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಈಗ ಭಕ್ತಿರಸ ಪ್ರವಹಿಸುತ್ತಿದೆ. ಈಗಾಗಲೆ ಉದಯ ಟಿವಿಯಲ್ಲಿ 'ಶ್ರೀ ಶಿರಡಿ ಸಾಯಿಬಾಬಾ' ಧಾರಾವಾಹಿ ಪ್ರಸಾರವಾಗುತ್ತಿದ್ದು 100 ಕಂತುಗಳನ್ನು ಪೂರೈಸಿದೆ. ಶಿರಡಿ ಸಾಯಿಬಾಬಾ ಬಗ್ಗೆ ಅನೇಕ ಚಿತ್ರಗಳು ಬಂದಿವೆ. ಈಗ ಮತ್ತೊಮ್ಮೆ ಸಾಯಿಬಾಬಾ ಕುರಿತ ಮತ್ತೊಂದು ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಆರಂಭವಾಗಿದೆ.

    ಸುವರ್ಣ ವಾಹಿನಿಯಲ್ಲಿ 'ರಾಘವೇಂದ್ರ ವೈಭವ' ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈ ಹಿನ್ನೆಲೆಯಲ್ಲಿ ವಾಹಿನಿ ಮತ್ತೊಂದು ಭಕ್ತಿ ಪ್ರಧಾನ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. 'ಸಮರ್ಥ ಸದ್ಗುರು' ಹೆಸರಿನ ಶಿರಡಿ ಸಾಯಿಬಾಬಾ ಅವರ ಚರಿತೆ ಪ್ರಸಾರವಾಗುತ್ತಿದೆ.

    ಸಾಯಿಗೋಲ್ಡ್ ಪ್ಯಾಲೇಸ್ ನ ಶರವಣನ್ ನಿರ್ಮಿಸಿರುವ ಈ ಧಾರಾವಾಹಿಯನ್ನು ಬುಕ್ಕಾಪಟ್ಟಣ ವಾಸು ನಿರ್ದೇಶಿಸಿದ್ದಾರೆ. ಒಟ್ಟು 300 ಎಪಿಸೋಡುಗಳನ್ನು ನಿರ್ಮಿಸಿ ಮೆಗಾ ಧಾರಾವಾಹಿ ಮಾಡುವ ಬಯಕೆಯನ್ನು ಶರವಣನ್ ಹೊಂದಿದ್ದಾರೆ.

    ಸೋಮವಾರದಿಂದ ಶುಕ್ರವಾರದ ತನಕ ಸಂಜೆ 5.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಪ್ರತಿದಿನ ಅರ್ಧಗಂಟೆ ಕಾಲ ಶಿರಡಿ ಸಾಯಿಬಾಬಾ ಅವರ ಜೀವನ, ಪವಾಡ ಹಾಗೂ ಮಹಿಮೆಗಳನ್ನು ವೀಕ್ಷಕರು ನೋಡಬಹುದು. 'ಸಬ್ ಕಾ ಮಾಲಿಕ್ ಏಕ್ ಹೈ' ಎಂದ ಶಿರಡಿ ಸಾಯಿಬಾಬಾ ಅವರು ಜಾತ್ಯಾತೀತ ಗುರು ಎಂಬುದರಲ್ಲಿ ಎರಡು ಮಾತಿಲ್ಲ.

    ದೊಡ್ಡಬಿದರಿಕಲ್ಲು, ಕರ್ನಾಟಕದ ಸ್ಥಳಗಳು ಮತ್ತು ಮಹರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಧಾರಾವಾಹಿಯಲ್ಲಿ ಶಿರಡಿ ಸಾಯಿಬಾಬಾ ಪಾತ್ರವನ್ನು ನೀನಾಸಂ ಅಶ್ವತ್ಥ್ ಪೋಷಿಸಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ಗಾಯಕ ರಾಜೇಶ್ ಕೃಷ್ಣನ್ ಮುಂತಾದವರಿದ್ದಾರೆ. (ಏಜೆನ್ಸೀಸ್)

    English summary
    Asianet Suvarna channel starts new devotiona serial 'Samartha Sadguru'. The story is based on Sai Baba, the great saint from Shirdi, who never recorded any of his teachings in writing. He was keen to awaken his devotees through devotion. Watch serila at 5.30 pm from Monday to Friday.
    Saturday, December 15, 2012, 17:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X