Don't Miss!
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಎಡಗೈಯಲ್ಲಿ ಅಡಗಿದೆ 'ಬಿಗ್ ಬಾಸ್' ಗೆಲುವಿನ ಅದೃಷ್ಟ!
'ಬಿಗ್ ಬಾಸ್ ಕನ್ನಡ' ನಿರೂಪಕ ಕಿಚ್ಚ ಸುದೀಪ್ ಅವರ ಎಡಗೈಯಲ್ಲಿ ಗೆಲವಿನ ಅದೃಷ್ಟ ಅಡಗಿದೆ. ಇದಕ್ಕೆ ತಾಜಾ ಉದಾಹರಣೆ 'ಬಿಗ್ ಬಾಸ್ ಕನ್ನಡ-4'.
ಹೌದು, 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನ ಮೊದಲ ಸೀಸನ್ ನಿಂದಲೂ ಗಮನಿಸುತ್ತಾ ಬಂದ್ರೆ, ಕುತೂಹಲಕಾರಿ ವಿಷಯವೊಂದು ಕಣ್ಣಿಗೆ ಬೀಳುತ್ತೆ. ಪ್ರತಿ ಆವೃತ್ತಿಯ ಫಿನಾಲೆಯಲ್ಲೂ ಸುದೀಪ್ ಅವರ ಎಡಗೈ ಹಿಡಿದುಕೊಂಡಿದ್ದವರೇ 'ಬಿಗ್ ಬಾಸ್' ವಿನ್ನರ್ ಆಗಿದ್ದಾರೆ.
ಇದು ಸುದೀಪ್ ಅವರ ಕೈಗುಣವೋ ಅಥವಾ ಸ್ವರ್ಧಿಗಳ ಅದೃಷ್ಟವೋ ಗೊತ್ತಿಲ್ಲ. ಆದ್ರೆ, ಕಾಕತಾಳೀಯ ಎಂಬಂತೆ ಮೂರು ಸೀಸನ್ ನಲ್ಲಿ ಇದು ಪ್ರೂವ್ ಆಗಿದೆ.
'ಬಿಗ್ ಬಾಸ್ ಕನ್ನಡ 4' ಪ್ರಥಮ್
'ಬಿಗ್ ಬಾಸ್ ಕನ್ನಡ 4' ರಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಿದ್ದ ಕೀರ್ತಿ ಹಾಗೂ ಪ್ರಥಮ್ ಅವರನ್ನ ಸುದೀಪ್ ವೇದಿಕೆ ಮೇಲೆ ಕರೆ ತಂದರು. ಸುದೀಪ್ ಅವರ ಬಲ ಭಾಗದಲ್ಲಿ ಕೀರ್ತಿ, ಎಡ ಭಾಗದಲ್ಲಿ ಪ್ರಥಮ್ ನಿಂತುಕೊಂಡರು. ಸುದೀಪ್ ಎಡಗೈ ಮೇಲುತ್ತುವ ಮೂಲಕ ಪ್ರಥಮ್ ವಿನ್ನರ್ ಆದರು.
'ಬಿಗ್ ಬಾಸ್ ಕನ್ನಡ 2' ಅಕುಲ್ ಬಾಲಾಜಿ
'ಬಿಗ್ ಬಾಸ್ ಕನ್ನಡ' ಸೀಸನ್ 3ರಲ್ಲಿ ಸೃಜನ್ ಲೋಕೇಶ್ ಹಾಗೂ ಅಕುಲ್ ಬಾಲಾಜಿ ಫಿನಾಲೆಗೆ ಬಂದಿದ್ದರು. ಸುದೀಪ್ ಅವರ ಬಲ ಭಾಗದಲ್ಲಿ ಸೃಜನ್ ಲೋಕೇಶ್ ಎಡ ಭಾಗದಲ್ಲಿ ಅಕುಲ್ ಬಾಲಾಜಿ ನಿಂತಕೊಂಡರು. ಆಗಲೂ ಎಡಗೈ ಮೇಲಿತ್ತಿದ ಸುದೀಪ್, ಅಕುಲ್ ಬಾಲಾಜಿ ಜಯಶಾಲಿ ಎಂದು ಘೋಷಿಸಿದರು.
'ಬಿಗ್ ಬಾಸ್ ಕನ್ನಡ 3' ಶೃತಿ
ಬಿಗ್ ಬಾಸ್ ಕನ್ನಡ 3ನೇ ಆವೃತ್ತಿಯಲ್ಲೂ ಇದು ಸಾಬೀತಾಗಿದೆ. ಶೃತಿ ಮತ್ತು ಚಂದನ್ ಫಿನಾಲೆ ತಲುಪಿದ್ದರು. ಅಲ್ಲಿಯೂ ಸುದೀಪ್ ಅವರ ಬಲ ಭಾಗದಲ್ಲಿ ಚಂದನ್ ಹಾಗೂ ಎಡ ಭಾಗದಲ್ಲಿ ಶೃತಿ ನಿಂತಿದ್ದರು. ಕಾಕತಾಳೀಯ ಅಂದ್ರೆ, ಮೂರನೇ ಸೀಸನ್ ನಲ್ಲೂ ಸುದೀಪ್ ಅವರ ಎಡಗೈ ಮೇಲುತ್ತುವ ಮೂಲಕ ಶೃತಿ ವಿನ್ನರ್ ಆದರು.
'ಬಿಗ್ ಬಾಸ್ ಕನ್ನಡ 1' ವಿಜಯರಾಘವೇಂದ್ರ
'ಬಿಗ್ ಬಾಸ್ ಕನ್ನಡ 1, ಕಾರ್ಯಕ್ರಮದಲ್ಲಿ ನಟ ವಿಜಯರಾಘವೇಂದ್ರ ಹಾಗೂ ಅರುಣ್ ಸಾಗರ್ ಫಿನಾಲೆ ತಲುಪಿದ್ದರು. ಸುದೀಪ್ ಅವರ ಬಲಭಾಗದಲ್ಲಿ ವಿಜಯರಾಘವೇಂದ್ರ, ಎಡ ಭಾಗದಲ್ಲಿ ಅರುಣ್ ಸಾಗರ್ ನಿಂತಿದ್ದರು. ಆದ್ರೆ, ಸೀಸನ್ ಒಂದರಲ್ಲಿ ಕಿಚ್ಚ ಸುದೀಪ್ ಬಲಗೈಯನ್ನ ಮೇಲುತ್ತುವುದರ ಮೂಲಕ ವಿಜಯರಾಘವೇಂದ್ರ ವಿನ್ನರ್ ಎಂದು ಘೋಷಿಸಿದ್ದರು.
ಕಿಚ್ಚನ ಎಡಗೈಯಲ್ಲಿದೆ ಅದೃಷ್ಟ!
ಹೀಗೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ 3 ಸೀಸನ್ ನಲ್ಲೂ ಸುದೀಪ್ ಅವರ ಎಡ ಭಾಗದಲ್ಲಿದ್ದವರೇ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಮೊದಲ ಆವೃತ್ತಿ ಯಲ್ಲಿ ವಿಜಯರಾಘವೇಂದ್ರ ಅವರು ಬಿಟ್ಟರೇ, ಅಕುಲ್ ಬಾಲಾಜಿ, ಶೃತಿ, ಪ್ರಥಮ್ ಮೂವರು ಎಡ ಭಾಗದಲ್ಲಿದ್ದವರೇ. ಇದು ಕಾಕತಾಳೀಯವೋ ಅಥವಾ ಅದೃಷ್ಟವೋ ಗೊತ್ತಿಲ್ಲ.