Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕಣ್ಮಣಿ' ವಿಜೇತೆಯಾದ ಉಡುಪಿಯ ಸಂಹಿತಾ
ಜೀ ಕನ್ನಡ ವಾಹಿನಿಯ ಅಪ್ಪಟ ಕನ್ನಡದ ಕಾರ್ಯಕ್ರಮ 'ಕನ್ನಡದ ಕಣ್ಮಣಿ'ಯ ಫೈನಲ್ ಮುಗಿದಿದೆ. ಉಡುಪಿಯ ಸಂಹಿತಾ ಮೊದಲ ಸ್ಥಾನವನ್ನು ಪಡೆದಿದ್ದಾರೆ.
'ಬುಟ್ಬುತ್ತಿವಾ..!' ಎಂಬ ಡೈಲಾಗ್ ಅನ್ನು ತನ್ನದೇ ಶೈಲಿಯಲ್ಲಿ ಹೇಳುವ ಮೂಲಕ 'ಕನ್ನಡದ ಕಣ್ಮಣಿ' ಕಾರ್ಯಕ್ರಮದಲ್ಲಿ ಸಂಹಿತಾ ಹೈಲೈಟ್ ಆಗಿದ್ದರು. ಯಾವುದೇ ವಿಷಯ ಕೊಟ್ಟರು ಚಂದವಾಗಿ ಮಾತನಾಡುತ್ತಿದ್ದರು. ಇನ್ನು, ಸದ್ಯ 7 ತರಗತಿಯಲ್ಲಿ ಓದುತ್ತಿರುವ ಈಕೆ ಈಗ 'ಕನ್ನಡದ ಕಣ್ಮಣಿ'ಯ ವಿಜೇತೆಯಾಗಿದ್ದಾರೆ.
ಟ್ರೋಫಿ ಗೆಲ್ಲದೆ ಬುಟ್ಬುತ್ತಿವಾ..! ಅಂದಿದ್ದಾರೆ 'ಕನ್ನಡದ ಕಣ್ಮಣಿ' ಸಂಹಿತಾ
ಉಳಿದಂತೆ, ಬಿಜಾಪುರದ ಹುಡುಗಿ ವರದ 1st ರನ್ನರ್ ಅಪ್, ಸಮೃಧ್ಧಿ 2nd ರನ್ನರ್ ಅಪ್, ಗುಲ್ಬರ್ಗದ ಹುಡುಗಿ ಅಮೂಲ್ಯ 2nd ರನ್ನರ್ ಅಪ್ ಆಗಿದ್ದಾರೆ. ಈ ನಾಲ್ಕು ಮಕ್ಕಳು ಕಾರ್ಯಕ್ರಮದಲ್ಲಿ ಗೆದ್ದಿದ್ದಾರೆ.
ಎಲ್ಲ ಮಕ್ಕಳು ಕೂಡ ಕೊಟ್ಟ ವಿಷಯಕ್ಕೆ ತಕ್ಕ ಹಾಗೆ ತುಂಬ ಚೆನ್ನಾಗಿ ಮಾತನಾಡುತ್ತಿದ್ದರು. ಹೀಗಾಗಿ ಯಾರು ಟ್ರೋಫಿ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಮಾತಿನ ಮಹಾಯುದ್ಧದಲ್ಲಿ ಗೆದ್ದ ಸಂಹಿತಾಗೆ ಬಹುಮಾನವಾಗಿ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
ಅಂದಹಾಗೆ, ಕನ್ನಡ ಕಿರುತೆರೆಯ ವಿನೂತನ ಕಾರ್ಯಕ್ರಮ ಇದಾಗಿತ್ತು. ಮಾತಿನ ಕಾರ್ಯಕ್ರಮವಾಗಿದ್ದ ಇಲ್ಲಿ
ಮಾತಿನ ಮಲ್ಲ ಪ್ರಾಣೇಶ್, ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ನಟ ಜಗ್ಗೇಶ್ ತೀರ್ಪುಗಾರರಾಗಿದ್ದರು.