Don't Miss!
- Automobiles ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ 'ಕಳಪೆ ಜೋಡಿ' ಮತ್ತು 'ಬೆಸ್ಟ್ ಜೋಡಿ' ಯಾರು?
Recommended Video
ಪ್ರತಿವಾರದ ಅಂತ್ಯದಲ್ಲಿ ನಾಮಿನೇಷನ್ ಗಿಂತ ಕಳಪೆ ಪರ್ಫಾಮರ್ ಯಾರು ಮತ್ತು ಬೆಸ್ಟ್ ಪರ್ಫಾಮರ್ ಯಾರು ಎಂದು ನಿರ್ಣಯ ತೆಗೆದುಕೊಳ್ಳುವುದೇ ದೊಡ್ಡ ಟಾಸ್ಕ್ ಆಗಿದೆ. ಯಾಕಂದ್ರೆ, ಈ ಹಿಂದಿನ ವಾರಗಳಲ್ಲಿ ಈ ನಿರ್ಧಾರದಿಂದ ಮನೆಯಲ್ಲಿ ಮತ್ತು ಮನೆ ಹೊರಗೆ ದೊಡ್ಡ ದೊಡ್ಡ ಚರ್ಚೆಗಳು ಆಗಿವೆ. ಹೀಗಾಗಿ ಈ ವಾರವೂ ಆ ಕುತೂಹಲ ಹಾಗೆ ಇದೆ.
ಅಂದ್ಹಾಗೆ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಜೋಡಿ ಟಾಸ್ಕ್ ನೀಡಲಾಗಿತ್ತು. ಅದರ ಅನುಸಾರ ಇಬ್ಬಿಬ್ಬರು ಸ್ಪರ್ಧಿಗಳು ಕೈಯಲ್ಲಿ ಕೋಳ ಹಾಕ್ಕೊಂಡು ಆಟವಾಡಬೇಕಿತ್ತು. ಈ ಟಾಸ್ಕ್ ನಿನ್ನೆಗೆ (ಡಿಸೆಂಬರ್ 15) ಅಂತ್ಯವಾಗಿದ್ದು, ಮನೆ ಕ್ಯಾಪ್ಟನ್ ಆಯ್ಕೆಯ ಪ್ರಕಾರ ಈ ವಾರದ ಕಳಪೆ ಬೋರ್ಡ್ ಮತ್ತು ಬೆಸ್ಟ್ ಪರ್ಫಾಮರ್ ನೀಡಲಾಯಿತು.
ಪ್ರೀತಿಯ ಸಂದೇಶ ಬೆಂಕಿಯಲ್ಲಿ ಹೊತ್ತಿ ಉರಿದಾಗ...
ಹಾಗಿದ್ರೆ, ಈ ವಾರ ಕಳಪೆ ಬೋರ್ಡ್ ಪಡೆದುಕೊಂಡ ಜೋಡಿ ಯಾರು? ಬೆಸ್ಟ್ ಪರ್ಫಾಮರ್ ನೀಡಿದ ಜೋಡಿ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ...
ಬೆಸ್ಟ್ ಜೋಡಿ
ವಾರ ಪೂರ್ತಿ ಯಶಸ್ವಿ ಆಟವಾಡಿದ ಅನುಪಮಾ ಗೌಡ ಮತ್ತು ಶ್ರುತಿ ಪ್ರಕಾಶ್ ಅವರಿಗೆ ಈ ವಾರದ ಬೆಸ್ಟ್ ಪರ್ಫಾಮರ್ ಎಂದು ಮನೆಯ ನಾಯಕಿ ಕೃಷಿ ಅವರು ಘೋಷಿಸಿದರು.
ಕಳಪೆ ಜೋಡಿ
ಅದೇ ರೀತಿ ಈ ವಾರದ ಟಾಸ್ಕ್ ನಲ್ಲಿ ಯಾವ ಆಟವನ್ನ ಗೆಲ್ಲದ ಹಾಗೂ ಕಳಪೆ ಆಟವಾಡಿದ ಸಂಯುಕ್ತ ಹೆಗಡೆ ಹಾಗೂ ಲಾಸ್ಯ ನಾಗ್ ಅವರಿಗೆ ಕಳಪೆ ಬೋರ್ಡ್ ನೀಡಿದರು.
ಮತ್ತದೇ ತಪ್ಪು ಮಾಡಿದ್ರಾ.? ಎರಡು ಪ್ಯಾಕೆಟ್ ಹಾಲು ಮುಚ್ಚಿಟ್ಟಿದ್ದು ಯಾಕೆ.?
ಕ್ಯಾಪ್ಟನ್ ಮನಗೆದ್ದ ಜೋಡಿ
ಇನ್ನು ಈ ವಾರ ಕ್ಯಾಪ್ಟನ್ ಮನಗೆದ್ದ ಜೋಡಿ ಯಾರು ಎಂದು ಬಿಗ್ ಬಾಸ್ ಕೇಳಿದ ಹಿನ್ನೆಲೆ ಕೃಷಿ ಅವರು ''ಜಗನ್ ಮತ್ತು ಜೆಕೆ'' ಅವರ ಹೆಸರು ಸೂಚಿಸಿದರು. ಅವರಿಗೆ ವಿಶೇಷ ಲಕ್ಷುರಿ ಬಜೆಟ್ ಅಂಕಗಳನ್ನ ನೀಡಲಾಯಿತು.
ಈ ವಾರ ಎಲಿಮಿನೇಟ್ ಯಾರಾಗಬಹುದು?
ಇನ್ನು ಈ ವಾರ ದಿವಾಕರ್, ಜಯಶ್ರೀನಿವಾಸನ್, ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್, ಜಗನ್ ಹಾಗೂ ಸಮೀರಾಚಾರ್ಯ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಆರು ಜನರಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂದು ಶನಿವಾರ ನಿರ್ಣಯವಾಗಲಿದೆ.