Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಕ್ರಾಂತಿ ವಿಶೇಷ: ಉದಯ ಟಿವಿಯಲ್ಲಿ 'ಮಹಾಸಂಚಿಕೆ'ಗಳ ಮಹಾಸಂಭ್ರಮ
ಈ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆಯ ಪಾಕವನ್ನೇ ಉಣಬಡಿಸುತ್ತಿದೆ ಉದಯ ಟಿವಿ. ಮನರಂಜನೆಯ ಕಾರ್ಯಕ್ರಮಗಳಲ್ಲಿ ಸದಾ ವಿಭಿನ್ನ ರೂಪವನ್ನು ಅಳವಡಿಸಿಕೊಂಡು, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉದಯ ಟಿವಿ ತನ್ನ ಧಾರಾವಾಹಿಗಳ ಮಹಾಸಂಚಿಕೆ ಪ್ರಸಾರ ಮಾಡುತ್ತಿದೆ.
ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಮಹಾಸಂಚಿಕೆಯ ರೂಪದಲ್ಲಿ ವೀಕ್ಷಕರಿಗೆ ರಸದೌತಣ ನೀಡಲಿರುವ ಧಾರಾವಾಹಿಗಳು 'ಕಾವೇರಿ' ಮತ್ತು 'ದೊಡ್ಮನೆ ಸೊಸೆ'.
'ದೊಡ್ಮನೆ ಸೊಸೆ': ಸೂರ್ಯ ಮತ್ತು ಶೃತಿ ಈಗಾಗಲೇ ದೊಡ್ಡಮ್ಮನ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿರುತ್ತಾರೆ. ತಾನು ಪ್ರೀತಿಸ್ತಿರೋ ಹುಡುಗ ಸೂರ್ಯ ಈಗ ಶೃತಿಯ ಪಾಲಾದನೆಂಬ ಹೊಟ್ಟೆ ಕಿಚ್ಚು ಚಾಂದಿನಿಗಿದೆ. ಹಾಗಾಗಿ ಶೃತಿ ಸೂರ್ಯ.. ಇಬ್ಬರಿಗೂ ದೊಡ್ಡಮ್ಮ ಮತ್ತು ಚಾಂದಿನಿಯಿಂದ ಆತಂಕವಿರುತ್ತದೆ. ಹಾಗೆಯೇ ಹಬ್ಬಕ್ಕೆ ಮನೆಯವರೆಲ್ಲ ಸೇರಿ ಸಂಕ್ರಾಂತಿ ಆಚರಿಸುತ್ತಿರುವಾಗ, ಶೃತಿ ಕೈಯಿಂದ ಪೂಜೆಯ ಪ್ರಧಾನ ಹಸುವಿಗೆ ವಿಷ ಉಣಿಸುವ ಮಸಲತ್ತನ್ನು ದೊಡ್ಡಮ್ಮ ಮತ್ತು ಚಾಂದಿನಿ ಸೇರಿ ಮಾಡಿರುತ್ತಾರೆ.
ದೊಡ್ಮನೆಯ ಸಂಪ್ರದಾಯದಲ್ಲಿ ಹಸುವನ್ನು ಕೊಂದಿರುವ ಅಪವಾದ ಶೃತಿ ಮೇಲೆ ಬರುತ್ತದೆ. ಈ ಸಮಯಲ್ಲಿ ಶೃತಿ ಮನೆಯಿಂದ ಹೊರ ಹೋಗುತ್ತಾಳೋ ಅಥವಾ ಆಗಿರೋ ಅನ್ಯಾಯಕ್ಕೆ ತಾನು ಹೊಣೆಯಲ್ಲವೆಂಬುವುದನ್ನು ಶೃತಿ ಹೇಗೆ ಸಾಬೀತು ಮಾಡುತ್ತಾಳೆ? ಎಂಬುವುದನ್ನು 'ದೊಡ್ಮನೆ ಸೊಸೆ' ಮಹಾಸಂಚಿಕೆಯಲ್ಲೇ ಕಾದು ನೋಡಬೇಕು.
'ಕಾವೇರಿ': ಮಡದಿಯೂ, ತಾಯಿಯೂ ಆಗಿರುವ ಕಾವೇರಿ ತನ್ನ ತ್ಯಾಗಮಯಿ ಸ್ವಭಾವದಿಂದಲೇ ಹೆಂಗಳೆಯರ ಮನಸೂರೆಗೊಂಡಿದ್ದಾಳೆ. ತನ್ನ ಬದುಕಿನಲ್ಲಿ ನಡೆದ ಅನಿರೀಕ್ಷಿತ ಘಟನೆಯ ನಂತರ ಮನೆ ಸೇರಿರುವ ಕಾವೇರಿ ಅವನು ಸಾಕುತ್ತಿರುವ ಮಕ್ಕಳಿಗೆ ತಾಯಿಯಾಗಿ ನಟಿಸುತ್ತಿದ್ದಾಳೆ. ಸಂತೋಷ್ ನ ಅಪ್ಪ ಮಾಡಿದ ತಪ್ಪನ್ನು ಬಯಲು ಮಾಡಿ, ಆ ಮಕ್ಕಳಿಗೆ ನ್ಯಾಯ ಕೊಡಿಸುವುದು ಕಾವೇರಿಯ ಬದುಕಿನ ಉದ್ದೇಶವೇ ಆಗಿ ಬದಲಾಗಿದೆ. ಹೀಗಿರುವಾಗ ಕಾವೇರಿಗೆ ಬಾಲ್ಯದ ಗೆಳತಿ ರಾಧಾ (ಜೋಜೋ ಲಾಲಿ) ಭೇಟಿಯಾಗ್ತಾಳೆ. ಅವಳ ಜೀವನದಲ್ಲಿ ನಡೆದ ಘಟನೆಗಳನ್ನು ಕೇಳಿ ಮರುಗುವ ಕಾವೇರಿ, ರಾಧಾ ಹಾಗೂ ಅವಳ ಪ್ರೇಮಿ ಪ್ರೀತಂನನ್ನು ಒಂದಾಗಿಸುವ ನಿರ್ಧಾರ ಮಾಡುತ್ತಾಳೆ.
ಸಂಕ್ರಾಂತಿಯ ಶುಭಮುಹೂರ್ತದಲ್ಲಿ ಅವರನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗ್ತಾಳಾ? ಮಹಾ ಸಂಚಿಕೆ ನೋಡಿ ತಿಳಿದುಕೊಳ್ಳಬೇಕು.
ಜನವರಿ 15 ರಂದು ಸೋಮವಾರ ಸಂಜೆ 6 ರಿಂದ 7:30 ರವರೆಗೆ 'ಕಾವೇರಿ' ಜೊತೆ 'ಜೋಜೋ ಲಾಲಿ'ಯ ಪಾತ್ರಗಳು ಜೊತೆಯಾಗಿ ಒಂದುವರೆ ಗಂಟೆಗಳ ಕಾಲ 'ಕಾವೇರಿ ಮಹಾಸಂಚಿಕೆ'ಯಾಗಿ ಪ್ರಸಾರವಾಗಲಿದೆ. ಹಾಗೂ ರಾತ್ರಿ 9:30 ರಿಂದ 10:30 ರವರೆಗೂ 'ದೊಡ್ಮನೆ ಸೊಸೆ' ಮಹಾಸಂಚಿಕೆ ಸಂಕ್ರಾಂತಿ ವಿಶೇಷವಾಗಿ ಬರಲಿದೆ.