Don't Miss!
- News ಲೋಕಸಭೆ ಚುನಾವಣೆ: ಕಲಬುರಗಿ ಮತದಾರರು, ವಿಧಾನಸಭಾ ಕ್ಷೇತ್ರ ಮಾಹಿತಿ
- Automobiles Mahindra Bolero: ಅಪಘಾತವಾದ ಕಾರಿಗೆ ಅದ್ದೂರಿ ಮಾಡಿಫಿಕೇಷನ್: ವಿಡಿಯೋಗೆ ವಾವ್ ಎನ್ನಲೇಬೇಕು!
- Lifestyle ನಿಮಗೆ ಬೀಳುವ ಕನಸುಗಳ ಹಿಂದಿರುವ ಅರ್ಥ, ಉದ್ದೇಶವೇನು ಗೊತ್ತಾ?
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಪ್ಟೆಂಬರ್ 18ರಿಂದ ಸರಿಗಮಪ ಚಾಂಪಿಯನ್ ಶಿಪ್ ಪ್ರಾರಂಭ
ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಸರಿಗಮಪ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದೆ. 17 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ ಸರಿಗಮಪ ಚಿತ್ರರಂಗಕ್ಕೆ ಅಪರೂಪದ ಗಾಯನ ಪ್ರತಿಭೆಗಳನ್ನು ನೀಡಿದೆ. ಇದೀಗ ಚಾಂಪಿಯನ್ ಶಿಪ್ ಗೆಲ್ಲಲು 36 ಮಂದಿ ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ನಡೆಯಲಿದ್ದು ಸಂಗೀತದ ವಿಶ್ವರೂಪ ಅನಾವರಣಗೊಳ್ಳಲಿದೆ .
ಸೆಪ್ಟೆಂಬರ್ 18ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಸರಿಗಮಪ ಚಾಂಪಿಯನ್ ಶಿಪ್ ವೀಕ್ಷಕರನ್ನು ರಂಜಿಸಲಿದೆ. ಈ ಚಾಂಪಿಯನ್ ಶಿಪ್ ಕದನದಲ್ಲಿ ಈಗಾಗಲೇ ತಮ್ಮ ಪ್ರತಿಭೆಯಿಂದ ಕರ್ನಾಟಕದ ಮನೆಮಾತಾಗಿರುವ ಪುತ್ತೂರಿನ ಅಖಿಲಾ ಪಜಿಮಣ್ಣು, ಅಂಕಿತಾ ಕುಂದು, ಬೆಂಗಳೂರಿನ ಪೃಥ್ವಿ ಭಟ್, ನೇಹಾ ಶಾಸ್ತ್ರಿ, ಧಾರವಾಡದ ಜ್ಞಾನೇಶ್ವರ, ಬೆಂಗಳೂರಿನ ಕೀರ್ತನ್ ಹೊಳ್ಳ, ಹಾವೇರಿಯ ಹನುಮಂತ ಲಮಾಣಿ, ಮೈಸೂರಿನ ವಿಜೇತ್,, ಅಶ್ವಿನ್ ಶರ್ಮಾ, ಸೇರಿದಂತೆ ಒಟ್ಟು 36 ಹಾಡುಗಾರರಿರಲಿದ್ದಾರೆ.
ಮಹಿಳೆಯರು ಬೆಡ್ ರೂಮ್, ಬಾತ್ ರೂಮ್ನಲ್ಲಿ ಹಾಗೆ...ಹೊರಗೆ ಹೀಗೆ!
ಕರ್ನಾಟಕದ ಹೆಸರಾಂತ ಸಂಗೀತಗಾರರಾದ ನಂದಿತಾ, ಹೇಮಂತ್, ಅನುರಾಧಾ ಭಟ್, ಡಾ .ಸುಚೇತನ್ ರಂಗಸ್ವಾಮಿ, ಲಕ್ಷ್ಮೀ ನಾಗರಾಜ್ ಮತ್ತು ಇಂದು ನಾಗರಾಜ್ ಅವರು ಮೆಂಟರ್ ಗಳಾಗಿರುವುದಲ್ಲದೇ 6 ಚಾಂಪಿಯನ್ನರ ತಂಡಗಳಿಗೆ ಮಾರ್ಗದರ್ಶಕರು ಆಗಿರುತ್ತಾರೆ, ಈ 6 ತಂಡಗಳ ನಡುವೆ ಸಂಗೀತ ಸಮರ ನಡೆಯುತ್ತದೆ.
ಎಂದಿನಂತೆ ಮಹಾಗುರು ಹಂಸಲೇಖ ಅವರೊಂದಿಗೆ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ತೀರ್ಪುಗಾರರಾಗಿರುತ್ತಾರೆ. ಅನುಶ್ರೀ ತಮ್ಮ ಲವಲವಿಕೆಯ ಮಾತಿನ ನಿರೂಪಣೆಯಿಂದ ಕಾರ್ಯಕ್ರಮದ ಕಳೆ ಹೆಚ್ಚಿಸುತ್ತಾರೆ.
ಈ ಬಾರಿಯ ವರ್ಣರಂಜಿತ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆ ಸಿಂಫೊನಿ ರೀತಿಯ 40 ಬಗೆಯ ವಾದ್ಯಗೋಷ್ಠಿ ಹೊಂದಿದ್ದು ಕನ್ನಡ ಕಿರುತೆರೆಯಲ್ಲೇ ಪ್ರಥಮ ಪ್ರಯತ್ನವಾಗಿದೆ. ಮತ್ತೊಂದು ವಿಶೇಷವೆಂದರೆ ಕರ್ನಾಟಕದ ಅಚ್ಚುಮೆಚ್ಚಿನ ಈ ಕಾರ್ಯಕ್ರಮವನ್ನು ಜೀ ವಾಹಿನಿ ತಾಯಿ ಶಾರದಾಂಬೆಗೆ ಅರ್ಪಿಸುತ್ತಿದೆ .
ಸರಿಗಮಪ ಕಾರ್ಯಕ್ರಮ ಜೀ ಕನ್ನಡಕ್ಕೆ ಕಿರೀಟದಂತಿದ್ದು 15 ವರ್ಷಗಳ ಯಶಸ್ವಿ 17ಸೀಸನ್ ಗಳ ಫಲವಾಗಿ 36 ಘಟಾನುಘಟಿ ಹಾಡುಗಾರರು ಸಂಗೀತ ಸಮರದಲ್ಲಿದ್ದಾರೆ. ಉತ್ತಮರನ್ನು ಅತ್ಯುತ್ತಮರನ್ನಾಗಿಸಲು ಕರ್ನಾಟಕದ 6 ಅತ್ಯದ್ಭುತ ಸಂಗೀತಗಾರರು ಮೆಂಟರ್ ಗಳಾಗಿ ಜೊತೆಯಾಗಿದ್ದಾರೆ .ಹಿಂದೆದೂ ಕಂಡಿರದ ನಾದಲೋಕ ಸೃಷ್ಟಿಸಲು ಭಾರತದ 40 ಶ್ರೇಷ್ಟ ವಾದ್ಯಗಾರರ ಕೈಚಳಕವಿರಲಿದೆ. ತಾಂತ್ರಿಕ, ಭಾವನಾತ್ಮಕ, ಸವಿನೆನಪುಗಳ ಜೊತೆಗೆ ಸಂಗೀತಮಯವಾಗಿ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆ ಶ್ರೀಮಂತವಾಗಿರಲಿದೆ. ರಾಘವೇಂದ್ರ ಹುಣಸೂರು - ಜೀ ಕನ್ನಡ ಹಾಗೂ ಜೀ ಪಿಚ್ಚರ್ ಬ್ಯುಸಿನೆಸ್ ಹೆಡ್
ಇದೇ ಸೆಪ್ಟೆಂಬರ್ 18ರಿಂದ ಶನಿವಾರ ಮತ್ತು ಭಾನುವಾರ ಸಂಜೆ ರಾತ್ರಿ 7.30ಕ್ಕೆ ಸರಿಗಮಪ ಚಾಂಪಿಯನ್ ಶಿಪ್ ವೀಕ್ಷಕರನ್ನು ರಂಜಿಸಲು ಬರುತ್ತಿದೆ ನಿಮ್ಮ ಜೀ ಕನ್ನಡದಲ್ಲಿ.