Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಿಗಮಪ ಲಕ್ಷ್ಮಿಗೆ ದೊಡ್ಡ ಆಫರ್ ನೀಡಿದ ಹಂಸಲೇಖ
'ಸರಿಗಮಪ ಸೀಸನ್ 14' ಕಾರ್ಯಕ್ರಮ ನೋಡಿದ ವೀಕ್ಷಕರಿಗೆ ಮರೆಯಲಾಗದ ಸ್ಪರ್ಧಿಯಾಗಿದ್ದು ಲಕ್ಷ್ಮಿ. ಬೆಳಗಾವಿಯ ಲಕ್ಷ್ಮಿ ತಮ್ಮ ಹಾಡಿನ ಮೂಲಕ ಮೋಡಿ ಮಾಡಿದ್ದರು. ಈಗ ಲಕ್ಷ್ಮಿ ಮತ್ತೆ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಈ ಬಾರಿಯ ಸರಿಗಮಪ ಸಂಚಿಕೆಗೆ ಹಳೆಯ ಸ್ಪರ್ಧಿಗಳ ಆಗಮನ ಆಗಿದೆ. ಈ ಸೀಸನ್ ಸ್ಪರ್ಧಿಗಳ ಜೊತೆಗೆ ಹಳೆಯ ಸೀಸನ್ ಸ್ಪರ್ಧಿಗಳು ಹಾಡು ಹಾಡಿದ್ದಾರೆ. ಮೊನ್ನಮ್ಮನ ಹಾಗೂ ಲಕ್ಷ್ಮಿ ಜುಗಲ್ ಬಂದಿ ಇಲ್ಲಿ ನಡೆಯಿತು.
ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ
ಸರಿಗಮಪ ಕಾರ್ಯಕ್ರಮದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದ ಲಕ್ಷ್ಮಿ, ಆ ಶೋ ನಿಂದ ಹೊರ ಹೋದ ಬಳಿಕ ತಮ್ಮ ಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸಿದರು. ಜೊತೆಗೆ ಹಂಸಲೇಖ ಅವರ ಕಡೆಯಿಂದ ಲಕ್ಷ್ಮಿ ಭವಿಷ್ಯಕ್ಕೆ ದೊಡ್ಡ ಬೆಂಬಲ ಸಿಕ್ಕಿತು.
250ಕ್ಕೂ ಹೆಚ್ಚಿನ ಕಾರ್ಯಕ್ರಮ ನೀಡಿದ ಲಕ್ಷ್ಮಿ
ಸರಿಗಮಪ ಕಾರ್ಯಕ್ರಮದಲ್ಲಿ ಲಕ್ಷ್ಮಿ ಫೈನಲ್ ಹಂತಕ್ಕೆ ಆಯ್ಕೆ ಆಗಲಿಲ್ಲ. ಆದರೆ, ತನ್ನ ಗಾಯಕನ ಮೂಲಕ ಈಕೆ ಸಾಕಷ್ಟು ಫೇಮಸ್ ಆಗಿದ್ದಳು. ಈ ಜನಪ್ರಿಯತೆಯಿಂದ ಲಕ್ಷ್ಮಿಗೆ ಒಳ್ಳೆಯ ಅವಕಾಶಗಳು ಸಿಕ್ಕವು. ಸರಿಗಮಪ ದಿಂದ ಹೊರ ಬಂದ ಮೇಲೆ ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದರು. ಈಗ ಅವರ ಶೋಗಳ ಸಂಖ್ಯೆ 250ರ ಗಡಿ ದಾಟಿದೆ.
ಅಮ್ಮನೇ ಮಹಾಗುರು ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ
ಕಾರ್ಯಕ್ರಮಗಳ ಜೊತೆಗೆ ಸಂಗೀತ ಕಲಿಕೆ
ಲಕ್ಷ್ಮಿ ಸರಿಗಮಪ ಕಾರ್ಯಕ್ರಮಕ್ಕೆ ಬಂದಾಗ ಸಂಗೀತ ಕಲಿತಿರಲಿಲ್ಲ. ಆದರೂ, ಪ್ರಯತ್ನ ಮಾಡಿ ಒಂದು ಹಂತದವರೆಗೆ ಮುನ್ನಡೆದರು. ಕಾರ್ಯಕ್ರಮದ ಬಳಿಕ ಸಂಗೀತದ ಕಲಿತೆ ಶುರು ಮಾಡಿದ್ದಾರೆ. ತಮ್ಮ ಕಾರ್ಯಕ್ರಮಗಳ ಜೊತೆಗೆ ಸಂಗೀತ ಅಭ್ಯಾಸವನ್ನು ಮುಂದುವರೆಸಿದ್ದಾರೆ.
ಓದು, ಕೆಲಸ ಎರಡನ್ನೂ ನೀಡುತ್ತೇವೆ ಎಂದ ಹಂಸಲೇಖ
ಲಕ್ಷ್ಮಿ ಬೆಳವಣಿಗೆ ಗಮನಿಸಿದ ಹಂಸಲೇಖ ಆಕೆಗೆ ಸಂಗೀತದಲ್ಲಿಯೇ ಮುಂದುವರೆಯುವ ಸಲಹೆ ನೀಡಿದರು. ಆಕೆಗೆ ಬ್ಯಾಚುಲರ್ ಆಫ್ ಮ್ಯೂಸಿಕ್ ಮತ್ತು ಮಾಸ್ಟರ್ ಆಫ್ ಮ್ಯೂಸಿಕ್ ಕೋರ್ಸ್ ಅನ್ನು ಉಚಿತವಾಗಿ ಹೇಳಿಕೊಡುವುದಾಗಿ ತಿಳಿಸಿದರು. ಕೋರ್ಸ್ ಮುಗಿದ ಬಳಿಕ ಒಂದು ಕೆಲಸ ನೀಡುತ್ತೇನೆ, ಆ ಕೆಲಸಕ್ಕೆ ಪ್ರಾರಂಭದ ಸಂಬಳ 25 ಸಾವಿರ ಇರುತ್ತದೆ ಎಂಬ ಭರವಸೆ ನೀಡಿದರು.
ಮೊನ್ನಮ್ಮ ಹಾಗೂ ಸಂಗೀತ ಜೊತೆಗೆ ಹಾಡು
''ಯಾವ ದೇಶದ ಗಂಡು ಇವನು...'' ಹಾಡು ಲಕ್ಷ್ಮಿಗೆ ದೊಡ್ಡ ಜನಪ್ರಿಯತೆ ನೀಡಿತ್ತು. ಅದೇ ಹಾಡನ್ನು ಈಗ ಮೊನ್ನಮ್ಮ ಹಾಗೂ ಸಂಗೀತ ಜೊತೆಗೆ ಲಕ್ಷ್ಮಿ ಹಾಡಿದ್ದಾರೆ. ಲಕ್ಷ್ಮಿಯ ಸಂಗೀತ ಪಯಣ ಮೂರು ಜನ ತೀರ್ಪುಗಾರರಿಗೆ ಬಹಳ ಖುಷಿ ನೀಡಿದೆ. ಲಕ್ಷ್ಮಿ ಹಾಡಿಗೆ ಹಂಸಲೇಖ ಗೋಲ್ಟನ್ ಬಜಾರ್ ನೀಡಿದ್ದಾರೆ. ಲಕ್ಷ್ಮಿಗೆ ಈ ಬಾರಿ ಸ್ಪರ್ಧಿ ಗಳ ಪೈಕಿ ಸಂಗೀತ ಅಂದ್ರೆ ಬಹಳ ಇಷ್ಟವಂತೆ.