Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ
Recommended Video
ಜೀ-ಕನ್ನಡದಲ್ಲಿ ಆರಂಭವಾಗಿರುವ 'ಸರಿಗಮಪ' 14ನೇ ಆವೃತ್ತಿ ಮೊದಲ ವಾರವೇ ಗಮನ ಸೆಳೆದಿದೆ. ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಅದರಲ್ಲೂ, ಲಕ್ಷ್ಮಿ ರಾಮಪ್ಪ ಎಂಬ 14 ವರ್ಷದ ಬಾಲಕಿ ಈ ಆವೃತ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಜನಪದ ಗೀತೆಯ ಮೂಲಕ ಆಡಿಷನ್ ಕೊಟ್ಟ ಲಕ್ಷ್ಮಿ, ತ್ರಿವಳಿ ಜಡ್ಜ್ ಗಳನ್ನ ಮೂಕವಿಸ್ಮಿತರನ್ನಾಗಿಸಿದರು. ಈಕೆಯ ಹಾಡು ಕೇಳಿ ಸ್ವತಃ ಹಂಸಲೇಖ ಅವರೇ ಹಾಡಿ ಕುಣಿದಿದ್ದಾರೆ.
ಸಾಕಿದ ಕರು ಮಾರಿ 'ಸರಿಗಮಪ' ವೇದಿಕೆ ಏರಿದ ಮಂಡ್ಯದ ಬಡ ಹುಡುಗ!
ಅಂದ್ಹಾಗೆ, ಲಕ್ಷ್ಮಿ ಸಣ್ಣ ಹಳ್ಳಿಯಿಂದ ಬಂದ ಬಾಲಕಿ. ಯಾವುದೇ ಸಂಗೀತ ಕಲಿತಿಲ್ಲ. ಆದ್ರೆ, ಹಾಡು ಮಾತ್ರ ಅದ್ಭುತವಾಗಿ ಹಾಡಬಲ್ಲರು. 'ಸರಿಗಮಪ' ವೇದಿಕೆಗೆ ಲಕ್ಷ್ಮಿ ಬರಲು ಒಂದು ರೋಚಕ ಕಥೆ ಇದೆ. ಏನದು? ಮುಂದೆ ಓದಿ....
ಸಣ್ಣ ಕುಟುಂಬದ ಕುಡಿ
9ನೇ ತರಗತಿ ಓದುತ್ತಿರುವ ಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿ. ಇವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಲಕ್ಷ್ಮಿಗೊಬ್ಬರು ಅಣ್ಣ ಇದ್ದಾರೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗೆದ್ದ 'ನಾಗಿಣಿ' ಜೋಡಿಗೆ ಸಿಕ್ಕ ಬಹುಮಾನ ಏನು.?
ಸಂಗೀತ ಅಭ್ಯಾಸವಿಲ್ಲ
ಅಂದ್ಹಾಗೆ, ಲಕ್ಷ್ಮಿ ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಯಾವುದೇ ತರಗತಿಗೂ ಹೋಗಿಲ್ಲ. ಮೊಬೈಲ್ ನಲ್ಲೇ ಹಾಡಿ ಕೇಳಿ, ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.
'ಸರಿಗಮಪ'ಗೆ ಸಿಕ್ಕಿಯೇ ಬಿಟ್ಟರು 'ಮಹಾಗುರು'ಗಳು.!
'ಸರಿಗಮಪ'ಗೆ ಬರಲು ಸ್ಪೂರ್ತಿ ಯಾರು?
'ಸರಿಗಮಪ' ಕಾರ್ಯಕ್ರಮವನ್ನ ನೋಡುತ್ತಿದ್ದ ಲಕ್ಷ್ಮಿ ಅವರ ಅಪ್ಪ-ಅಮ್ಮ ''ನಮ್ಮ ಮಗಳು ಅಲ್ಲಿ ಹಾಡಿದ್ರೆ ಚೆನ್ನಾಗಿರುತ್ತೆ'' ಎಂದುಕೊಳ್ಳುತ್ತಿದ್ದರಂತೆ. ಅದನ್ನ ಕೇಳಿದ ಲಕ್ಷ್ಮಿಗೆ 'ಸರಿಗಮಪ' ವೇದಿಕೆಗೆ ಬರಲು ಛಲ ಹುಟ್ಟಿತು. ಈಗ ಸಾಧಿಸಲು ಸಿದ್ದವಾಗಿ ನಿಂತಿದ್ದಾರೆ.
ಆಡಿಷನ್ ಗೆ ಅಪ್ಪ-ಅಮ್ಮ ಬರಲಿಲ್ಲ
ಲಕ್ಷ್ಮಿ ಅವರು ಸರಿಗಮಪ ಆಡಿಷನ್ ಗೆ ಅವರ ಅಪ್ಪ ಮತ್ತ ಅಮ್ಮ ಬರಬೇಕಿತ್ತು. ಆದ್ರೆ, ಬೆಳಗಾವಿಯಿಂದ ಯಶವಂತಪುರವರೆಗೂ ಬಂದಿದ್ದರು. ಆದ್ರೆ, ಸ್ಟುಡಿಯೋಗೆ ಬರಲು ದಾರಿ ಗೊತ್ತಾಗದೇ ವಾಪಸ್ಸು ಹೋಗಿದ್ದಾರೆ. ಮುಂದಿನ ಸಲ ಅವರನ್ನ ಕರೆಯಿಸುವ ಮಾತು ನೀಡಿದೆ ಜೀ-ವಾಹಿನಿ.