'ಸರಿಗಮಪ' ಕ್ವಾರ್ಟರ್ ಫೈನಲ್ ಹಂತ ತಲುಪುವವರು ಯಾರು?
Recommended Video

ಜೀ ಕನ್ನಡ ವಾಹಿನಿಯ 'ಸರಿಗಮಪ' ಸೀಸನ್ 14 ಕಾರ್ಯಕ್ರಮ ದೊಡ್ಡ ಜನಪ್ರಿಯತೆ ಗಳಿಸಿದೆ. ಈ ಕಾರ್ಯಕ್ರಮ ಇದೀಗ ಕ್ವಾಟರ್ ಫೈನಲ್ ಹಂತಕ್ಕೆ ಬಂದಿದೆ. ಇದೇ ಶನಿವಾರ ಮತ್ತು ಭಾನುವಾರ ಕ್ವಾರ್ಟರ್ ಫೈನಲ್ ಹಂತಕ್ಕೆ ಆಯ್ಕೆ ಆಗುವ ಮಕ್ಕಳು ಯಾರು ಎಂಬುದು ತಿಳಿಯಲಿದೆ.
ಈ ಕಾರ್ಯಕ್ರಮದ ದೊಡ್ಡ ಹೈಲೈಟ್ ಅಂದರೆ ಅಲ್ಲಿರುವ ಮಕ್ಕಳು. ಒಬ್ಬೊಬ್ಬರು ಕೂಡ ಇಷ್ಟು ದಿನ ತಮ್ಮ ಅಮೋಘ ಕಂಠಸಿರಿ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಒಬ್ಬರಿಗೆ ಇನ್ನೊಬ್ಬರು ಪೈಪೋಟಿ ನೀಡುವಂತೆ ಹಾಡುತ್ತಿದ್ದಾರೆ. ಎಷ್ಟೋ ಬಾರಿ ತೀರ್ಪುಗಾರರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಅವರೇ ಮಕ್ಕಳು ಹಾಡು ಕೇಳಿ ಯಾರನ್ನು ಆಯ್ಕೆ ಮಾಡುವುದು ಎಂದು ಚಿಂತೆ ಮಾಡುತ್ತಾರೆ.
ಇನ್ನು ಸರಿಗಮಪ ಕಾರ್ಯಕ್ರಮದಲ್ಲಿ ಪ್ರತಿ ವಾರ ಎಲಿಮಿನೇಷನ್ ಇರುವುದಿಲ್ಲ. ಆದರೆ ಈ ಸಂಚಿಕೆಯಲ್ಲಿ ಟಾಪ್ ಐದು ಮಕ್ಕಳನ್ನು ಆಯ್ಕೆ ಮಾಡಲೇ ಬೇಕಾಗಿದೆ. ಇನ್ನೊಂದು ಈ ಕಾರ್ಯಕ್ರಮ ನೋಡುವ ವೀಕ್ಷಕರಿಗೆ ಸಹ ದೊಡ್ಡ ನಿರೀಕ್ಷೆ ಇದೆ.

ಇದೇ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುವ ಈ ಸಂಚಿಕೆಯಲ್ಲಿ ಅತಿಥಿಗಳಾಗಿ 'ರಾಂಬೋ 2' ಚಿತ್ರತಂಡ ಆಗಮಿಸಿದೆ. ನಟ ಶರಣ್, ನಟಿ ಆಶಿಕಾ ರಂಗನಾಥ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮಕ್ಕಳ ಹಾಡನ್ನು ಎಂಜಾಯ್ ಮಾಡಿದ್ದಾರೆ.


Click it and Unblock the Notifications











