Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ಶನಿವಾರದಿಂದ ಮತ್ತೆ ಜೀ ಕನ್ನಡದಲ್ಲಿ 'ಸರಿಗಮಪ' ಶುರು
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಸರಿಗಮಪ' ಮತ್ತೆ ಶುರು ಆಗುತ್ತಿದೆ. ಸೀಸನ್ 13ರ ಅದ್ಬುತ ಯಶಸ್ಸಿನ ನಂತರ ಈಗ ಸೀಸನ್ 14 ಪ್ರಾರಂಭವಾಗುತ್ತಿದೆ. ಇದೇ ಶನಿವಾರ ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರ ಆಗಲಿದೆ.
'ಸರಿಗಮಪ'ಗೆ ಸಿಕ್ಕಿಯೇ ಬಿಟ್ಟರು 'ಮಹಾಗುರು'ಗಳು.!
ಈ ಬಾರಿಯ ಕಾರ್ಯಕ್ರಮದ ದೊಡ್ಡ ಹೈಲೆಟ್ ಅಂದರೆ ನಾದಬ್ರಹ್ಮ ಹಂಸಲೇಖ. 'ಸರಿಗಮಪ' ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರುತ್ತಿದ್ದ ಹಂಸಲೇಖ ಅವರು ಈ ಸೀಸನ್ ನಲ್ಲಿ ಮಹಾ ಗುರುಗಳಾಗಿದ್ದಾರೆ. ಅದ್ದರಿಂದ ಪ್ರತಿ ಸಂಚಿಕೆಯಲ್ಲಿಯೂ ಹಂಸಲೇಖ ಇರುತ್ತಾರೆ. ಈಗಾಗಲೇ ಹಂಸಲೇಖ ಅವರ ಸರಿಗಮಪ ಪ್ರೋಮೋ ರಿಲೀಸ್ ಆಗಿ ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಹಂಸಲೇಖ ಆಗಮನದ ನಂತರ ಈ ಕಾರ್ಯಕ್ರಮದ ತೂಕ ಹೆಚ್ಚಾಗಿದೆ.
ಉಳಿದಂತೆ ಗಾಯಕ ವಿಜಯ್ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. ಕಳೆದ ಬಾರಿ ದೊಡ್ಡವರಿಗೆ ಮೀಸಲಾಗಿದ್ದ ಕಾರ್ಯಕ್ರಮ ಈ ಬಾರಿ ಮಕ್ಕಳಿಗೆ ಸೀಮಿತವಾಗಿದೆ. ಈ ಬಾರಿಯ ಶೋ ವನ್ನು ಮಕ್ಕಳ ಪೋಷಕರಿಗಾಗಿ ಅರ್ಪಣೆ ಮಾಡಿರುವುದು ಮತ್ತೊಂದು ವಿಶೇಷ ಅಂತ ಹೇಳಬಹುದು. ಅಂದಹಾಗೆ, 'ಸರಿಗಮಪ' ಸೀಸನ್ 14 ಕಾರ್ಯಕ್ರಮ ಇದೇ ಶನಿವಾರದಿಂದ ಸಂಜೆ 7-30ಕ್ಕೆ ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.