Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಶುರುವಾಯ್ತು ಸರಿಗಮಪ ಲಿಟಲ್ ಚಾಂಪ್ಸ್
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಸೀಸನ್ 15 ಕಳೆದ ವಾರ ಮುಗಿದ್ದಿದ್ದು, ಈ ವಾರದಿಂದ ಸೀಸನ್ 16 ಶುರುವಾಗಿದೆ. ನಿನ್ನೆಯಿಂದ ಕಾರ್ಯಕ್ರಮದ ಪ್ರಸಾರ ಪ್ರಾರಂಭವಾಗಿದೆ.
ಈ ಬಾರಿಯೂ ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಇದ್ದಾರೆ. ನಾದಬ್ರಹ್ಮ ಹಂಸಲೇಖ ಮಹಾಗುರುಗಳಾಗಿದ್ದಾರೆ. ಅನುಶ್ರೀ ನಿರೂಪಣೆ ಈ ಸೀಸನ್ ನಲ್ಲಿಯೂ ಮುಂದುವರೆಯಲಿದೆ.
'ಸರಿಗಮಪ ಸೀಸನ್ 15'ರ ವಿನ್ನರ್ ಆದ ಕ್ಲಾಸಿಕಲ್ ಕಿಂಗ್ ಕೀರ್ತನ್ ಹೊಳ್ಳ
ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಆಡಿಷನ್ ನಡೆದಿದ್ದು, ಉತ್ತಮ ಗಾಯಕ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. 5 ರಿಂದ 14 ವಯಸ್ಸಿನ ಮಕ್ಕಳು ಈ ಬಾರಿ ಹಾಡಲಿದ್ದಾರೆ.
ಈ ಬಾರಿಯೂ ಕಾರ್ಯಕ್ರಮದಲ್ಲಿ ಬೇರೆ ಬೇರೆ ಹಿನ್ನಲೆಯ ಮಕ್ಕಳು ಭಾಗಿಯಾಗಿದ್ದಾರೆ. ಮೆಗಾ ಆಡಿಷನ್ ನಲ್ಲಿಯೇ ಮಕ್ಕಳು ಸೊಗಸಾಗಿ ಹಾಡುತ್ತಿದ್ದಾರೆ.
ಕೀರ್ತನ್, ಹನುಮಂತಣ್ಣನಿಗೆ ಅನುಶ್ರೀ ಅಭಿನಂದನೆ
ಅಂದಹಾಗೆ, ಕಳೆದ ಬಾರಿಯ ಸರಿಗಮಪ ಸೀಸನ್ 15ರಲ್ಲಿ ಕೀರ್ತನ್ ಹೊಳ್ಳ ಹಾಗೂ ಹನುಮಂತಣ್ಣ ವಿಜೇತರಾಗಿದ್ದಾರೆ.