Sathya: ಬಾಲನಿಗೆ ಶಾಕ್ ಕೊಟ್ಟ ದಿವ್ಯಾ : ಸತ್ಯ ಹೇಳುತ್ತಾನಾ ಬಾಲ..?
ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪ್ರೀತಿಯ ಲೋಕದಲ್ಲಿ ತೇಲಾಡುತ್ತಿದ್ದಾನೆ. ಸತ್ಯಳಿಗೆ ಪ್ರಪೋಸ್ ಮಾಡಬೇಕು ಎಂದು ಬಯಸಿದ್ದಾನೆ. ಆದರೆ, ಹೇಗೆ ಎಂಬುದು ತಿಳಿದಿಲ್ಲ. ಹೀಗಾಗಿ ಕಾರ್ತಿಕ್ ಪ್ರತಿಯೊಬ್ಬರ ಬಳಿಯೂ ಪ್ರಪೋಸ್ ಮಾಡಲು ಐಡಿಯಾ ಹುಡುಕುತ್ತಿದ್ದಾನೆ. ಇನ್ನು ಕಾರ್ತಿಕ್ ಒದ್ದಾಡುತ್ತಿರುವುದನ್ನು ನೋಡಿಕೊಂಡು ಕೂಡ ಸುಮ್ಮನಿದ್ದಾಳೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಸತ್ಯ, ಕಾರ್ತಿಕ್ ಕಥೆ.
ಕಾರ್ತಿಕ್ಗೆ ಪ್ರಪೋಸ್ ಮಾಡುವುದು ಹೇಗೆ ಎಂದು ಯೋಚಿಸಿ ಯೋಚಿಸಿ ಸಾಕಾಗಿದೆ. ತಿಂಡಿಗೆ ಬಂದ ಕಾರ್ತಿಕ್ ಎಲ್ಲರ ಬಳಿಯೂ ಪ್ರಪೋಸ್ ಮಾಡುವುದು ಹೇಗೆ ಎಂದು ಕೇಳುತ್ತಾನೆ. ಆಗ ಒಬ್ಬೊಬ್ಬರು ಒಂದೊಂದು ಐಡಿಯಾ ಕೊಡುತ್ತಾರೆ. ಊರ್ಮಿಳಾ ಪತ್ರ ಬರೆಯುವಂತೆ ಹೇಳುತ್ತಾಳೆ. ರಿತು, ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡಿ ಪ್ರಪೋಸ್ ಮಾಡಲು ಹೇಳುತ್ತಾಳೆ. ಕೀರ್ತನಾ ಡೈಮೆಂಡ್ ರಿಂಗ್, ಲಾಂಗ್ ರೈಡ್, ಕಾಸ್ಟ್ಲೀ ಕಾರ್ ಅನ್ನು ಗಿಫ್ಟ್ ಮಾಡಿ, ಸರ್ಪ್ರೈಸ್ ಆಗಿ ಪ್ರಪೋಸ್ ಮಾಡಲು ಸೂಚಿಸುತ್ತಾಳೆ.

ಕೀರ್ತನಾ ನೀಡಿದ ಐಡಿಯಾಗೆ ಎಲ್ಲರೂ ನಗುತ್ತಾರೆ. ಬರೀ ಮನೆ, ಆಸ್ತಿ, ಕಾರ್ ಅಂತಹ ಹಣ ಖರ್ಚು ಮಾಡಿ ಪ್ರಪೋಸ್ ಮಾಡುವುದಲ್ಲ. ಪ್ರೀತಿ ಮನಸ್ಸಿನಿಂದ ಹುಟ್ಟಬೇಕು ಎಂದು ಬುದ್ಧಿ ಹೇಳುತ್ತಾರೆ. ಇದರಿಂದ ಕೀರ್ತನಾಳಿಗೆ ಸ್ವಲ್ಪ ಇರಿಟೇಟ್ ಆಗುತ್ತದೆ. ಬಳಿಕ ಕಾರ್ತಿಕ್ ಮತ್ತು ಸತ್ಯ, ರಾಯರು ಹಾಗೂ ಸೀತಮ್ಮನ ಲವ್ ಸ್ಟೋರಿಯನ್ನು ಕೇಳಲು ಬಯಸುತ್ತಾರೆ.
ಪ್ರೀತಿಯ ಭರವಸೆಯಲ್ಲಿ ರಾಕೇಶ್
ಇತ್ತ ರಾಕೇಶ್ಗೆ ರಿತು ಮೇಲಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಜೊತೆಗೆ ತನ್ನ ಓದನ್ನು ಕೂಡ ಮುಂದುವರಿಸಲು ಮನಸ್ಸು ಮಾಡಿದ್ದಾನೆ. ಚೆನ್ನಾಗಿ ಓದಿ, ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ತೆಗೆದುಕೊಳ್ಳಬೇಕು. ಬಳಿಕ ಒಳ್ಳೆಯ ಕೆಲಸವನ್ನ ಪಡೆಯಬೇಕು. ತನ್ನ ಕಾಲಿನ ಮೇಲೆ ನಿಂತು ನಂತರವಷ್ಟೇ ರಿತುಳನ್ನು ಮದುವೆಯಾಗಬೇಕು ಎಂದು ಆಸೆ ಪಟ್ಟಿದ್ದಾನೆ.
ಇದೇ ವಿಚಾರವನ್ನು ಹುಡುಗರ ಜೊತೆಯೂ ಹಂಚಿಕೊಳ್ಳುತ್ತಾನೆ. ಆಗ ಹುಡುಗರು ಅಕಸ್ಮಾತ್ ರಿತುಳನ್ನು ನಿನಗೆ ಕೊಟ್ಟು ಮದುವೆ ಮಾಡಲು ಅವರ ಮನೆಯಲ್ಲಿ ಒಪ್ಪದಿದ್ದರೆ ಏನು ಮಾಡುತ್ತೀಯಾ ಎಂದು ಕೇಳುತ್ತಾರೆ. ಅದಕ್ಕೆ ರಾಕಿ, ಸತ್ಯ ಇದ್ದಾಳೆ. ಅವಳೇ ಮುಂದೆ ನಿಂತು ನಮ್ಮ ಮದುವೆ ಮಾಡಿಸುತ್ತಾಳೆ ಎಂದು ಭರವಸೆಯಿಂದ ಹೇಳುತ್ತಾನೆ.

ಬಾಲನಿಗೆ ಊಟ ಬಡಿಸಿದ ದಿವ್ಯಾ
ದಿವ್ಯಾ ಯಾವುದೋ ಲೆಕ್ಕಾಚಾರ ಹಾಕಿಕೊಂಡು ಬಾಲನ ಮೇಲೆ ಹೆಚ್ಚಿನ ಪ್ರೀತಿ ಕಾಳಜಿಯನ್ನು ತೋರಿಸುತ್ತಿರುತ್ತಾಳೆ. ಭೀಮನ ಅಮಾವಾಸ್ಯೆ ಹಿನ್ನೆಲೆ ಪಾದ ಪೂಜೆ ಮಾಡಿದ್ದು, ಈಗ ಬಲವಂತ ಮಾಡಿ ಊಟಕ್ಕೆ ಕರೆದುಕೊಂಡು ಬಂದಿದ್ದಾಳೆ. ತಾನೇ ಊಟ ಬಡಿಸಿ, ತುಪ್ಪ, ಉಪ್ಪಿನಕಾಯಿ ಬಡಿಸಿ, ತನ್ನ ಕೈಯಾರ ಅನ್ನ ಹಾಗೂ ಸಾಂಬಾರ್ ಕಲಸಿಕೊಟ್ಟಿದ್ದಾಳೆ. ಇದನ್ನೆಲ್ಲಾ ನೋಡಿ ಜಾನಕಿ, ಗಿರಿಜಾಳಿಗೆ ಶಾಕ್ ಆಗಿದ್ದಕ್ಕಿಂತ ಬಾಲನಿಗೆ ಹೆಚ್ಚು ಗಾಬರಿಯಾಗಿದೆ. ನನ್ನನ್ನು ಬಲಿ ಕೊಡುವುದಕ್ಕೇ ದಿವ್ಯಾ ಹೀಗೆಲ್ಲಾ ಮಾಡುತ್ತಿದ್ದಾಳೆ ಎಂದು ಭಯಗೊಂಡಿದ್ದಾನೆ.
ಬಾಲನಿಗೆ ಚೋಕ್ ಕೊಟ್ಟ ದಿವ್ಯಾ
ಇನ್ನು ಬೆಳ್ಳಂ ಬೆಳಗ್ಗೆ ಬೆಡ್ ಕಾಫಿ ತಂದುಕೊಟ್ಟ ದಿವ್ಯಾ, ಬಾಲನಿಗೆ ಗ್ರಹಚಾರ ಬಿಡಿಸಲು ಮುಂದಾಗಿದ್ದಾಳೆ. ಬಾಲ ಕೊಡಿಸಿದ ನೆಕ್ಲೇಸ್, ಉಂಗುರವನ್ನು ತಂದು ಅವನ ಮುಂದೆ ಇಟ್ಟಿದ್ದಾಳೆ. ಬಾಲ ತನ್ನ ಕಷ್ಟಕ್ಕಾಗಿ ಉಪಯೋಗವಾಗಲಿ ಎಂದು ತಂದಿಟ್ಟಿದ್ದಾಳೆ ಎಂದು ತಪ್ಪು ಭಾವಿಸುತ್ತಾನೆ. ನೀನು ಎಷ್ಟು ಒಳ್ಳೆಯವಳು ಎನ್ನುತ್ತಾನೆ. ಆದರೆ, ದಿವ್ಯಾ ಬೈದು, ಇದೆಲ್ಲಾ ನಿನ್ನ ಬಳಿ ಹೇಗೆ ಬಂತು ಅಂತ ಹೇಳು ಎಂದು ಕೇಳುತ್ತಾನೆ. ಇದರಿಂದ ಬಾಲನಿಗೆ ಶಾಕ್ ಆಗುತ್ತದೆ.


Click it and Unblock the Notifications











