twitter
    For Quick Alerts
    ALLOW NOTIFICATIONS  
    For Daily Alerts

    Sathya Serial: ದೊಡ್ಡಪ್ಪನ ಬಳಿ ಸಿಕ್ಕಾಕೊಂಡಳು ದಿವ್ಯಾ: ಸತ್ಯ ಕಣ್ಣಿಗೆ ಬಿದ್ದ ಬಾಲ

    By ಪ್ರಿಯಾ ದೊರೆ
    |

    ಸತ್ಯ ಧಾರಾವಾಹಿಯಲ್ಲಿ ಈಗ ಕೋಲಾಹಲವೇ ಎದ್ದಿದೆ. ಕಾರ್ತಿಕ್ ಮನೆಯಲ್ಲಿ ಮಗನ ಮದುವೆ ನಿಂತು ಹೋಗಿ, ತಂದೆಯ ಆರೋಗ್ಯ ಹದಗೆಟ್ಟಿದೆ. ಇತ್ತ ಸತ್ಯನ ಮನೆಯಲ್ಲಿ ಅಕ್ಕ ದಿವ್ಯಾಳ ಮದುವೆ ನಿಂತೋಗಿದೆ. ತನ್ನ ಮೇಲೆ ಕೊಲೆ ಯತ್ನದ ಸುಳ್ಳು ಆರೋಪವಿದೆ.

    ಈಗ ಸತ್ಯ ಮೊದಲು ತನ್ನ ಅಕ್ಕನ ಜೀವನ ಸರಿ ಮಾಡುವ ಆಲೋಚನೆಯಲ್ಲಿದ್ದಾಳೆ ಮನೆಯಲ್ಲಿ ಹೇಗಾದರೂ ಮಾಡಿ ಕಾರ್ತಿಕ್ ಜೊತೆಗೆ ದಿವ್ಯಾ ಮದುವೆ ಮಾಡಿಸ್ತೀನಿ ಎಂದಿದ್ದಾಳೆ. ಹೀಗಾಗಿ ಕಾರ್ತಿಕ್ ಬಳಿ ಮನವಿ ಮಾಡುವ ಸಲುವಾಗಿ ಸತ್ಯ ಕಾರ್ತಿಕ್ ಮನೆಯ ಗೇಟ್ ಬಳಿ ಬೈಕ್ ಅಡ್ಡ ಹಾಕಿ ಕಾಯುತ್ತಿದ್ದಾಳೆ.

    Sathya Serial: ರಾಯರನ್ನು ನೋಡಲು ಬಂದ ಸತ್ಯ ನೋವುಂಡಿದ್ದೇಕೆ?Sathya Serial: ರಾಯರನ್ನು ನೋಡಲು ಬಂದ ಸತ್ಯ ನೋವುಂಡಿದ್ದೇಕೆ?

    ದಿವ್ಯಾ ತನ್ನ ಬಾಲನ ವಿಚಾರದಲ್ಲಿ ಟೆನ್ಷನ್ ಮಾಡಿಕೊಂಡಿದ್ದಾಳೆ. ದೊಡ್ಡಪ್ಪ ಹಾಗೂ ಆತನ ಪತ್ನಿ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ. ದಿವ್ಯಾಳನ್ನು ತನ್ನ ಬಾಯ್ ಫ್ರೆಂಡ್ ವಿಚಾರವಾಗಿ ಬ್ಲ್ಯಾಕ್ ಮೇಲ್ ಮಾಡಲು ಅವರ ದೊಡ್ಡಪ್ಪ ಮುಂದಾಗಿದ್ದಾರೆ.

    ಸತ್ಯಗೆ ಕಾರ್ತಿಕ್‌ಯಿಂದ ಚೀಮಾರಿ!

    ಸತ್ಯಗೆ ಕಾರ್ತಿಕ್‌ಯಿಂದ ಚೀಮಾರಿ!

    ಸತ್ಯ ಕಾರ್ತಿಕ್ ದಾರಿಗೆ ಅಡ್ಡ ಹಾಕಿದ್ದಾಳೆ. ಕಾರ್ತಿಕ್ ಸತ್ಯ ಜೊತೆಗೆ ಗಲಾಟೆ ಮಾಡಿದ್ದಾನೆ. ಆದರೆ ಸತ್ಯ ನಾನು ಸ್ನೇಹ ಬಯಸಿ ಬಂದಿಲ್ಲ. ನಾನು ನಿನ್ನ ಪಾಲಿಗೆ ಸತ್ತಿದ್ದರೂ ಪರವಾಗಿಲ್ಲ. ನನ್ನಿಂದ ಹಾಳಾದ ನಿನ್ನ ಹಾಗೂ ನನ್ನ ಅಕ್ಕನ ಮದುವೆ ವಿಚಾರವಾಗಿ ಮಾತನಾಡಲು ಬಂದಿದ್ದೇನೆ ಎನ್ನುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್ ನೀನೇ ತಾನೆ ಮದುವೆ ಮನೆಗೆ ಬಂದು ಎಲ್ಲವನ್ನೂ ಹಾಳು ಮಾಡಿದೆ. ಅಷ್ಟೇ ಅಲ್ಲದೇ, ಮದುವೆ ಹಿಂದಿನ ದಿನ ನನ್ನ ರೂಮಿಗೆ ಬಂದು ಪ್ರಪೋಸ್ ಕೂಡ ಮಾಡಿದೆ. ಅಕ್ಕನಿಗೆ ಗಂಡ ಆಗೋನು ಅಂತ ಗೊತ್ತಿದ್ದು, ಪ್ರಪೋಸ್ ಮಾಡಿದ ನೀನು ಮತ್ತೆ ಮುರಿದ ಸಂಬಂಧವನ್ನು ಒಂದು ಮಾಡಲು ಬಂದಿದ್ದೀಯಾ ಎಂದು ತುಂಬಾ ಹೀನಾಯವಾಗಿ ಬಯ್ಯುತ್ತಾನೆ.

    ಮದುವೆಗೆ ಒಪ್ಪಲು ನಿರಾಕರಿಸಿದ ಕಾರ್ತಿಕ್!

    ಮದುವೆಗೆ ಒಪ್ಪಲು ನಿರಾಕರಿಸಿದ ಕಾರ್ತಿಕ್!

    ಇದೆಲ್ಲವನ್ನೂ ಕೇಳಿಸಿಕೊಂಡರೂ, ತನ್ನಿಂದ ಅಕ್ಕನ ಬಾಳು ಹಾಳಾಗಬಾರದೆಂದು ಸತ್ಯ ಸುಮ್ಮನಿರುತ್ತಾಳೆ. ದಯವಿಟ್ಟು ಮದುವೆಗೆ ಒಪ್ಪಿಕೋ ಎನ್ನುತ್ತಾಳೆ. ಆದರೆ ಕಾರ್ತಿಕ್ ಇಲ್ಲ ನನ್ನ ತಾಯಿ ತೀರ್ಮಾನವೇ ಅಂತಿಮ. ಈ ಮದುವೆ ನಡೆಯೋದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಸತ್ಯ, ನೀನು ಹೇಳಿದರೆ ನಿಮ್ಮ ಅಮ್ಮ ಕೇಳುತ್ತಾರೆ. ಇಲ್ಲ ಅನ್ನಬೇಡ ಎಂದು ಕೈ ಮುಗಿದು ಕೇಳೀಕೊಂಡರೂ, ಕಾರ್ತಿ ಖಡಾಖಂಡಿತವಾಗಿ ಸಾಧ್ಯವಿಲ್ಲ ಎನ್ನುತ್ತಾನೆ. ಸತ್ಯ ದಾರಿ ಬಿಡದೆ ಅಡ್ಡ ನಿಲ್ಲುತ್ತಾಳೆ. ಕೊನೆಗೆ ಸತ್ಯ ಸೋತು ದಾರಿ ಬಿಡುತ್ತಾಳೆ.

    ಸುಳ್ಳು ಹೇಳಿ ಸಿಕ್ಕಿ ಬಿದ್ದ ದಿವ್ಯಾ!

    ಸುಳ್ಳು ಹೇಳಿ ಸಿಕ್ಕಿ ಬಿದ್ದ ದಿವ್ಯಾ!

    ಇತ್ತ ದಿವ್ಯಾ ರೂಮಿಗೆ ಬಂದ ಅವರ ದೊಡ್ಡಪ್ಪ ಕಾರ್ತಿಕ್ ಜೊತೆಗೆ ಮದುವೆ ಮಾಡಿಸುತ್ತೇನೆ ಎಂದು ಸತ್ಯ ಹೇಳಿದ್ದಾಳೆ. ಇನ್ನೇನು ಟೆನ್ಷನ್ ನಿನಗೆ ಎಂದು ಮಾತನಾಡಿಸಿದಾಗ, ದಿವ್ಯಾ ಶಾಕ್ ಆಗುತ್ತಾಳೆ. ಆಕೆ ಹೀಗೆ ಶಾಕ್ ಆಗ್ತೀಯಾ.? ಕಾರ್ತಿಕ್ ಜೊತೆ ಮದುವೆ ಆದರೆ ಒಳ್ಳೆಯದೇ ಅಲ್ವಾ ಎಂದು ವ್ಯಂಗ್ಯವಾಗಿ ಮಾತನಾಡುತ್ತಾನೆ. ಕಾರ್ತಿಕ್ ಜೊತೆಗೆ ಯಾವುದೇ ಕಾರಣಕ್ಕೂ ಮದುವೆಯಾಗೊಲ್ಲ ಎಂದು ಹೇಳುತ್ತಾಳೆ. ಆಗ ಅವರ ದೊಡ್ಡಪ್ಪ ಸರಿ ಬಿಡು. ಎರಡೂ ರಹಸ್ಯವನ್ನು ನಾನು ಬಯಲು ಮಾಡುತ್ತೀನಿ ಎನ್ನುತ್ತಾನೆ. ಯಾವುದು ಎಂದಾಗ, ಅದೇ ನಿನ್ನ ಹಾಗೂ ಬಾಲನ ಲವ್ವಿ-ಡವ್ವಿ ಹಾಗೂ ಸತ್ಯ ಮದುವೆಗೆ ತಂದ ಹಣವನ್ನ ನೀನು ಕದ್ದಿದ್ದು ಎಂದು ಹೇಳುತ್ತಾನೆ.

    ಕಾರ್ತಿಕ್ ಮನ ಗೆದ್ದ ದಿವ್ಯಾ!

    ಕಾರ್ತಿಕ್ ಮನ ಗೆದ್ದ ದಿವ್ಯಾ!

    ಈ ಮಾತನ್ನು ಕೇಳಿ ದಿವ್ಯಾ ಶಾಕ್ ಆಗುತ್ತಾಳೆ. ಕಾರ್ತಿಕ್ ಗೆ ಕರೆ ಮಾಡಿ ತುಂಬಾ ಮುಗ್ಧತೆಯಿಂದ ಮಾತನಾಡಿ, ಅವನ ಮನಸ್ಸು ಗೆಲ್ಲುತ್ತಾಳೆ. ಇತ್ತ ಸತ್ಯಳ ಸ್ನೇಹಿತರು ರೆಸಾರ್ಟ್ ನಲ್ಲಿ ದಿವ್ಯಾಳನ್ನ ಕಿಡ್ನ್ಯಾಪ್ ಮಾಡೋಕೆ ಬಂದಿದ್ದು ಯಾರು ಎಂದು ಸಿಸಿಟಿವಿ ಫುಟೇಜ್ ಮೂಲಕ ಚೆಕ್ ಮಾಡುತ್ತಾರೆ. ಆಗ ಅದು ಬಾಲ ಎಂದು ಗೊತ್ತಾಗುತ್ತದೆ. ಈ ವಿಚಾರವನ್ನು ಸತ್ಯಗೆ ಹೇಳುತ್ತಾರೆ. ಈಗ ಮುಂದೇನಾಗುತ್ತೆ ಎಂಬುದೇ ಪ್ರೇಕ್ಷಕರ ಪ್ರಶ್ನೆಯಾಗಿದೆ. ಕಾರ್ತಿಕ್ ದಿವ್ಯಾಳನ್ನು ಮದುವೆಯಾಗಲು ಒಪ್ಪುತ್ತಾನಾ.? ದಿವ್ಯಾ ಮತ್ತೆ ಬಾಲನಿಂದ ದೂರಾಗುತ್ತಾಳಾ ಕಾದು ನೋಡಬೇಕಿದೆ.

    English summary
    Sathya Tv Serial Written Update On April 1st, Majoure Twist
    Saturday, April 2, 2022, 15:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X