twitter
    For Quick Alerts
    ALLOW NOTIFICATIONS  
    For Daily Alerts

    ಸತ್ಯ ಮೇಲೆ ಕಾರ್ತಿಕ್ ಸುಳ್ಳು ಆರೋಪ!

    By ಪ್ರಿಯಾ ದೊರೆ
    |

    ಸತ್ಯ ಧಾರಾವಾಹಿಯಲ್ಲಿ ಅಕ್ಕನದ್ದು ಒಂದು ಧಿಕ್ಕಾದರೆ, ತಂಗಿಯ ಬದುಕು ಮತ್ತೊಂದು ಧಿಕ್ಕಲ್ಲಿದೆ. ದಿವ್ಯಾಗೆ ಇನ್ನೂ ತನ್ನ ಮದುವೆಯ ಬದುಕಿನ ಬಗ್ಗೆ ಏನೂ ಗೊತ್ತಿಲ್ಲ. ಸತ್ಯಗೆ ಮನೆಯವರೆಲ್ಲರೂ ಗೊತ್ತಿದ್ದರೂ, ಬೇಡದ ಸೊಸೆಯಾಗಿರುವ ಕಾರಣ ಒದ್ದಾಡುತ್ತಿದ್ದಾಳೆ.

    ಸತ್ಯ ನಿಂತರು ತಪ್ಪು, ಕುಂತರು ತಪ್ಪು ಎಂಬಂತೆ ಸೀತಾ ನಡೆದುಕೊಳ್ಳುತ್ತಿದ್ದಾಳೆ. ಸತ್ಯಗೆ ಹೇಗೆ ನಡೆದುಕೊಳ್ಳಬೇಕು. ತಪ್ಯಾವುದು, ಸರಿಯಾವುದು ಎಂದು ತಿಳಿದು ಕೊಳ್ಳುವುದೇ ಕಷ್ಟವಾಗುತ್ತಿದೆ. ಸತ್ಯ ಏನೇ ಪ್ರಶ್ನೆ ಮಾಡಿದರೂ ತಪ್ಪಾಗುತ್ತಿದೆ.

    ಅಖಿಲಾಂಡೇಶ್ವರಿಯನ್ನು ಆಟ ಆಡಿಸಲು ಬಂದ ಅರುಂಧತಿ: ಯಾರೀಕೆ?ಅಖಿಲಾಂಡೇಶ್ವರಿಯನ್ನು ಆಟ ಆಡಿಸಲು ಬಂದ ಅರುಂಧತಿ: ಯಾರೀಕೆ?

    ಈಗ ಸತ್ಯ ಸಪೋರ್ಟ್ ಗೆ ಅಂತ ಇರುವುದು ಊರ್ಮಿಳಾ ಒಬ್ಬಳೇ. ಸೀತಾ ಏನೇ ಹೇಳಿದರೂ ಊರ್ಮಿಳಾ ಸತ್ಯಗೆ ಸಪೋರ್ಟ್ ಮಾಡುತ್ತಿದ್ದಾಳೆ. ಸತ್ಯ ಜೊತೆಗೆ ಈಗ ಊರ್ಮಿಳಾ ಕೂಡ ಬೈಯಿಸಿಕೊಳ್ಳುತ್ತಿದ್ದಾಳೆ.

    ಕಾರ್ತಿಕ್ ಬಳಿ ಸತ್ಯ ಒಪ್ಪಿಕೊಂಡ ರಿತು!

    ಕಾರ್ತಿಕ್ ಬಳಿ ಸತ್ಯ ಒಪ್ಪಿಕೊಂಡ ರಿತು!

    ಸತ್ಯ ಫೈಟ್ ಮಾಡಿರುವುದು ಈಗ ತಪ್ಪಾಗಿದೆ. ಈ ಬಗ್ಗೆ ಕಾರ್ತಿಕ್ ಮಂಜು ಬಳಿ ಸತ್ಯ ಫೈಟ್ ಮಾಡಿದ್ದು ತಪ್ಪು. ಅವಳೊಬ್ಬಳು ರೌಡಿ, ದೇವಸ್ಥಾನದಲ್ಲೂ ಇದೆಲ್ಲಾ ಬೇಕಿತ್ತಾ ಎಂದು ಸತ್ಯನ ಬೈದು ಕೊಳ್ಳುತ್ತಿರುತ್ತಾನೆ. ಇದೇ ಸಮಯಕ್ಕೆ ಮಂಜು ಯಾವುದೋ ಹುಡುಗಿಗೆ ಪುಡಾರಿಗಳು ರೇಗಿಸಿರುತ್ತಾರೆ ಅದಕ್ಕೆ ಸತ್ಯ ಹೊಡೆದಿರುತ್ತಾಳೆ ಎಂದು ಸಮಾಧಾನ ಮಾಡುತ್ತಾನೆ. ಆದರೆ ಕಾರ್ತಿಕ್ ಹುಡುಗಿಯರದ್ದೇ ತಪ್ಪಿರುತ್ತೆ ಎಂದಾಗ ರಿತು ಸತ್ಯ ಪರ ಮಾತನಾಡುತ್ತಾಳೆ. ರಿತುಗೆ ಕೂಡ ಕಾರ್ತಿಕ್ ಬೈದು ನಿಜವಾಗಿಯೂ ಹುಡುಗಿಯನ್ನು ಹುಡುಗರು ಚುಡಾಯಿಸಿದ್ದನು ನೀನು ನೋಡಿದ್ಯಾ ಎಂದು ಕಾರ್ತಿಕ್ ಕೇಳುತ್ತಾನೆ. ಆಗ ರಿತು ಆ ಹುಡುಗರು ರೇಗಿಸಿದ್ದು ತನ್ನನ್ನೇ ಎಂದು ಹೇಳುತ್ತಾಳೆ. ಇದು ಅಮ್ಮನಿಗೆ ಗೊತ್ತಾಗುವುದು ಬೇಡ ಎಂದೂ ಹೇಳುತ್ತಾಳೆ. ನಾನು ಕೋಟೆ ಮನೆ ಹುಡುಗಿ ಎಂದು ಹೇಳುತ್ತಾಳೆ. ಆಗ ಕಾರ್ತಿಕ್ ಸುಮ್ಮನಾಗುತ್ತಾನೆ.

    ಹಿಟ್ಲರ್ ಕಲ್ಯಾಣ: ತನ್ನ ತಾಯಿಗೆ ಪಾಠ ಕಲಿಸುತ್ತಾಳ ಲೀಲಾ?ಹಿಟ್ಲರ್ ಕಲ್ಯಾಣ: ತನ್ನ ತಾಯಿಗೆ ಪಾಠ ಕಲಿಸುತ್ತಾಳ ಲೀಲಾ?

    ಸೀತಾ ಕೋಪ ತಣ್ಣಗಾಗುತ್ತಿಲ್ಲ!

    ಸೀತಾ ಕೋಪ ತಣ್ಣಗಾಗುತ್ತಿಲ್ಲ!

    ಸೀತಾ, ಸತ್ಯ ಫೈಟ್ ಮಾಡಿದ್ದು ದೊಡ್ಡ ತಪ್ಪು. ನಮ್ಮ ಮನೆಯ ಮಾನ ಮರಿಯಾದೆಯನ್ನೆಲ್ಲಾ ಹಾಳು ಮಾಡಿ ಬಿಟ್ಟಳು. ಮುಂದೆ ನಮ್ಮ ಮನೆಯ ಮರಿಯಾದೆ ಎಲ್ಲಿಗೆ ಹೋಗುತ್ತೋ. ಇಂತಹ ಸೊಸೆ ನಮಗೆ ಬೇಕಿತ್ತಾ ಎಂದು ಯೋಚಿಸುತ್ತಿದ್ದಾಳೆ. ಈ ವೇಳೆ ಊರ್ಮಿಳಾ ಬಂದು ಸೀತಾಗೆ ಸಮಾಧಾನ ಮಾಡಿದ್ದಾಳೆ. ಸತ್ಯ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಮತ್ತಷ್ಟು ಕೋಪಗೊಂಡ ಸೀತಾ, ನೀನು ಸತ್ಯ ಥರ ನಡೆದುಕೊಳ್ಳುತ್ತಿದ್ದೀಯಾ. ಅವಳು ನಮ್ಮ ಮನೆಗೆ ಬಂದಾಗಿನಿಂದ ಅವಳ ಪರವೇ ಮಾತನಾಡುತ್ತಿದ್ದೀಯಲ್ಲ ಎಂದು ಊರ್ಮಿಳಾಗೆ ಬೈದು ಕಳಿಸುತ್ತಾಳೆ.

    ಸತ್ಯ ಮೇಲೆ ಕಾರ್ತಿಕ್ ಆರೋಪ!

    ಸತ್ಯ ಮೇಲೆ ಕಾರ್ತಿಕ್ ಆರೋಪ!

    ಕಾರ್ತಿಕ್ ಸತ್ಯಳನ್ನು ಸದ್ಯದ ಮಟ್ಟಕ್ಕೆ ದ್ವೇಷಿಸುತ್ತಿದ್ದಾನೆ. ಆಕೆ ಪ್ಲಾನ್ ಮಾಡಿಯೇ ಈ ಮದುವೆಯಾಗಿದ್ದಾಳೆ. ತಾನಿಷ್ಟ ಪಟ್ಟ ಕಾರಣ ದಿವ್ಯಾಳನ್ನು ಮುಚ್ಚಿಟ್ಟು, ತನ್ನನ್ನು ಮದುವೆಯಾಗಿದ್ದಾಳೆ ಎಂದು ಕಾರ್ತಿಕ್ ಯೋಚಿಸುತ್ತಿದ್ದಾನೆ. ಅಷ್ಟೇ ಅಲ್ಲದೇ, ಗುರುಗಳ ಬಳಿಯೂ ಸತ್ಯ ಪ್ಲಾನ್ ಮಾಡಿ ಈ ಮಾತುಗಳನ್ನು ಹೇಳಿಸುತ್ತಿದ್ದಾಳೆ. ಸತ್ಯ ಹಣ ಕೊಟ್ಟು ಪುಂಡರನ್ನು ದೇವಸ್ಥಾನಕ್ಕೆ ಕರೆಸಿದ್ದಾಳೆ. ಮನೆಯವರೆಲ್ಲರನ್ನೂ ಇಂಪ್ರೆಸ್ ಮಾಡುವುದಕ್ಕಾಗಿಯೇ ಸತ್ಯ ಹೀಗೆಲ್ಲಾ ಮಾಡುತ್ತಿದ್ದಾಳೆ ಎಂದು ಅಂದುಕೊಂಡಿದ್ದಾನೆ.

    'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ಸ್ನೇಹಾ ಹೊಸ ಫೋಟೊಶೂಟ್!'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ಸ್ನೇಹಾ ಹೊಸ ಫೋಟೊಶೂಟ್!

    ರೂಮಿನಲ್ಲಿ ಜಗಳವಾಡಿದ ಸತ್ಯ-ಕಾರ್ತಿಕ್!

    ರೂಮಿನಲ್ಲಿ ಜಗಳವಾಡಿದ ಸತ್ಯ-ಕಾರ್ತಿಕ್!

    ಸತ್ಯ ರೂಮಿನಲ್ಲಿದ್ದಾಗ ಬಂದ ಕಾರ್ತಿಕ್ ಅವಳೊಂದಿಗೆ ಜಗಳವಾಡಿದ್ದಾನೆ. ಎಲ್ಲವನ್ನೂ ಪ್ಲಾನ್ ಮಾಡಿದ್ದೀಯಾ. ನಮ್ಮ ಮನೆಯವರನ್ನು ಹೊಲಿಸಿಕೊಳ್ಳಲು ಹುಡುಗರ ಜೊತೆ ಫೈಟ್ ಮಾಡಿದ್ದು, ಗುರುಗಳ ಬಳಿಯೂ ನೀನೇ ಎಲ್ಲಾ ಹೇಳಿಸುತ್ತಿರುವುದು ಎಂದು ಹೇಳಿ ಗಲಾಟೆ ಮಾಡುತ್ತಾನೆ. ಕಾರ್ತಿಕ್ ಮಾತುಗಳಿಂದ ಬೇಸರಗೊಂಡ ಸತ್ಯ ಕೂಡ ಕೂಗಾಡುತ್ತಾಳೆ. ನಂತರ ಕಾರ್ತಿಕ್ ನಮ್ಮ ಮನೆಯ ಸಂಪ್ರದಾಯಂತೆ ನಡೆದುಕೋ. ಯಾರ ತಂಟೆಗೂ ಹೋಗಬೇಡ. ಈ ಮನೆಯ ಮರಿಯಾದಿಯನ್ನು ಕಾಪಾಡು ಎಂದು ವಾರ್ನಿಂಗ್ ಕೊಡುತ್ತಾನೆ.

    English summary
    Sathya Tv Serial Written Update On May 24th Episode, Big Twist In Sathya Life,
    Saturday, June 25, 2022, 19:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X