Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಯೇನೋ ಆಯಿತು, ಆದರೆ ಕಾರ್ತಿಕ್ ಮನೆ ಸೇರ್ತಾಳ ಸತ್ಯ?
ಸತ್ಯ ಧಾರಾವಾಹಿಯಲ್ಲಿ ಜಾನಕಿ ಹಾಗೂ ಗಿರಿಜಮ್ಮ ಸತ್ಯಗೆ ಬುದ್ಧಿವಾದ ಹೇಳುತ್ತಿದ್ದಾರೆ. ಇನ್ನೇನು ಸತ್ಯ ಕಾರ್ತಿಕ್ ಮನೆಗೆ ಸೊಸೆಯಾಗಿ ಹೋಗಲಿದ್ದಾಳೆ. ಆದರೆ ಇದು ಕೀರ್ತನಾ, ಸುಹಾಸ್, ಸೀತಾ ಹಾಗೂ ಕಾರ್ತಿಕ್ ಗೆ ಸ್ವಲ್ಪವೂ ಇಷ್ಟವಿಲ್ಲ.
ಜಾನಕಿ ಸತ್ಯಗೆ ಹೀಗೆ ಹೇಳುತ್ತಾಳೆ, ಸೀತಾ ಸ್ವಲ್ಪ ಜಾಸ್ತಿ ಸಂಪ್ರದಾಯ, ಶಾಸ್ತ್ರದ ಬಗ್ಗೆ ಒಲವಿಟ್ಟುಕೊಂಡಿದ್ದಾರೆ. ಅವರು ಹೇಳಿಕೊಡುವುದನ್ನು ಕಲಿತುಕೊಂಡು, ಆ ಮನೆಯ ಮುದ್ದಿನ ಸೊಸೆಯಾಗಿರು. ಸೀತಾ ಅವರಿಗೆ ಬೇಸರ ಮಾಡಬೇಡ, ಕಾರ್ತಿಕ್ ಮನಸಿನಲ್ಲಿ ಬೇಸರವಿದೆ ಅದನ್ನೆಲ್ಲಾ ನೀನೇ ಸರಿಪಡಿಸಿಕೋ ಎಂದು ಜಾನಕಿ ಹೇಳುತ್ತಾಳೆ.
ಮಂಟಪದಲ್ಲೇ ಕಾರ್ತಿಕ್ ಅನ್ನು ತಬ್ಬಿಕೊಂಡ ಸತ್ಯ!
ಆಗ ಗಿರಿಜಮ್ಮ ನಮ್ಮ ಸತ್ಯ ಎಲ್ಲಾ ಕಲಿತುಕೊಳ್ಳುತ್ತಾಳೆ. ಅವಳಿಗೇನು ಆಗುವುದಿಲ್ಲ. ನೀನು ಸುಮ್ಮನಿರು. ಸತ್ಯ ಎಲ್ಲರ ಮನಸ್ಸನನ್ನು ಸುಲಭವಾಗಿ ಗೆದ್ದು ಬಿಡುತ್ತಾಳೆ. ಎಲ್ಲೇ ಇದ್ರೂ ನನ್ನ ಮೊಮ್ಮಗಳು ಚೆನ್ನಾಗಿರುತ್ತಾಳೆ ಎಂದು ಹರಸುತ್ತಾಳೆ.
ಸತ್ಯಳನ್ನು ಖುಷಿಯಿಂದ ಕಳಿಸಿಕೊಡುವ ಸ್ನೇಹಿತರು!
ಸತ್ಯ ತಾಯಿ ಹಾಗೂ ಅಜ್ಜಿಗೆ ಸರಿ ನಿಮಗೆ ಹಾಗೂ ನಮ್ಮ ಮನೆಗೆ ಕೆಟ್ಟ ಹೆಸರು ಬರುವಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳುತ್ತಾಳೆ. ಅಷ್ಟೊತ್ತಿಗೆ ಹುಡುಗರು ಬರುತ್ತಾರೆ. ನಿನ್ನ ಮತ್ತೆ ಅಮುಲ್ ಬೇಬಿ ಮದುವೆ ಆಗಲಿ ಅಂತ ಕನಸು ಕಂಡು, ಹರಕೆಯನ್ನೂ ಹೊತ್ತುಕೊಂಡೆವು. ಆದರೆ ಈಗ ನಿನ್ನ ಬಿಟ್ಟಿರುವುದು ಹೇಗೆ ಅಂತಾನೂ ಗೊತ್ತಾಗುತ್ತಿಲ್ಲ ಸತ್ಯ. ನಿನ್ನ ಸಂತೋಷವಾಗಿ ಕಳಿಸಿಕೊಡಬೇಕು. ಆದರೆ ಅಳು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಎಲ್ಲರೂ ಹೇಳಿದಾಗ, ರಾಕೇಶ್, ಸತ್ಯ ಯಾವಾಗಲೂ ಖುಷಿಯಾಗಿರಬೇಕು. ಅವಳನ್ನು ಸಂತೋಷವಾಗಿ ಕಳಿಸಿಕೊಡಬೇಕು ಎನ್ನುತ್ತಾನೆ. ಆಗ ಎಲ್ಲರೂ ಸತ್ಯ ಜೊತೆಗೆ ಡ್ಯಾನ್ಸ್ ಮಾಡುತ್ತಾರೆ. ಪಟಾಕಿ ಹೊಡೆದು ಸತ್ಯಳನ್ನು ಕಳಿಸಿಕೊಡುತ್ತಾರೆ.
ಸತ್ಯಳನ್ನು ಕಳುಹಿಸಿಕೊಟ್ಟ ಅಜ್ಜಿ, ಅಮ್ಮ!
ಸತ್ಯಳನ್ನು ಕಳಿಸಿಕೊಡುವಾಗ ಎಲ್ಲರೂ ದುಃಖದಲ್ಲಿರುತ್ತಾರೆ. ಆದರೆ, ಸತ್ಯ ದೊಡ್ಡಪ್ಪ, ಬೇಗ ಹೋಗಿಬಿಟ್ಟು ಬಾ. ಗೊತ್ತಿದೆ ಅಲ್ವಾ ನಮ್ಮ ಡೀಲ್ ಎಂದು ಹೇಳುತ್ತಾನೆ. ಆಗ ಗಿರಿಜಮ್ಮ ಬೈಯುತ್ತಾಳೆ. ಏನು ಅಪಶಕುನ ಮಾತನಾಡುತ್ತಿದ್ದೀಯಾ ನೀನು. ಆಶೀರ್ವಾದ ಮಾಡುವ ಮನಸ್ಸಿದ್ದರೆ, ಒಳ್ಳೆಯ ಮನಸ್ಸಿನಿಂದ ಮಾಡು. ಇಲ್ಲಂದರೆ ಬಾಯಿ ಮುಚ್ಚಿಕೊಂಡು ಇರು ಎಂದು ಹೇಳುತ್ತಾಳೆ. ಆಗ ದೊಡ್ಡಪ್ಪ, ಈ ಗಂಡು ಅವತಾರವನ್ನು ಬಿಟ್ಟು, ಹುಟ್ಟಿದ ಮನೆಗೂ ಹೋದ ಮನೆಗೂ ಒಳ್ಳೆಯ ಹೆಸರನ್ನು ತರುವಂತೆ ಬಾಳು ಎಂದು ಹೇಳುತ್ತಾನೆ.
ನಡು ರೋಡಲ್ಲಿ ಸತ್ಯ ಕೈ ಬಿಟ್ಟು ಕಾರ್ತಿಕ್!
ಕಾರ್ತಿಕ್ ಹಾಗೂ ಸತ್ಯ ಇಬ್ಬರೂ ಒಂದು ಕಾರಿನಲ್ಲಿ ಹೋಗುತ್ತಿರುತ್ತಾರೆ. ದಾರಿ ಮಧ್ಯದಲ್ಲಿ ಕಾರು ನಿಲ್ಲಿಸುವ ಕಾರ್ತಿಕ್, ಸತ್ಯಳನ್ನು ಕೆಳಗೆ ಇಳಿಯಲು ಹೇಳುತ್ತಾನೆ. ಸತ್ಯ ಏನಾಯ್ತು ಎಂದು ಕೇಳುತ್ತಾಳೆ. ಆಗ ಕಾರ್ತಿಕ್, ನೀನು ನನ್ನ ಹೆಂಡತಿನೂ ಅಲ್ಲ. ನಾನು ನಿನ್ನ ಮನೆಗೆ ಕರೆದುಕೊಂಡೂ ಹೋಗುವುದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಸತ್ಯ ಶಾಕ್ ಆಗಿ ಅಮುಲ್ ಬೇಬಿ ಎನ್ನುತ್ತಾಳೆ. ಅದಕ್ಕೆ ಕಾರ್ತಿಕ್ ನೀನು ನನ್ನ ಹಾಗೆ ಕರೆಯಬೇಡ ಎಂದು ಹೇಳಿ ಕಾರಿನಲ್ಲಿ ಹೊರಟು ಹೋಗುತ್ತಾನೆ. ಸತ್ಯ ಅಮುಲ್ ಬೇಬಿ ಎಂದು ಕರೆಯುತ್ತಿದ್ದರೂ ತಿರುಗಿಯೂ ನೋಡುವುದಿಲ್ಲ.
ಮದುವೆ ಸೀರೆಯಲ್ಲಿ ಬೈಕ್ ಹತ್ತಿ ಹೊರಟ ಸತ್ಯ!
ಅದೇ ಸಮಯಕ್ಕೆ ಸರಿಯಾಗಿ ಲಕ್ಷ್ಮಣ, ಕಾರ್ತಿಕ್ ಗೆ ಫೋನ್ ಮಾಡಿ ಎಲ್ಲಿದ್ದೀರಾ ಎಂದು ಕೇಳುತ್ತಾನೆ. ಆಗ ಬೆಂಗಳೂರಿಗೆ ಬಂದ್ವಿ ಬರುತ್ತಿದ್ದೇವೆ ಎಂದು ಹೇಳುತ್ತಾನೆ. ನೀನು ಸತ್ಯ ಇಬ್ಬರೂ ಜಗಳ ಮಾಡಿಕೊಂಡಿಲ್ಲ ತಾನೇ ಎಂದು ಕೇಳುತ್ತಾನೆ. ಅದಕ್ಕೆ ಕಾರ್ತಿಕ್ ಇಲ್ಲ ಎಂದು ತಬ್ಬಿಬ್ಬಾಗಿ ಹೇಳುತ್ತಾನೆ. ಆಗ ಡೌಟ್ ಬರುತ್ತದೆ, ಲಕ್ಷ್ಮಣ ಹಾಗೂ ಊರ್ಮಿಳ ಇಬ್ಬರೂ ಕಾರ್ತಿಕ್ ಜೊತೆಗೆ ಮಾತನಾಡುತ್ತಾರೆ. ಇತ್ತ ಸತ್ಯ ಸ್ನೇಹಿತರನ್ನು ಕರೆಸಿಕೊಂಡು. ತಾನೇ ಬೈಕ್ ಓಡಿಸಿಕೊಂಡು ಕಾರ್ತಿಕ್ ಕಾರ್ ನಿಂತಿದ್ದ ಸಿಗ್ನಲ್ ಗೆ ಬರುತ್ತಾಳೆ. ಕಾರ್ತಿಕ್ ಶಾಕ್ ಆಗುತ್ತಾನೆ. ಇನ್ನು ಮನೆಯಲ್ಲಿ ಸೀತಾ ತಾನು ಸತ್ಯಳನ್ನು ಮನೆ ತುಂಬಿಸಿಕೊಳ್ಳುವುದಿಲ್ಲ ಎಂದು ಹಠ ಮಾಡುತ್ತಾಳೆ.