Seetha Raama: ರುದ್ರ ಪ್ರತಾಪನ ಸಂಚು ಬಯಲಿಗೆ.. ಸೀತಾಳ ಜೀವನ ಉಳಿಸಿದ ರಾಮ ಸಿಹಿಯನ್ನು ಕಾಪಾಡುತ್ತಾನ?
ಸೀತಾರಾಮ ಧಾರಾವಾಹಿ ನೋಡಲು ಜನರು ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹಳ ಅದ್ಭುತವಾದ ಎಪಿಸೋಡ್ಗಳನ್ನು ತೋರಿಸಲಾಗುತ್ತಿದ್ದು ಧಾರಾವಾಹಿ ಪ್ರಿಯರು ಸೀತಾ ರಾಮಾನನ್ನು ನೋಡಲು ಕಾತರದಿಂದ ಕಾಯುವ ಹಾಗೆ ಮಾಡುತ್ತಿದೆ. ಇದೀಗ ರಾಮ ಮದುವೆ ಮನೆಗೆ ಎಂಟ್ರಿ ನೀಡಿ ಆಗಿದೆ.
"ರುದ್ರ ಪ್ರತಾಪ್ ಮದುವೆ ಆಗುತ್ತಿರುವುದು ನಿಮ್ಮ ಮೇಲಿನ ಪ್ರೀತಿಯಿಂದ ಅಲ್ಲಾ ಬದಲಾಗಿ ನಿಮ್ಮ ಆಸ್ತಿ ಮೇಲೆ ಇರುವ ವ್ಯಾಮೋಹದಿಂದ. ಜೊತೆಗೆ ಸಿಹಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿರುವುದು ಯಾವುದು ಸತ್ಯ ಅಲ್ಲ. ಅದೆಲ್ಲವೂ ಸುಳ್ಳು. ಸೀತಾ ನಿಮ್ಮನ್ನು ಮದುವೆ ಆದ ಬಳಿಕ ಸಿಹಿಯನ್ನು ಅನಾಥ ಆಶ್ರಮಕ್ಕೆ ಸೇರಿಸುತ್ತೇನೆ ಎಂದು ಹೇಳಿರುವ ವಾಯ್ಸ್ ಮೆಸೇಜ್ ತೋರಿಸುತ್ತಾನೆ .

ಸೀತಾ ಎದುರು ರುದ್ರ ಪ್ರತಾಪನ ಮುಖವಾಡ ಕಳಚುತ್ತಾನೆ. ಹಾಗೆಯೇ ಸೀತಾ ಇದೆಲ್ಲವನ್ನೂ ನಂಬಲಾರರು ಎಂದು ವಾಯ್ಸ್ ನೋಟ್ ಅನ್ನು ತೋರಿಸುತ್ತಾರೆ. ರಾಮನ ಬಳಿ ಸಿಹಿ ಮಾತನಾಡಿರುವುದು ನೋಡಿ ಸೀತಾಗೆ ದುಃಖವಾಗುತ್ತದೆ. ಇದೆಲ್ಲವನ್ನೂ ನೋಡಿದ ಸೀತಾ ಮದುವೆ ಆಗುವುದಿಲ್ಲ ಎಂದು ಜೋರಾಗಿ ಹೇಳಿದಾಗ ರಾಮನ ಮೇಲೆ ರೌಡಿಗಳನ್ನು ಛು ಬಿಡುತ್ತಾನೆ ರುದ್ರ ಪ್ರತಾಪ್.
ಸಿಹಿಯ ಹುಡುಕಾಟದಲ್ಲಿ ಸೀತಾ
ಸೀತಾ ಸಿಹಿಯ ಹುಡುಕಾಟದಲ್ಲಿ ಇರುತ್ತಾಳೆ. ಆದರೆ ಸೀತಾ ಕಣ್ಣಿಗೆ ಸಿಹಿ ಬೀಳುವುದಿಲ್ಲ. ರುದ್ರ ಪ್ರತಾಪ ಸೀತಾಗೆ ಬಲವಂತವಾಗಿ ತಾಳಿ ಕಟ್ಟಲು ಬರುತ್ತಾನೆ. ಇದನ್ನು ನೋಡಿದ ಸೀತಾಗೆ ಎನು ಮಾಡಬೇಕು ತೋಚದೇ ಪರದಾಡುತ್ತ ಇರುತ್ತಾಳೆ. ಈ ವೇಳೆ ರುದ್ರ ಪ್ರತಾಪನ ಅಟ್ಟಹಾಸವನ್ನು ಮೆಟ್ಟಿ ನಿಲ್ಲುತ್ತಾನೆ ರಾಮ. ರಾಮನ ಮಾತಿನ ಪ್ರಕಾರ ಸೀತಾ ಮದುವೆ ನಿಂತು ಹೋಗಿದೆ.

ರುದ್ರ ಪ್ರತಾಪನ ತೆಕ್ಕೆಯಲ್ಲಿ ಸಿಹಿ
ಆದರೆ ಸಿಹಿ ರುದ್ರ ಪ್ರತಾಪನ ತೆಕ್ಕೆಯಲ್ಲಿ ಇದ್ದಾಳೆ. ಇಷ್ಟೆಲ್ಲ ಆದ ಬಳಿಕ ರುದ್ರ ಪ್ರತಾಪ ಮಾತ್ರ ಸಿಹಿಯನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ಯೋಚನೆ ಮಾಡಿ ನೇರವಾಗಿ ಕಾರಿನ ಬಳಿ ಓಡುತ್ತಾನೆ . ಸಿಹಿ ಕಾಣಿಸದೆ ಇರುವುದನ್ನು ನೋಡಿ ರಾಮ ಕೂಡ ಆತನನ್ನು ಹಿಂಬಾಲಿಸುತ್ತಾರೆ. ರುದ್ರ ಪ್ರತಾಪ ರಾಮನ ಕೈಯಿಂದ ಹೇಗಾದರೂ ತಪ್ಪಿಸಿಕೊಂಡು ಓಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಸಿಹಿ ರಕ್ಷಣೆಗೆ ಮುಂದಾದ ರಾಮ್
ಸಿಹಿ ಬಾಯಿ ಕೈ ಎಲ್ಲಾ ಕಟ್ಟಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾ ಇರುವುದನ್ನು ನೋಡಿ ಜನರು ಬಹಳ ಬೇಸರ ಪಟ್ಟುಕೊಂಡಿದ್ದಾರೆ. ರುದ್ರ ಪ್ರತಾಪನನ್ನು ರಾಮ ಬೆನ್ನಟ್ಟಿಕೊಂಡು ಹೋಗಿ ರಸ್ತೆ ಮಧ್ಯೆ ಅಡ್ಡ ಹಾಕುತ್ತಾ ಇರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಪ್ರೋಮೋದಲ್ಲಿ ರಾಮ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡು ಇದ್ದಾನೆ. ಇದನ್ನು ನೋಡಿದ ಅನೇಕ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಅಂತೂ ಇಂತೂ ರುದ್ರ ಪ್ರತಾಪ ನ ಅಟ್ಟಹಾಸಕ್ಕೆ ರಾಮ್ ಫುಲ್ ಸ್ಟಾಪ್ ಇಡಲಿ ಎನ್ನುವುದು ಸೀರಿಯಲ್ ಪ್ರೇಮಿಗಳ ಆಶಯ.


Click it and Unblock the Notifications











