Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಂತೆ ಸುದೀಪ್ ಮೇಲೆ ಆಪಾದನೆ ಹೊರಿಸಿದ ರವಿ ಬೆಳಗೆರೆ
Recommended Video
ಬಿಗ್ ಬಾಸ್ ಸೀಸನ್-7 ಗೆ ಮೂರನೆ ಸ್ಪರ್ಧಿಯಾಗಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ ಸ್ಪರ್ಧಿ ಅಂದ್ರೆ ರವಿ ಬೆಳಗೆರೆ. ಮಗಳು ಭಾವನ ಜೊತೆ ರವಿ ಬೆಳಗೆರೆ ಮೂರನೆ ಸ್ಪರ್ಧಿಯಾಗಿ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ.
EXCLUSIVE: ಮೊದಲ ದಿನವೇ ಭಾರಿ ಹಿನ್ನೆಡೆ; ಬಿಗ್ ಬಾಸ್ ಮನೆಯಿಂದ ಹೊರಬಂದ ಬೆಳಗೆರೆ
ವೇದಿಕೆ ಮೇಲಿದ್ದ ರವಿ ಬೆಳಗೆರೆ ಸುದೀಪ್ ನೋಡುತ್ತಿದ್ದಂತೆ ನಿಮ್ಮ ಮೇಲೆ ಒಂದು ದೊಡ್ಡ ಆಪಾದನೆ ಇದೆ ಎಂದು ಹೇಳಿ ಶಾಕ್ ನೀಡಿದ್ರು. ರವಿ ಬೆಳಗೆರೆ ಆಪಾದನೆ ಮಾಡುತ್ತಿದ್ದಾರೆ ಅಂದ್ರೆ ಏನಿರ ಬಹುದು ಎಂದು ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ರು. ರವಿ ಬೆಳಗೆರೆ ಸುದೀಪ್ ಮೇಲೆ ಮಾಡಿದ ಆಪಾದನೆ ಏನು?
ಸುದೀಪ್ ತಾಯಿ ಬಿಗ್ ಬಾಸ್ ಈ ಸ್ಪರ್ಧಿಯ ಬಿಗ್ ಫ್ಯಾನ್ ಅಂತೆ
ಸುದೀಪ್ ಮೇಲೆ ರವಿ ಬೆಳಗೆರೆ ಆಪಾದನೆ
ರವಿ ಬೆಳಗೆರೆ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಸುದೀಪ್ ನಿಮ್ಮ ಮೆಲೆ ದೊಡ್ಡ ಆಪಾದನೆ ಇದೆ ಎಂದು ಹೇಳುತ್ತಾ "ಸುದೀಪ್ ನೀವು ಕನ್ನಡದ ಅಮಿತಾಭ್ ಬಚ್ಚನ್" ಎಂದು ಹೇಳಿದ್ದಾರೆ. ವೇದಿಕೆ ಮೇಲೆ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ ರವಿ ಬೆಳಗೆರೆ.
ಸುದೀಪ್ ಅಂದ್ರೆ ಬೆಳೆಗೆರೆ ಇಷ್ಟ
ರವಿ ಬೆಳಗೆರೆ ಅವರಿಗೆ ಸುದೀಪ್ ಅಂದ್ರೆ ತುಂಬಾ ಇಷ್ಟವಂತೆ. "ಸುದೀಪ್ ನೀವು ಅಂದ್ರೆ ಇಷ್ಟ. ನಟನಾಗಿ ಮತ್ತು ಒಬ್ಬ ಮನುಷ್ಯನಾಗಿ ನನಗೆ ನೀವು ತುಂಬ ಇಷ್ಟ. ಈ ಮೊದಲೆ ನಾನು ಈ ಬಗ್ಗೆ ಹೇಳಿದ್ದೀನಿ. ನಾನು ಯಾರನ್ನು ಹೊಗಳುವುದಿಲ್ಲ" ಅಂತ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ ರವಿ ಬೆಳಗೆರೆ.
ಬಿಗ್ ಬಾಸ್ ಕನ್ನಡ: ರಾಜು ತಾಳಿಕೋಟೆ 14ನೇ ಸ್ಪರ್ಧಿ
ಮನೆಯೊಳಗೆ ಸಿಗರೇಟ್ ಕೇಳಿದ ರವಿ ಬೆಳಗೆರೆ
ರವಿ ಬೆಳಗೆರೆಗೆ ತುಂಬ ಆಪ್ತವಾದುದು ಅಂದ್ರೆ ಸಿಗರೇಟು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ರವಿ ಬೆಳಗೆರೆ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತು ಬಿಗ್ ಬಾಸ್ ದಯವಿಟ್ಟು ಸಿಗರೇಟ್ ಕಳುಹಿಸಿ ಕೊಡಿ ಎಂದು ಬಿಗ್ ಬಾಸ್ ಗೆ ಬೇಡಿಕೆ ಇಟ್ಟಿದ್ದಾರೆ.
ಕುರಿ ಪ್ರತಾಪ್ ಮೇಲೆ ಮೊದಲೆ ದಿನವೆ ಬೇಸರಗೊಂಡ ಕಿಚ್ಚ ಸುದೀಪ್
ಮೊದಲ ದಿನವೆ ಮಾಯವಾದ ರವಿ ಬೆಳಗೆರೆ
ರವಿ ಬೆಳಗೆರೆ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಹೆಚ್ಚು ಮನರಂಜನೆ ನಿರೀಕ್ಷೆ ಮಾಡಿದ್ದರು ಪ್ರೇಕ್ಷಕರು. ಆದ್ರೆ ಮನೆಯೊಳಗೆ ಕಾಲಿಟ್ಟು ಸ್ವಲ್ಪ ಹೊತ್ತಿನಲ್ಲಿ ರವಿ ಬೆಳಗೆರೆ ಮಾಯವಾಗಿದ್ದರು. ಬಿಗ್ ಬಾಸ್ ಬಳಿ ಸಿಗರೇಟು ಕೇಳಿದ ರವಿ ಬೆಳಗೆರೆ ಆನಂತರ ಎಲ್ಲಿ ಹೋದ್ರು ಎನ್ನುವುದು ಕಾಣಿಸಿಕೊಂಡಿಲ್ಲ. ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತಿದ್ದರೆ ರವಿ ಬೆಳಗೆರೆ ಮಾತ್ರ ಮಾಯವಾಗಿದ್ದರು.