Don't Miss!
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- News Weather Report: ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಬಿಸಿಗಾಳಿ- ಇಲ್ಲಿದೆ ಪ್ರಮುಖ ಸೂಚನೆ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾನಿನ್ನೂ ಬದುಕಿದ್ದೀನಿ; ಸಾವಿನ ವದಂತಿ ಬಗ್ಗೆ 'ಶಕ್ತಿಮಾನ್' ನಟ ಮುಖೇಶ್ ಸ್ಪಷ್ಟನೆ
'ಶಕ್ತಿಮಾನ್' ಮತ್ತು 'ಮಹಾಭಾರತ' ಧಾರಾವಾಹಿ ಮೂಲಕ ದೇಶದ ಗಮನ ಸೆಳೆದಿದ್ದ ನಟ ಮುಖೇಶ್ ಖನ್ನಾ ಸಾವಿನ ವದಂತಿ ವೈರಲ್ ಆಗಿದೆ. ಕೋವಿಡ್-19 ನಿಂದ ಮುಖೇಶ್ ಖನ್ನಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Recommended Video
ಮುಖೇಶ್ ಸಾವಿನ ಪೋಸ್ಟರ್ ಗಳನ್ನು ನೋಡಿ ಅಭಿಮಾನಿಗಳು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ತನ್ನ ಸಾವಿನ ಸುದ್ದಿಯನ್ನು ತಾವೆ ನೋಡಿ ಶಾಕ್ ಆದ ಮುಖೇಶ್ ಖನ್ನಾ ನಾನಿನ್ನೂ ಬದುಕಿದ್ದೀನಿ ಎಂದು ವಿಡಿಯೋ ಮೂಲಕ ಫುಲ್ ಗರಂ ಆಗಿದ್ದಾರೆ.
ಮಹಾಭಾರತ ಧಾರವಾಹಿ ನೋಡಬೇಡಿ: ಹಿರಿಯ ನಟನ ಹಳೆಯ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾವಿನ ವದಂತಿಗೆ ಸ್ಪಷ್ಟನ ನೀಡಿರುವ ಮುಖೇಶ್ ಖನ್ನಾ, ಯಾರೊಬ್ಬರ ಜೀವನದ ಬಗ್ಗೆಯೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಸಬೇಡಿ, ಮೊದಲು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣವೇ ಹೊಣೆಯಾಗಲಿದೆ ಎಂದಿದ್ದಾರೆ.
'ನಿಮ್ಮ ಆಶೀರ್ವಾದದಿಂದ ನಾನು ಸಂಪೂರ್ಣವಾಗಿ ಆರೋಗ್ಯವಾಗಿ, ಚೆನ್ನಾಗಿ ಇದ್ದೀನಿ. ನನಗೆ ಕೋವಿಡ್ -19 ಇಲ್ಲ. ನನ್ನನ್ನು ಯಾವುದೇ ಆಸ್ಪತ್ರೆಗೂ ದಾಖಲಿಸಿಲ್ಲ. ಈ ವದಂತಿಯನ್ನು ಯಾರು ಹಬ್ಬಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದರ ಉದ್ದೇಶವೇನು ಎನ್ನುವುದು ನನಗೆ ಗೊತ್ತಿಲ್ಲ. ಇಂಥ ಸುಳ್ಳು ಸುದ್ದಿಯಿಂದ ಜನರ ಭಾವನೆಯನ್ನು ನೋವಿಸಬೇಡಿ' ಎಂದು ಹೇಳಿದ್ದಾರೆ.
'ಇಂಥ ಮಾನಸಿಕ ಅಸ್ಥಿರವಾಗಿರುವ ಜನರಿಗೆ ಯಾವ ಚಿಕಿತ್ಸೆ ನೀಡಬೇಕು. ಅವರನ್ನು ಯಾರು ಶಿಕ್ಷಿಸುತ್ತಾರೆ. ಸಾಕು, ಈಗಲೇ ಜಾಸ್ತಿ ಆಗಿದೆ. ಇಂಥ ನಕಲಿ ಸುದ್ದಿಗಳನ್ನು ನಿಲ್ಲಿಸಿ' ಕೋಪಗೊಂಡಿದ್ದಾರೆ.
1990 ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಮೂಲಕ ಮುಖೇಶ್ ಖನ್ನಾ ಪ್ರಸಿದ್ಧಿ ಪಡೆದಿದ್ದರು. ಬಳಿಕ ಬಿ ಆರ್ ಚೋಪ್ರಾ ಪ್ರಸಿದ್ಧ ಮಹಾಭಾರತ ಧಾರಾವಾಹಿಯಲ್ಲಿ ಭೀಷ್ಮ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಎರಡು ಧಾರಾವಾಹಿಗಳು ಮುಖೇಶ್ ಖನ್ನಾ ವೃತ್ತಿ ಜೀವನದ ಬಹುಮುಖ್ಯವಾಗಿದೆ.