Just In
Don't Miss!
- News
ಕೆಂಪೇಗೌಡ ಏರ್ಪೋರ್ಟ್ಗೆ ಆರೋಗ್ಯ ಮಾನ್ಯತೆ ಪ್ರಮಾಣಪತ್ರ
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಟ್ಯಧಿಪತಿಯಲ್ಲಿ ಭಾರಿ ನಿರಾಸೆ ಮೂಡಿಸಿದ ಶಮೀಮ್ ಬಾನು.!
ಈ ವಾರ ಕನ್ನಡದ ಕೋಟ್ಯಧಿಪತಿಯಲ್ಲಿ ಒಟ್ಟು ಮೂರು ಜನರಿಗೆ ಮಾತ್ರ ಅವಕಾಶ ಸಿಕ್ತು. ಶನಿವಾರ ಸಂಚಿಕೆಯ ಮೊದಲ ಸ್ಪರ್ಧಿಯಾಗಿದ್ದ ಇಂಚರಾ 1.60 ಲಕ್ಷ ಗೆದ್ದರು. ನಂತರ ಭಾಗವಹಿಸಿದ ಲಾರಿ ಡ್ರೈವರ್ ಈರಪ್ಪ 3.20 ಲಕ್ಷ ಹಣ ಗಳಿಸಿದರು. ಇವರಿಬ್ಬರ ಬಳಿಕ ಹಾಟ್ ಸೀಟ್ ನಲ್ಲಿ ಕೂರುವ ಅವಕಾಶ ಪಡೆದುಕೊಂಡಿದ್ದು ಡಾಕ್ಟರ್ ಶಮೀಮ್ ಬಾನು.
ಶಮೀಮ್ ಬಾನು ಅವರಿಗೆ ಬಹಳ ಕನಸುಗಳಿದ್ದವು. ಆಕೆಯ ಮಾತುಗಳನ್ನ ಕೇಳುತ್ತಿದ್ದರೇ ಖಂಡಿತಾ ಈ ಹುಡುಗಿ ಕೋಟ್ಯಧಿಪತಿಯಲ್ಲಿ ಚೆನ್ನಾಗಿ ಆಟ ಆಡ್ತಾರೆ, ಒಂದೊಳ್ಳೆ ಮೊತ್ತವನ್ನ ಗೆದ್ದುಕೊಂಡು ಹೋಗ್ತಾರೆ ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು.
ಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಬೇಟೆ ಮಾಡಿದ ಲಾರಿ ಡ್ರೈವರ್ ಈರಪ್ಪ
ಅದಕ್ಕೆ ತಕ್ಕಂತೆ ಆರಂಭ ಕೂಡ ಪಡೆದುಕೊಂಡರು. ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಶಮೀಮ್ ಬಾನು ಅವರ ಆಟಕ್ಕೆ ಫಿದಾ ಆಗಿದ್ದರು. ಆದ್ರೆ, ಅತಿಯಾದ ಆತ್ಮವಿಶ್ವಾಸನೋ ಅಥವಾ ಆತುರವೋ ದೊಡ್ಡ ಗುರಿ ಹೊಂದಿದ್ದ ಶಮೀಮ್ ಬಾನುಗೆ ಭಾರಿ ನಿರಾಸೆಯಾಯಿತು. ಅಷ್ಟಕ್ಕೂ, ಶಮೀಮ್ ಬಾನು ಗೆದ್ದ ಹಣವೆಷ್ಟು? ಯಾವ ಪ್ರಶ್ನೆಯಿಂದ ಸೋಲು ಕಂಡರು?

ಶಮೀಮ್ ಬಾನು ಆಯ್ಕೆಯಾದ ಪ್ರಶ್ನೆ
ಕರ್ನಾಟಕದ ಈ ಮುಖ್ಯಮಂತ್ರಿಗಳನ್ನು ಅವರು ಮೊದಲು ಅಧಿಕಾರ ಸ್ವೀಕರಿಸಿದ ಕಾಲಾನುಕ್ರಮದಲ್ಲಿ ಜೋಡಿಸಿ?
A ಜೆ ಎಚ್ ಪಟೇಲ್
B ಕೆಂಗಲ್ ಹನುಮಂತಯ್ಯ
C ರಾಮಕೃಷ್ಣ ಹೆಗಡೆ
D ಎಚ್ ಡಿ ಕುಮಾರಸ್ವಾಮಿ
ಸರಿಯಾದ ಉತ್ತರ: B ಕೆಂಗಲ್ ಹನುಮಂತಯ್ಯ, C ರಾಮಕೃಷ್ಣ ಹೆಗಡೆ, A ಜೆ ಎಚ್ ಪಟೇಲ್, D ಎಚ್ ಡಿ ಕುಮಾರಸ್ವಾಮಿ
ಕೋಟ್ಯಧಿಪತಿಯಲ್ಲಿ ಇಂಚರಾ ಆಸೆಗೆ ತಣ್ಣೀರು ಹಾಕಿದ ಮಹಾತ್ಮ ಗಾಂಧಿ ಹತ್ಯೆ ಪ್ರಶ್ನೆ.!

ಮೊದಲ ಹಂತ ಯಶಸ್ವಿಯಾಗಿ ಪಾಸ್
ಮೊದಲ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ರೆ ಹತ್ತು ಸಾವಿರ ರೂಪಾಯಿ ಸಿಗುತ್ತೆ. ಮತ್ತು ಇದು ಮೊದಲ ಹಂತದ ಸೇಫ್ ಝೋನ್ ಆಗಿರುತ್ತೆ. ಶಮೀಮ್ ಬಾನು ಕೂಡ ಮೊದಲ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಹತ್ತು ಸಾವಿರ ಗೆದ್ದುಕೊಂಡಿದ್ದರು. ಆದರೆ, ಎರಡನೇ ಹಂತದ ಸೇಫ್ ಝೋನ್ ಕ್ರಾಸ್ ಮಾಡಿಲ್ಲ ಎಂಬುದು ನಿರಾಸೆ ಮೂಡಿಸಿತು.

ಶಮೀಮ್ ಬಾನುಗೆ ಕೈಕೊಟ್ಟ ಪ್ರಶ್ನೆ ಇದೇ
ಪ್ರಶ್ನೆ: ಕಾಂತಾ ಎಂಬ್ರಾಯಿಡಿರಿ ಸೀರೆಗಳನ್ನು ಸಂಪ್ರದಾಯವಾಗಿ ಯಾವ ರಾಜ್ಯದಲ್ಲಿ ತಯಾರಿಸುತ್ತಾರೆ?
A ಪಶ್ಚಿಮ ಬಂಗಾಳ
B ತಮಿಳುನಾಡು
C ಗುಜರಾತ್
D ಮಧ್ಯಪ್ರದೇಶ
ಕೋಟ್ಯಧಿಪತಿಯಲ್ಲಿ ಇಂಚರಾ ಆಸೆಗೆ ತಣ್ಣೀರು ಹಾಕಿದ ಮಹಾತ್ಮ ಗಾಂಧಿ ಹತ್ಯೆ ಪ್ರಶ್ನೆ.!

ಲೈಫ್ ಲೈನ್ ಇದ್ದರೂ ಯಡವಟ್ಟು
ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಶಮೀಮ್ ಬಾನು ಅವರಿಗೆ ಗೊತ್ತಿರಲಿಲ್ಲ. ಆದರೂ ಯೋಚಿಸಿದ ಶಮೀಮ್ ಬಾನು C ಗುಜರಾತ್ ಎಂದುಬಿಟ್ಟರು. ನಂತರ ಲೈಪ್ ಲೈನ್ ಬಳಸುತ್ತೇನೆ ಎಂದು ನಿರ್ಧರಿಸಿ ಫಿಫ್ಟಿ ಫಿಫ್ಟಿ ಲೈಫ್ ಲೈನ್ ಬಳಸಿದರು. ನಂತರ ಎರಡು ತಪ್ಪು ಉತ್ತರ ಮಾಯವಾಯಿತು. A ಪಶ್ಚಿಮ ಬಂಗಾಳ ಮತ್ತು D ಮಧ್ಯಪ್ರದೇಶ ಉಳಿದುಕೊಂಡಿತ್ತು. ಇವುಗಳಲ್ಲಿ D ಮಧ್ಯಪ್ರದೇಶ ಎಂದು ಉತ್ತರ ಲಾಕ್ ಮಾಡಿದರು. ದುರಾದೃಷ್ಟವಶಾತ್ ಅದು ತಪ್ಪು ಉತ್ತರ ಆಗಿತ್ತು.

ಶಮೀಮ್ ಬಾನುಗೆ ಸಿಕ್ಕಿದ್ದು ಹತ್ತು ಸಾವಿರ ಮಾತ್ರ
ಏಳನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದ ಶಮೀಮ್ ಬಾನು ಅವರಿಗೆ ಸಿಕ್ಕಿದ್ದು ಕೇವಲ ಹತ್ತು ಸಾವಿರ ಮಾತ್ರ. ಮೊದಲ ಐದು ಪ್ರಶ್ನೆಗಳಿಗೆ ಉತ್ತರ ನೀಡಿದ ಮೊದಲ ಹಂತದ ಸೇಫ್ ಝೋನ್ ತಲುಪಿದ್ದ ಶಮೀಮ್ ಗೆ ಹತ್ತು ಸಾವಿರ ಉಳಿದುಕೊಂಡಿತ್ತು. ಈ ಮೂಲಕ ಅನೇಕ ಕನಸುಗಳನ್ನ ಕಂಡು ಆಟವಾಡಿದ ಶಮೀಮ್ ಬಾನು ಭಾರಿ ನಿರಾಸೆಯಿಂದ ವಾಪಸ್ ಆದರು.