Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶರಣ್ ನಟನೆ ನೋಡಿ 10 ರೂಪಾಯಿ ಕೊಟ್ಟಿದ್ದರಂತೆ ಆ ದಿಗ್ಗಜ ನಟ
Recommended Video
ನಟ ಶರಣ್ ರಂಗಭೂಮಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ತಾತ ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಸ್ವಂತ ನಾಟಕ ಕಂಪನಿಯನ್ನ ನಡೆಸುತ್ತಿದ್ದರು. ತಮ್ಮ ಮಕ್ಕಳನ್ನ ಸಿನಿಮಾ ಕಲಾವಿದರನ್ನ ಮಾಡಬೇಕು ಎಂಬ ಆಸೆಯಿಂದ ರಂಗಭೂಮಿಯನ್ನ ಬಿಟ್ಟು ಸಿನಿ ಇಂಡಸ್ಟ್ರಿಗೆ ಬಂದವರು.
ಇಂದು ಶರಣ್ ಮತ್ತು ಶ್ರುತಿ ಇಬ್ಬರು ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನ ಹೊಂದಿರುವ ಪ್ರತಿಭಾನ್ವಿತ ಕಲಾವಿದರು. ಇತ್ತೀಚಿಗಷ್ಟೆ ನಟ ಶರಣ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರಣ್ ಗೆ ಮೊದಲ ಸಲ 10 ರೂಪಾಯಿ ಗೌರವಧನ ನೀಡಿದ ಹಿರಿಯ ನಟ ಯಾರೆಂಬ ಕುತೂಹಲಕಾರಿ ಸಂಗತಿ ಬಹಿರಂಗವಾಗಿದೆ.
ವೀಕೆಂಡ್ ವಿತ್ ರಮೇಶ್ ಶೋಗೆ ಬಂದ ಶರಣ್ ಬಗ್ಗೆ ವೀಕ್ಷಕರು ಏನ್ ಹೇಳುತ್ತಿದ್ದಾರೆ?
ಆಗ ಶರಣ್ ಅವರಿಗೆ ಸುಮಾರು ಎರಡೂವರೆ ವರ್ಷ ವಯಸ್ಸು. ಹಾಸನದಲ್ಲಿ ಸಿದ್ದಲಿಂಗಯ್ಯ ಎಂಬ ನಾಟಕದಲ್ಲಿ ತಂದೆ ಜೊತೆ ಶರಣ್ ಕೂಡ ನಟಿಸಿದ್ದರು. ತಂದೆಗೆ ಶಿಷ್ಯನಾಗಿ ಶರಣ್ ಕಾಮಿಡಿ ಪಾತ್ರ ಮಾಡಿದ್ದರಂತೆ. ಈ ನಾಟಕದ ಬಳಿಕ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಶರಣ್ ಕೈಯಲ್ಲಿ 10 ನೀಡಿದರಂತೆ.
ಅಂದು ದ್ವಾರಕೀಶ್ ಅವರಿಂದ ಹತ್ತು ರೂಪಾಯಿ ಪಡೆದುಕೊಂಡು ಶರಣ್, ಇಂದು ಸ್ಯಾಂಡಲ್ ವುಡ್ ನಿರ್ಮಾಪಕರಿಂದ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ನಟನಾಗಿ ಬೆಳೆದಿದ್ದಾರೆ.
ಖುಷಿ, ನೋವು, ಕಣ್ಣೀರು ತುಂಬಿದ ಅಧ್ಯಕ್ಷ ಶರಣ್ ಪ್ರೋಮೋ
ವಿಶೇಷ ಅಂದ್ರೆ ಶರಣ್ ಅವರ ಸಹೋದರಿ ನಟಿ ಶ್ರುತಿ ಅವರಿಗೂ ನಾಯಕಿಯಾಗಿ ಮೊದಲ ಅವಕಾಶ ನೀಡಿದ್ದು ಕೂಡ ದ್ವಾರಕೀಶ್ ಎಂಬುದು ಗಮನಾರ್ಹ. ದ್ವಾರಕೀಶ್ ನಿರ್ಮಾಣದ ಶ್ರುತಿ ಸಿನಿಮಾದಲ್ಲಿ ಹೆಸರು ಬದಲಿಸಿಕೊಂಡ ಶ್ರುತಿ, ಅಲ್ಲಿಂದ ಕನ್ನಡದ ಟಾಪ್ ನಟಿಯಾಗಿ ಬೆಳೆದಿದ್ದು ಈಗ ಇತಿಹಾಸ.