Don't Miss!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಡಿ ಕಿಂಗ್ ಗಳ ಜೊತೆ ಕನ್ನಡದ ಕೋಟ್ಯಾಧಿಪತಿ!
ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಗಳಾದ ಶರಣ್ ಹಾಗೂ ಸಾಧು ಕೋಕಿಲಾ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ಭಾಗವಹಿಸಲಿದ್ದಾರೆ. ಇದೇ ಜುಲೈ 23 ರ ಮಂಗಳವಾರ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಶರಣ್, ಸಾಧು ಜುಗಲ್ ಬಂಧಿ ಆಡಲಿದ್ದಾರೆ!
ಹೆಚ್ಚಿನವರಿಗೆ
ಗೊತ್ತಿರದ
ವಿಷಯವೆಂದರೆ,
ಶರಣ್
ಒಬ್ಬ
ಅಪ್ರತಿಮ
ಹಾಡುಗಾರ
ಎಂಬ
ವಿಚಾರ.
ಶರಣ್
'Rambo'
ಚಿತ್ರದ
ಪ್ಯಾಥೋ
ಸಾಂಗ್
ಹಾಡುವ
ಮೂಲಕ
ಅಚ್ಚರಿ
ಮೂಡಿಸಿದರು.
ಅದಾದ
ನಂತರ
'ವಿಕ್ಟರಿ'
ಚಿತ್ರದ
ಖಾಲಿ
ಕ್ವಾಟ್ರು
ಬಾಟ್ಲೀ
ಹಂಗೇ
ಲೈಫೂ..
ಹಾಡಿಗೆ
ಧ್ವನಿಗೂಡಿಸಿದರು.
ಅದಾದ
ನಂತರ
ಸಾಧು
ಕೋಕಿಲಾ
ಅವರು
'ಕಾವ್ಯಾ'
ಚಿತ್ರದ
ಹಾಡು
ಹೇಳುವ
ಮೂಲಕ
ಚಪ್ಪಾಳೆ
ಗಿಟ್ಟಿಸಿದರು.
ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾಧು ಹಾಗೂ ಶರಣ್ ವೃತ್ತಿ ಜೀವನದ ಬಗ್ಗೆ ಮಾತನಾಡಿಸಿದರು. ಶರಣ್ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದರೆ, ಸಾಧು ಕೋಕಿಲಾ ತಾನು ಎರಡು ರುಪಾಯಿ ಸಂಭಾವನೆಗೆ ಸಂಗೀತ ನೀಡಿದ ಬಗ್ಗೆ ಹೇಳಿಕೊಂಡರು. ಅದರ ಜೊತೆಗೆ ಇಬ್ಬರೂ ಸೇರಿ ಹಾಸ್ಯದ ಅಲೆ ಎಬ್ಬಿಸುತ್ತಲೇ ಕೋಟಿ ಗೆಲ್ಲುವ ಆಟ ಆಡಿದರು.
ಶರಣ್ ಹಾಗೂ ಸಾಧು ಕೋಕಿಲಾ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿ ವರ್ಗ ಹಾಗೂ ಪ್ರೇಕ್ಷಕರನ್ನು ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಆ ಇಬ್ಬರೂ ಸೇರಿ ಒಂದು ಉತ್ತಮ ಉದ್ದೇಶ ಇಟ್ಟುಕೊಂಡು, ಶಾಂತಿಗಿರಿ ಆಶ್ರಮದ ಚಾರಿಟಿಗೆ ಗೆದ್ದ ಮೊತ್ತವನ್ನು ನೀಡಲಿದ್ದಾರೆ.
ಈ ನಡುವೆ ಫೋನೋ ಫ್ರೆಂಡ್ ಪ್ರಶ್ನೆಗೆ ಉತ್ತರಿಸಲು ಬಂದು ನಟ ಉಪೇಂದ್ರ ಅವರ ಜೊತೆ ಸಾಧು ಹಾಗೂ ಪುನೀತ್ ಕಚಗುಳಿ ಇಡುವ ಸಂಭಾಷಣೆ ನಡೆಸಿದರು. ಈ ಹಂತದಲ್ಲಿ ಸಾಧು ಕೋಕಿಲಾ ಹೆಸರನ್ನು ನಾಮಕರಣ ಮಾಡಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ ಏನೆಂಬುದು ತಿಳಿಯಬೇಕಾದರೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನೋಡಲೇಬೇಕು!