Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಡಿ ಕಿಂಗ್ ಗಳ ಜೊತೆ ಕನ್ನಡದ ಕೋಟ್ಯಾಧಿಪತಿ!
ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಗಳಾದ ಶರಣ್ ಹಾಗೂ ಸಾಧು ಕೋಕಿಲಾ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ಭಾಗವಹಿಸಲಿದ್ದಾರೆ. ಇದೇ ಜುಲೈ 23 ರ ಮಂಗಳವಾರ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಶರಣ್, ಸಾಧು ಜುಗಲ್ ಬಂಧಿ ಆಡಲಿದ್ದಾರೆ!
ಹೆಚ್ಚಿನವರಿಗೆ
ಗೊತ್ತಿರದ
ವಿಷಯವೆಂದರೆ,
ಶರಣ್
ಒಬ್ಬ
ಅಪ್ರತಿಮ
ಹಾಡುಗಾರ
ಎಂಬ
ವಿಚಾರ.
ಶರಣ್
'Rambo'
ಚಿತ್ರದ
ಪ್ಯಾಥೋ
ಸಾಂಗ್
ಹಾಡುವ
ಮೂಲಕ
ಅಚ್ಚರಿ
ಮೂಡಿಸಿದರು.
ಅದಾದ
ನಂತರ
'ವಿಕ್ಟರಿ'
ಚಿತ್ರದ
ಖಾಲಿ
ಕ್ವಾಟ್ರು
ಬಾಟ್ಲೀ
ಹಂಗೇ
ಲೈಫೂ..
ಹಾಡಿಗೆ
ಧ್ವನಿಗೂಡಿಸಿದರು.
ಅದಾದ
ನಂತರ
ಸಾಧು
ಕೋಕಿಲಾ
ಅವರು
'ಕಾವ್ಯಾ'
ಚಿತ್ರದ
ಹಾಡು
ಹೇಳುವ
ಮೂಲಕ
ಚಪ್ಪಾಳೆ
ಗಿಟ್ಟಿಸಿದರು.
ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾಧು ಹಾಗೂ ಶರಣ್ ವೃತ್ತಿ ಜೀವನದ ಬಗ್ಗೆ ಮಾತನಾಡಿಸಿದರು. ಶರಣ್ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದರೆ, ಸಾಧು ಕೋಕಿಲಾ ತಾನು ಎರಡು ರುಪಾಯಿ ಸಂಭಾವನೆಗೆ ಸಂಗೀತ ನೀಡಿದ ಬಗ್ಗೆ ಹೇಳಿಕೊಂಡರು. ಅದರ ಜೊತೆಗೆ ಇಬ್ಬರೂ ಸೇರಿ ಹಾಸ್ಯದ ಅಲೆ ಎಬ್ಬಿಸುತ್ತಲೇ ಕೋಟಿ ಗೆಲ್ಲುವ ಆಟ ಆಡಿದರು.
ಶರಣ್ ಹಾಗೂ ಸಾಧು ಕೋಕಿಲಾ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿ ವರ್ಗ ಹಾಗೂ ಪ್ರೇಕ್ಷಕರನ್ನು ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಆ ಇಬ್ಬರೂ ಸೇರಿ ಒಂದು ಉತ್ತಮ ಉದ್ದೇಶ ಇಟ್ಟುಕೊಂಡು, ಶಾಂತಿಗಿರಿ ಆಶ್ರಮದ ಚಾರಿಟಿಗೆ ಗೆದ್ದ ಮೊತ್ತವನ್ನು ನೀಡಲಿದ್ದಾರೆ.
ಈ ನಡುವೆ ಫೋನೋ ಫ್ರೆಂಡ್ ಪ್ರಶ್ನೆಗೆ ಉತ್ತರಿಸಲು ಬಂದು ನಟ ಉಪೇಂದ್ರ ಅವರ ಜೊತೆ ಸಾಧು ಹಾಗೂ ಪುನೀತ್ ಕಚಗುಳಿ ಇಡುವ ಸಂಭಾಷಣೆ ನಡೆಸಿದರು. ಈ ಹಂತದಲ್ಲಿ ಸಾಧು ಕೋಕಿಲಾ ಹೆಸರನ್ನು ನಾಮಕರಣ ಮಾಡಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ ಏನೆಂಬುದು ತಿಳಿಯಬೇಕಾದರೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನೋಡಲೇಬೇಕು!