Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭ್ರಮೆ ಅಲ್ಲ: 'ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದ ಶಿವಣ್ಣ-ಪ್ರೇಮ್.!
Recommended Video
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರದ ಕೊನೆಗೆ 'ಬಿಗ್ ಬಾಸ್' ಮನೆಗೆ ಇಬ್ಬರು ವಿಶೇಷ ಅತಿಥಿಗಳು ಬಂದಿದ್ದರು. ಆ ಇಬ್ಬರು ವಿಶೇಷ ಅತಿಥಿಗಳು ಬೇರೆ ಯಾರೂ ಅಲ್ಲ... ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪ್ರೇಮ್.!
ಕಳೆದ ಐದು 'ಬಿಗ್ ಬಾಸ್' ಸೀಸನ್ ಗಳಲ್ಲಿ ವಿಶೇಷ ಅತಿಥಿಗಳು ಸುದೀಪ್ ಜೊತೆಗಿನ ವೇದಿಕೆಗೆ ಮಾತ್ರ ಸೀಮಿತವಾಗಿದ್ದರು. ಆದ್ರೆ, ಈ ಬಾರಿ ಅತಿಥಿಗಳಿಗೆ 'ಬಿಗ್ ಬಾಸ್' ಒಳಗೆ ರೌಂಡ್ ಹಾಕಿ, ಸ್ಪರ್ಧಿಗಳಿಗೆ ಟಾಸ್ಕ್ ಕೊಡುವ ಅವಕಾಶ ಕೊಡ ನೀಡಲಾಗಿದೆ.
ಅದರಂತೆ ವೀಕೆಂಡ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಡೈರೆಕ್ಟರ್ ಪ್ರೇಮ್ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟು ಸ್ಪರ್ಧಿಗಳ ಜೊತೆಗೆ ಕೆಲಕಾಲ ಹರಟಿದರು. ಮುಂದೆ ಓದಿರಿ...
ಸ್ಪರ್ಧಿಗಳಿಗೆ ಟಾಸ್ಕ್ ಕೊಟ್ಟ ಶಿವಣ್ಣ, ಪ್ರೇಮ್
'ಬಿಗ್ ಬಾಸ್' ಮನೆಗೆ ಹೋದ್ಮೇಲೆ, ''ಬಿಗ್ ಬಾಸ್' ಮನೆಯ ವಿಲನ್ ಯಾರು.?'' ಎಂಬುದನ್ನು ಬಹಿರಂಗ ಪಡಿಸುವ ಟಾಸ್ಕ್ ನ ಸ್ಪರ್ಧಿಗಳಿಗೆ ಶಿವಣ್ಣ ಹಾಗೂ ಪ್ರೇಮ್ ನೀಡಿದರು.
'ಬಿಗ್ ಬಾಸ್ ಕನ್ನಡ-6': ಮೊದಲ ವಾರವೇ ಔಟ್ ಆದ ರಕ್ಷಿತಾ ರೈ
ಬಹುತೇಕರ ಬಾಯಲ್ಲಿ ಆಂಡ್ರ್ಯೂ ಹೆಸರು.!
ಆಂಡ್ರ್ಯೂ ಮಾಡುವ ತಲೆಹರಟೆ, ತರ್ಲೆ ಕೆಲಸಗಳು ಕೆಲವರಿಗೆ ಈಗಾಗಲೇ ಕಿರಿಕಿರಿ ತಂದಿದೆ. ಹೀಗಾಗಿ, ಹಲವರ ಪಾಲಿಗೆ ಆಂಡ್ರ್ಯೂ 'ವಿಲನ್' ಆಗಿದ್ದಾರೆ. ಹೆಚ್ಚು ಜನರಿಂದ 'ವಿಲನ್' ಹಣೆಪಟ್ಟಿ ಪಡೆದ ಆಂಡ್ರ್ಯೂಗೆ ವಿಶೇಷ ಉಡುಗೊರೆ ಕೂಡ ಸಿಕ್ತು.
'ಬಿಗ್ ಬಾಸ್' ವೋಟಿಂಗ್ ಈಗ ಸಿಕ್ಕಾಪಟ್ಟೆ ಸಿಂಪಲ್: ಎಸ್.ಎಂ.ಎಸ್ ಕಳುಹಿಸುವ ಅಗತ್ಯ ಇಲ್ಲ.!
ಆಂಡ್ರ್ಯೂಗೆ ಸಿಕ್ತು 'ಸುರಕ್ಷ ಕವಚ'
ಹೆಚ್ಚು ಸ್ಪರ್ಧಿಗಳ ಪಾಲಿಗೆ ವಿಲನ್ ಆದ ಆಂಡ್ರ್ಯೂಗೆ ಶಿವಣ್ಣ ಕಡೆಯಿಂದ 'ಸುರಕ್ಷಾ ಕವಚ' ಸಿಕ್ತು. ಬಹುಶಃ ನಾಮಿನೇಷನ್ ಸಂದರ್ಭದಲ್ಲಿ ಈ 'ಸುರಕ್ಷ ಕವಚ'ವನ್ನ ಬಳಸಿಕೊಂಡು ಆಂಡ್ರ್ಯೂ ಸೇಫ್ ಆಗುವ ಸಾಧ್ಯತೆ ಹೆಚ್ಚಿದೆ.
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳು.!
ಶಿವಣ್ಣ ಮುಂದೆ ಊಟಕ್ಕೆ ಬೇಡಿಕೆ ಇಟ್ಟ ಸ್ಪರ್ಧಿಗಳು
''ಶಿವಣ್ಣನ ಮುಂದೆ ಸ್ಪರ್ಧಿಗಳು ಊಟಕ್ಕಾಗಿ ಬೇಡಿಕೆ ಇಟ್ಟರು. ಮುಂದಿನ ವಾರದೊಳಗೆ ಎಲ್ಲರಿಗೂ ನನ್ನ ಕಡೆಯಿಂದ ಊಟ ಸಿಗಲಿದೆ'' ಎಂದು ಶಿವಣ್ಣ ಮಾತು ಕೊಟ್ಟರು. ಶಿವಣ್ಣನ ಮಾತನ್ನು ನಡೆಸಿಕೊಡಲು 'ಬಿಗ್ ಬಾಸ್' ಅಪ್ಪಣೆ ಕೊಡ್ತಾರಾ ನೋಡಬೇಕು.