Don't Miss!
- News 7th pay commission: ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿದಂತೆ ಭತ್ಯೆಗಳ ಸಂಪೂರ್ಣ ವಿವರ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮ್ಮನಿಂದ ಸೌಟಿನಲ್ಲಿ ಹೊಡೆಸಿಕೊಂಡಿದ್ದರಂತೆ 'ಪಾರ್ವತಿ' ಪುತ್ರ 'ಶಿವ'ಣ್ಣ.!
ಶಿವರಾಜ್ ಕುಮಾರ್ ಇಂದು ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್... ಹ್ಯಾಟ್ರಿಕ್ ಹೀರೋ... ಕರುನಾಡ ಚಕ್ರವರ್ತಿ... ನಾಟ್ಯ ಸಾರ್ವಭೌಮ.! ತಮ್ಮ ಮೂವತ್ತೊಂದು ವರ್ಷಗಳ ಸಿನಿ ಜರ್ನಿಯಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ ಅಂದ್ರೆ ಕೋಟ್ಯಾಂತರ ಅಭಿಮಾನಿಗಳಿಗೆ ಪಂಚಪ್ರಾಣ.
ಇಂತಿಪ್ಪ ಶಿವಣ್ಣ ಚಿಕ್ಕವಯಸ್ಸಿನಲ್ಲಿ ಸಿಕ್ಕಾಪಟ್ಟೆ ತುಂಟ. ಪುಟಾಣಿ ಶಿವರಾಜ್ ಕುಮಾರ್ ತುಂಟತನದಿಂದ ಬೇಸೆತ್ತು ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸೌಟ್ ಹಿಡಿದುಕೊಂಡು ಹೊಡಿಯಲು ಓಡಿಬರುತ್ತಿದ್ದರಂತೆ. ಅಮ್ಮನಿಂದ ಎಷ್ಟೋ ಬಾರಿ ಶಿವಣ್ಣ ಸೌಟಿನಲ್ಲಿ ಒದೆ ತಿಂದಿದ್ದಾರಂತೆ.
ಹೇರ್ ಕಟ್ ಮಾಡಿಸಲು ಕರೆದುಕೊಂಡು ಹೋದರೆ, ಅರ್ಧಂಬರ್ಧ ಕೂದಲು ಕಟ್ ಮಾಡಿಸಿಕೊಂಡು ಓಡಿ ಹೋಗುತ್ತಿದ್ದರಂತೆ ಪುಟಾಣಿ ಶಿವರಾಜ್ ಕುಮಾರ್. ಆಗ ಪುಟ್ಟ ಶಿವನನ್ನ ಕಟ್ಟಿ ಹಾಕಿ ಹೇರ್ ಕಟ್ ಮಾಡಿಸುತ್ತಿದ್ದರಂತೆ ತಾಯಿ ಪಾರ್ವತಮ್ಮ.
ಅಬ್ಬಾ! ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸುಸ್ತಾಗುತ್ತೆ.!
ಹಾಗಂತ, ಸ್ವತಃ ಶಿವಣ್ಣ 'ಪಬ್ಲಿಕ್ ಟಿವಿ'ಗಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗ ಪಡಿಸಿದರು. ಅಮ್ಮನನ್ನ ಕಳೆದುಕೊಂಡ ನೋವಿನಲ್ಲಿ ಇದ್ದ ಶಿವಣ್ಣ, ತಮ್ಮ ಬಾಲ್ಯದ ದಿನಗಳನ್ನ ಹೀಗೆ ಮೆಲುಕು ಹಾಕಿದರು.
ಅಮ್ಮನ ನಿಧನದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಡ್ ನಲ್ಲಿ ಇಲ್ಲದಿದ್ದರೂ, ಅಭಿಮಾನಿಗಳ ಒತ್ತಾಯದ ಮೇರೆಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡರು ಶಿವಣ್ಣ.
''ಅಪ್ಪ-ಅಮ್ಮ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪು ನಮ್ಮೊಂದಿಗೆ ಸದಾ ಇರುತ್ತದೆ'' ಎಂದು ಶಿವರಾಜ್ ಕುಮಾರ್ ಹೇಳಿದರು.