Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್- ಅಶ್ವಿನಿ ಇಬ್ಬರನ್ನು ಮೊದಲು ಶಿವಣ್ಣ ನೋಡಿದ್ದೆಲ್ಲಿ?
ಜುಲೈ 12, ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಹುಟ್ಟುಹಬ್ಬ. ಈ ವಾರದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋವನ್ನು ಶಿವಣ್ಣಗೋಸ್ಕರ ಡೆಡಿಕೇಟ್ ಮಾಡಲಾಗಿತ್ತು. ಶಿವಣ್ಣ ಹುಟ್ಟುಹಬ್ಬ ಹಿನ್ನೆಲೆ ಎರಡೂ ಸಂಚಿಕೆಯನ್ನು ಶಿವರಾಜೋತ್ಸವ ಎಂದು ನಡೆಸಲಾಗಿತ್ತು.
ಹಾಗಾಗಿ ಇದು ಶಿವರಾಜೋತ್ಸವದ ಸಂಚಿಕೆ. ಈ ಸಂಚಿಕೆಯನ್ನು ಶಿವಣ್ಣನಿಗಾಗಿ ಅರ್ಪಿಸಿದ್ದಾರೆ. ಶಿವಣ್ಣನ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಲಾಯಿತು. ಇದರಿಂದ ಶಿವಣ್ಣ ತಮ್ಮ ಸಿನಿಮಾ ಜರ್ನಿಯ ನೆನಪುಗಳನ್ನು ಮೆಲುಕು ಹಾಕಿದರು. ಇದರ ಜೊತೆಗೆ ತಮ್ಮ ಕುಟುಂಬದ ಕೆಲ ಘಟನೆಗಳನ್ನು ನೆನೆದು ಭಾವುಕರಾದರು.
ಅಣ್ಣಾವ್ರ ಮಕ್ಕಳ ನಡುವೆ ಆಸ್ತಿಗಾಗಿ ಅಂದು ನಡೆದಿದ್ದೇನು..? ಶಿವಣ್ಣ ಕೊಟ್ಟ ಉತ್ತರ ಇಲ್ಲಿದೆ!
ಇನ್ನು ರಾಜ್ ಕುಮಾರ್ ಕುಟುಂಬಕ್ಕೂ, ಪಾರಿವಾಳಕ್ಕೂ ಅದೇನೋ ನಂಟು. ಈ ವಿಚಾರ ಹಾಗೂ ಶಿವರಾಜ್ ಕುಮಾರ್ ತಮ್ಮ ಮನೆಯ ಬಗ್ಗೆ ನೆನಪು ಮಾಡಿಕೊಂಡರು. ಅಲ್ಲದೇ, ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರ ಪ್ರೀತಿಯ ವಿಚಾರವನ್ನೂ ಶಿವಣ್ಣ ಹಂಚಿಕೊಂಡಿದ್ದಾರೆ.
ನೆನಪುಗಳ ಮೆಲುಕು, ಉಡುಗೊರೆಗಳ ಸುರಿಮಳೆ!
ಶಿವಣ್ಣನ ಹುಟ್ಟುಹಬ್ಬ ಹಿನ್ನೆಲೆ ಡಿಕೆಡಿ ವೇದಿಕೆಯಲ್ಲಿ ಶಿವಣ್ಣನಿಗೆ ಸಾಲು ಸಾಲು ಉಡುಗೊರೆಗಳನ್ನು ನೀಡಲಾಯ್ತು. ಈ ಉಡುಗೊರೆಗಳು ಕೇವಲ ಖುಷಿಯನ್ನು ಕೊಡದೇ, ನೆನಪುಗಳ ಸುರಿಮಳೆಯನ್ನೇ ಸುರಿಸಿದವು. ಶಿವಣ್ಣನ ಹಾಡುಗಳಿಗೆ ಕುಣಿದಾಗಲೆಲ್ಲಾ ಶಿವಣ್ಣ ತಮ್ಮ ಸಿನಿಮಾ ಜರ್ನಿಯನ್ನು ನೆನಪು ಮಾಡಿಕೊಂಡರು. ಇನ್ನು ಇದರ ಜೊತೆಗೆ ಬೆಂಗಳೂರಿನ ದಿಲೀಪ್ ಹಾಗೂ ವಿಧಿತ ಇಬ್ಬರೂ "ಕಡಲೋ ಕಣ್ ಕಡಲೋ" ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡಿನ ಮೂಲಕ ಶಿವಣ್ಣ ಪಾರಿವಾಳವನ್ನು ನೆನಪು ಮಾಡಿಕೊಂಡರು.
'ನಾನು ಅಪ್ಪುಗೆ ಕೊಡುವ ಗೌರವ ಯಾರಿದಂಲೂ ಕೊಡಲು ಸಾಧ್ಯವೇ ಇಲ್ಲ'-ಶಿವಣ್ಣ
ಪಾರಿವಾಳದ ಕಥೆ ಹೇಳಿದ ಶಿವಣ್ಣ!
ಶಾಂತಿ ಮತ್ತು ಪ್ರೀತಿಯನ್ನು ಸಾರುವ ಪಾರಿವಾಳಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಎಂದರೆ ತಪ್ಪಾಗಲಾರದು. ಅಣ್ಣವ್ರ 'ಕಸ್ತೂರಿ ನಿವಾಸ' ಚಿತ್ರದಲ್ಲಿ ಪಾರಿವಾಳ ವಿಶೇಷ ಪಾತ್ರವನ್ನು ನಿರ್ವಹಿಸಿತ್ತು. ಅದರಂತೆಯೇ, ಶಿವಣ್ಣ ಹಾಗೂ ಅಪ್ಪು ಸಿನಿಮಾಗಳಲ್ಲೂ ಪಾರಿವಾಳವಿತ್ತು. ಇನ್ನು ಜೀ ಕನ್ನಡ ವಾಹಿನಿ ಶಿವಣ್ಣಗೆ ಪಾರಿವಾಳವನ್ನು ಉಡುಗೊರೆಯಾಗಿ ಕೊಟ್ಟಾಗ, ತಮ್ಮ ಕುಟುಂಬದೊಂದಿಗೆ ಪಾರಿವಾಳಕ್ಕಿರುವ ನಂಟನ್ನು ನೆನೆದರು. ಈ ವೇಳೆ ಮಾತನಾಡಿ, ಅದೇನೋ ನಮ್ಮ ಕುಂಟುಂಬಕ್ಕೂ ಹಾಗೂ ಪಾರಿವಾಳಕ್ಕೂ ಆಗಿ ಬರುತ್ತೆ. ಅಪ್ಪನ ಚಿತ್ರದಲ್ಲಿ ಪಾರಿವಾಳವಿತ್ತು. ಹಾಗೆಯೇ ನನ್ನ ಮತ್ತು ಅಪ್ಪು ಸಿನಿಮಾದಲ್ಲೂ ಇತ್ತು ಎಂದು ಹೇಳಿದರು.
ಥಿಯೇಟರ್ನಲ್ಲಿ ಅಪ್ಪು, ಅಶ್ವಿನಿಯನ್ನು ನೋಡಿದ್ದ ಶಿವಣ್ಣ!
ಪಾರಿವಾಳವನ್ನು ಕಂಡ ಶಿವಣ್ಣ, ಅಪ್ಪು ಹಾಗೂ ಅಶ್ವಿನಿ ಅವರು ಪ್ರೀತಿಸುತಿದ್ದ ವಿಚಾರವನ್ನು ಮೆಲುಕು ಹಾಕಿದರು. 'ಕಸ್ತೂರಿ ನಿವಾಸ' ಚಿತ್ರ ರಿಲೀಸ್ ಆದಾಗ ಅಪ್ಪು ಹಾಗೂ ಅಶ್ವಿನಿ ಸಿನಿಮಾ ನೋಡಲು ಕಾವೇರಿ ಥಿಯೇಟರ್ಗೆ ಬಂದಿದ್ದರಂತೆ. ಆಗ ಶಿವಣ್ಣನ ಕಣ್ಣಿಗೆ ಈ ಜೋಡಿ ಸಿಕ್ಕಿ ಬಿದ್ದಿದ್ದರಂತೆ. ಅಲ್ಲೇ ಅಪ್ಪು ಜೊತೆಗೆ ಅಶ್ವಿನಿ ಅವರನ್ನು ಮೊದಲು ಶಿವಣ್ಣ ನೋಡಿದ್ದರಂತೆ. ಆಗ ಅಶ್ವಿನಿ ಅವರನ್ನು ಅಪ್ಪು, ಶಿವಣ್ಣಗೆ ಪರಿಚಯ ಮಾಡಿಕೊಟ್ಟರಂತೆ.
ಶಿವಣ್ಣನಿಗೆ 60ನೇ ವಸಂತದ ಸಂಭ್ರಮ!
ಶಿವಣ್ಣನ ಹುಟುಹಬ್ಬವನ್ನು ಮುಂಚಿತವಾಗಿಯೇ ಡಿಕೆಡಿ ರಿಯಾಲಿಟಿ ಶೋನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಪ್ರಸಾರವಾದ ಎಪಿಸೋಡ್ ಗಳನ್ನು ಶಿವರಾಜೋತ್ಸವವನ್ನಾಗಿ ಆಚರಿಸಿ ಸಂಭ್ರಮಿಸಲಾಯ್ತು. ಈ ಎಪಿಸೋಡ್ಗಳಲ್ಲಿ ಶಿವಣ್ಣನ ಚಿತ್ರಗಳ ಹಾಡಿಗೆ ಸ್ಪರ್ಧಿಗಳು ಹೆಜ್ಜೆ ಹಾಕಿ ರಂಜಿಸಿದರು. ಸ್ಪರ್ಧಿಗಳು ಕೂಡ ಡಾನ್ಸ್ ಮೂಲಕ ಶಿವಣ್ಣನಿಗೆ ವಿಶ್ ಮಾಡಿದ್ದಾರೆ. ಡಿಕೆಡಿ ವೇದಿಕೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.