Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವ ಭೀಷ್ಮ ಪಾತ್ರ ಖ್ಯಾತಿಯ ಸುನೀಲ್ ನಗರ್
ಕೊರೊನಾ ಲಾಕ್ ಡೌನ್ ನಿಂದ ಅನೇಕರ ಬದುಕು ಬೀದಿಗೆ ಬಂದಿದೆ. ಕಳೆದ ವರ್ಷದ ಲಾಕ್ ಡೌನ್ ನಿಂದನೇ ಇನ್ನು ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ಮತ್ತೆ ಹೇರಿರುವ ಲಾಕ್ ಡೌನ್ ಅನೇಕರನ್ನು ಕಷ್ಟದ ಕೂಪಕ್ಕೆ ತಳ್ಳಿದೆ.
ಒಂದೆದೆ ಜನ ಆಸ್ಪತ್ರೆ, ಬೆಡ್, ಆಕ್ಸಿಜನ್ ಅಂತ ಪರದಾಡುತ್ತಿದ್ದರೆ ಮತ್ತೊಂದೆದೆ ಒಂದೊತ್ತಿನ ಊಟಕ್ಕಾಗಿ ಒದ್ದಾಡುತ್ತಿದ್ದಾರೆ. ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸುನಿಲ್ ನಗರ್ ಬದುಕು ಕೂಡ ಬೀದಿಗೆ ಬಂದಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಟ ಸುನಿಲ್ ಬಾಡಿಗೆ ಕಟ್ಟಲಾಗದೆ ಕಷ್ಟಪಡುತ್ತಿದ್ದಾರೆ. ದಿನನಿತ್ಯದ ಖರ್ಚಿಗೆ ಹಣವಿಲ್ಲದೆ ಸುನಿಲ್ ಕಣ್ಣೀರಿಡುತ್ತಿದ್ದಾರೆ. ಮುಂದೆ ಓದಿ..
ಕುಟುಂಬದವರು ಕೈ ಬಿಟ್ಟಿದ್ದಾರೆ
ಹಿಂದಿಯ ಪ್ರಸಿದ್ಧ ಶ್ರೀ ಕೃಷ್ಣ ಧಾರಾವಾಹಿಯಲ್ಲಿ ಭೀಷ್ಮ ಪಾತ್ರದ ಮೂಲಕ ಸುನಿಲ್ ನಗರ್ ಪ್ರಖ್ಯಾತಿ ಗಳಿಸಿದ್ದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಸುನಿಲ್ ಈಗ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬದವರು ಸಹ ಅವರನ್ನು ನೋಡಿಕೊಳ್ಳದೆ ದೂರ ತಳ್ಳಿದ್ದಾರೆ.
ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದೆ, ನನ್ನ ಸ್ಥಿತಿ ಹೀಗಾಗಿದೆ
ಸಂಕಷ್ಟದ ಪರಿಸ್ಥಿತಿ ಬಗ್ಗೆ ನಟ ಸುನಿಲ್ ಮಾಧ್ಯಮದ ಜೊತೆ ಮಾಡಿದ್ದಾರೆ. 'ಕುಟುಂಬದವರು ನನ್ನನ್ನು ದೂರ ತಳ್ಳಿದ್ದಾರೆ. ನನ್ನ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದೆ. ಕಾನ್ವೆಂಟ್ ಶಾಲೆಯಲ್ಲಿ ಓದಿಸಿದೆ. ಆದರೆ ನನ್ನ ಪರಿಸ್ಥಿತಿ ಈಗ ಹೀಗಾಗಿದೆ. ನನಗೆ ಒಡಹುಟ್ಟುದವರು ಇದ್ದಾರೆ. ಆದರೆ ಸಹಾಯಕ್ಕೆ ಬಂದಿಲ್ಲ. ಅದೃಷ್ಟ ನನಗೆ ಕೊರೊನಾ ಇಲ್ಲ. ಆದರೆ ಬೇರೆ ಆರೋಗ್ಯ ಸಮಸ್ಯೆಗಳಿವೆ. ಜೀವನ ನನಗೆ ಉತ್ತಮವಾದ ದಿನ ತೋರಿಸುತ್ತೆ ಎಂದು ಭಾವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ರೆಸ್ಟೋರೆಂಟ್ ನಲ್ಲಿ ಹಾಡುತ್ತಿದ್ದೆ, ಈಗ ಮುಚ್ಚಿದ್ದಾರೆ
'ನಾನು ಗಾಯಕ. ಕೆಲವು ದಿನಗಳ ಹಿಂದೆ ನನ್ನ ದಿನನಿತ್ಯದ ಖರ್ಚುಗಳನ್ನು ನೋಡಿಕೊಳ್ಳಲು ನಾನು ರೆಸ್ಟೋರೆಂಟ್ ನಲ್ಲಿ ಹಾಡಲು ಪ್ರಾರಂಭಿಸಿದೆ. ಆದರೀಗ ಲಾಕ್ ಡೌನ್ ಆಗಿದೆ. ರೆಸ್ಟೋರೆಂಟ್ ಮುಚ್ಚಿದ್ದಾರೆ. ಕಳೆದ ತಿಂಗಳಿಂದ ನನಗೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.
ಸಿನಿ ಮತ್ತು ಟಿವಿ ಕಲಾವಿದರ ಸಂಘದ ಮೊರೆ ಹೋಗಿರುವ ನಟ
ನಟ ಸುನಿಲ್ ಸದ್ಯ ಸಿನಿಮಾ ಮತ್ತು ಟಿವಿ ಆರ್ಟಿಸ್ಟ್ ಅಸೋಸಿಯೇಶನ್ ಯಿಂದ ಸಹಾಯ ಕೇಳಿದ್ದಾರೆ. ಸಹಾಯ ಮಾಡುವುದಾಗಿ ಹೇಳಿದ್ದಾರೆ, ಇನ್ನು ಎಷ್ಟು ಸಮಯ ತೆಗೆದುಕೊಳ್ಳುತ್ತೆ ಎನ್ನುವುದು ಗೊತ್ತಿಲ್ಲ ಎಂದು ಸುನಿಲ್ ಹೇಳಿದ್ದಾರೆ.
ನಟ
ಸುನಿಲ್
ಧಾರಾವಾಹಿ
ಜೊತೆಗೆ
ಸಿನಿಮಾಗಳಲ್ಲು
ನಟಿಸಿದ್ದಾರೆ.
ತಾಲ್,
ಯು
ಆರ್
ಮೈ
ಜಾನ್
ಸೇರಿದಂತೆ
ಅನೇಕ
ಸಿನಿಮಾಗಳಲ್ಲಿ
ನಟಿಸಿದ್ದಾರೆ.
ಓಂ
ನಮಃ
ಶಿವಾಯ,
ಶ್ರೀಗಣೇಶ್,
ಕಬೂಲ್
ಹೈ
ಸೇರಿದಂತೆ
ಮುಂತಾದ
ಸಿರೀಸ್
ಗಳಲ್ಲಿ
ನಟಿಸಿದ್ದಾರೆ.