Just In
Don't Miss!
- News
BREAKING: ಖಾತೆ ಹಂಚಿಕೆ ಕುರಿತು ಮೌನ ಮುರಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
- Education
RBI Recruitment 2021: 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಹಳೆಯ 100 ರೂಪಾಯಿ ನೋಟುಗಳನ್ನು ಆರ್ಬಿಐ ಹಿಂಪಡೆಯುವ ಸಾಧ್ಯತೆ!
- Automobiles
ವಿವಿಧ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಟಾಟಾ ಮೋಟಾರ್ಸ್
- Lifestyle
ನಿಮ್ಮ ಡಲ್ ಸ್ಕಿನ್ ಹೋಗಲಾಡಿಸಲು ಸುಲಭವಾದ ಮನೆಮದ್ದು ಇಲ್ಲಿದೆ
- Sports
ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್ ಶ್ರೀಶಾಂತ್ ಸಜ್ಜು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸರಿಗಮಪ ಸೀಸನ್ 17'; ವಿನ್ನರ್ ಆಗಿ ಹೊರಹೊಮ್ಮಿದ ಶ್ರೀನಿಧಿ ಶಾಸ್ತ್ರಿ
ಕನ್ನಡ ಕಿರುತೆರೆ ಲೋಕದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ 17ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ನಿನ್ನೆ (ಡಿಸೆಂಬರ್20) ಸರಿಗಮಪ ಸೀಸನ್ 17 ಫಿನಾಲೆ ಅದ್ದೂರಿಯಾಗಿ ನಡೆದಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಈ ಬಾರಿ ವಿನ್ನರ್ ಆಗಿ ಶ್ರೀನಿಧಿ ಶಾಸ್ತ್ರಿ ಹೊರಹೊಮ್ಮಿದ್ದಾರೆ.
ಅಶ್ವಿನ್ ಶರ್ಮಾ, ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ, ಕಂಬದ ರಂಗಯ್ಯ ಮತ್ತು ಶಾರದಾ ಪಾಟೀಲ್ ಟಾಪ್ 5ನಲ್ಲಿ ಸ್ಥಾನ ಪಡೆದು, ಫೈನಲ್ ಪ್ರವೇಶ ಮಾಡಿದ್ದರು. ಎಲ್ಲಾ ಪ್ರತಿಭಾವಂತ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿತ್ತು. ಅಂತಿಮವಾಗಿ ಶ್ರೀನಿಧಿ ಶಾಸ್ತ್ರಿ ಸೀಸನ್ 17 ಪಟ್ಟವನ್ನು ಗೆದ್ದು ಬೀಗಿದ್ದಾರೆ.
Bigg Boss Telugu 4; ಈ ಬಾರಿ 'ಬಿಗ್ ಬಾಸ್' ಗೆದ್ದು ಬೀಗಿದ ನಟ ಅಭಿಜಿತ್
ಫಿನಾಲೆಯಲ್ಲಿ ಶ್ರೀನಿಧಿ ಶಾಸ್ತ್ರಿ ಜೀವನ ಚೈತ್ರಾ ಸಿನಿಮಾ ನಾದಮಯ ಹಾಡನ್ನು ಮತ್ತು ನಟನವಿ ಶಾರದ ನಟಶೇಖರ ಹಾಡನ್ನು ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಶ್ರೀನಿಧಿ ಟ್ರೋಪಿ ಜೊತೆ 10 ಲಕ್ಷ ರೂ.ಗಳನ್ನು ಶ್ರೀನಿಧಿ ಬಹುಮಾನವಾಗಿ ಪಡೆದಿದ್ದಾರೆ.
ಇನ್ನು ಮೊದಲ ರನ್ನರ್ ಅಪ್ ಆಗಿ ಅಶ್ವಿನ್ ಶರ್ಮಾ ಹೊರಹೊಮ್ಮಿದ್ದಾರೆ. ಅವರಿಗೆ 5 ಲಕ್ಷ ರೂ. ನಗದು ಬಹುಮಾನ ದೊರಕಿದೆ. ಕಂಬದ ರಂಗಯ್ಯ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಸರಿಗಮಪ ಸೀಸನ್ 17ವಿನ್ನರ್ ಆಗಿ ಹೊರಹೊಮ್ಮಿರುವ ಶ್ರೀನಿಧಿಗೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಇನ್ನೂ ಜಡ್ಜ್ ಸ್ಥಾನದಲ್ಲಿದ್ದ ಗಾಯಕ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ಹಂಸಲೇಖ ಕೂಡ ಫಿನಾಲೆ ವೇದಿಕೆಯಲ್ಲಿದ್ದು ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಿದರು. ವಿಶೇಷ ಎಂದರೆ ಈ ವರ್ಷ ಫಿನಾಲೆಯನ್ನು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂಗೀತ ನಮನ ಸಲ್ಲಿಸಲಾಯಿತು.