Shrirastu Shubhamasthu: ಮನದ ಮಾತುಗಳನ್ನು ತುಳಸಿ ಬಳಿ ಹೇಳಿಕೊಂಡ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಹಣ ತೆಗೆದುಕೊಂಡು ಹೋಗಿರುವುದು ತುಳಸಿಗೆ ತಿಳಿದು ಬಹಳ ಬೇಸರವಾಗಿರುತ್ತದೆ. ಜೊತೆಗೆ ಮಾಧವ್ ತನಗಾಗಿ ಎಷ್ಟೆಲ್ಲಾ ಮಾಡಿದ್ದಾರೆ ಎಂಬುದನ್ನು ಕೇಳಿ ಸಂಕಟ ಅನುಭವಿಸುತ್ತಿರುತ್ತಾಳೆ. ಇನ್ನು ಕೆಫೆಯಲ್ಲಿ ಮಾಧವ್ಗೆ ಊಟ ಬಡಿಸುವಾಗಲೂ ತುಳಸಿ ಕಣ್ಣೀರು ಹಾಕುತ್ತಿರುತ್ತಾಳೆ. ತುಳಸಿಯ ಮನಸ್ಸನ್ನು ಅರಿತ ಮಾಧವ್ ಯಾಕೆ ಏನಾಯ್ತು ಎಂದು ಕೇಳಿ ಸಮಾಧಾನ ಮಾಡುತ್ತಾನೆ.
ತುಳಸಿ ನಿಮ್ಮ ಬಳಿ ಯಾವ ವಿಚಾರವನ್ನು ಮುಚ್ಚಿಡಲು ನನಗೆ ಇಷ್ಟವಿಲ್ಲ. ನಿಮಗೆ ಕೊಡಬೇಕಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದು, ನನ್ನ ಮಗಳು ನಂಬಿಸಿ ಮೋಸ ಮಾಡಿದ್ದಾಳೆ ಎಂದು ಹೇಳಿಕೊಳ್ಳುತ್ತಾಳೆ. ತುಳಸಿ ಮನದ ಮಾತುಗಳನ್ನು ಹೇಳಿಕೊಂಡು ಹಗುರ ಮಾಡಿಕೊಂಡಿರುತ್ತಾಳೆ. ಆಟೋಗಾಗಿ ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತಿರುತ್ತಾಳೆ.

ಈ ವೇಳೆ ಬರುವ ಮಾಧವ್ ತುಳಸಿಯನ್ನು ನೋಡಿ, ತನ್ನ ಮನದ ಮಾತುಗಳನ್ನು ಕೇಳಿದಂತೆ, ಸಂಗಾತಿಯಾಗಿ ಎಂದು ಮನಬಿಚ್ಚಿ ಮಾತನಾಡಿದಂತೆ ಕನಸು ಕಾಣುತ್ತಾನೆ. ತುಳಸಿ ಎಚ್ಚರಿಸಿದ ಮೇಲೆ, ಇಷ್ಟೊತ್ತಿನಲ್ಲಿ ಒಬ್ಬರನ್ನೇ ಕಳಿಸುವುದು ಸರಿಯಲ್ಲ ಎಂದು ಕ್ಯಾಬ್ ಬುಕ್ ಮಾಡಿ ಜೊತೆಗೆ ತಾನೂ ಹೋಗುತ್ತಾನೆ. ಕ್ಯಾಬ್ನಲ್ಲಿ ಹಾಗೆ ಮಾತನಾಡುತ್ತಾ ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾನೆ. ಆದರೆ, ತುಳಸಿ ಅಷ್ಟೊತ್ತಿಗೆ ಮಲಗಿ ನಿದ್ದೆ ಮಾಡಿ ಬಿಟ್ಟಿರುತ್ತಾಳೆ. ಮಾಧವ್ ಹೇಳಿದ್ದೆಲ್ಲವೂ ವ್ಯರ್ಥವಾಗಿ ಬಿಡುತ್ತದೆ.
ಅಭಿ ಬಗ್ಗೆ ಯೋಚಿಸುತ್ತಿರುವ ಅವಿ
ಇತ್ತ ಅವಿನಾಶ್ಗೆ ಅಭಿಯದ್ದೇ ಯೋಚನೆಯಾಗಿರುತ್ತದೆ. ತಾನು ಒಳ್ಳೆಯದನ್ನು ಮಾಡಲು ಹೋದರೂ ಕೂಡ ತಪ್ಪಾಯ್ತಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಅಭಿಗೆ ಸತ್ಯ ಅರ್ಥ ಮಾಡಿಸಲು ಮುಂದಾದಾಗಲೂ ಕೂಡ ಅಭಿ, ಅವಿಯ ಮಾತುಗಳನ್ನು ಕೇಳುವುದಕ್ಕೆ ತಯಾರಿರುವುದಿಲ್ಲ. ಈ ವಿಚಾರವನ್ನು ಪೂರ್ಣಿಮಾ ಬಳಿ ಹೇಳಿಕೊಂಡು ಅವಿ ಬೇಸರವನ್ನು ವ್ಯಕ್ತಪಡಿಸುತ್ತಾನೆ.

ಪೂರ್ಣಿಮಾ ಸದ್ಯಕ್ಕೆ ಸುಮ್ಮನಾಗಿ, ಎಲ್ಲವೂ ತಾನಾಗಿಯೇ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡುತ್ತಾಳೆ. ಪೂರ್ಣಿಮಾ ಮಾತುಗಳನ್ನು ಕೇಳಿದ ಮೇಲೆ ಅವಿಗೂ ಕೂಡ ಸಮಯ ತಿಳಿಯಾದಂತೆ ಎಲ್ಲವೂ ಸರಿ ಹೋಗಬಹುದು ಎಂದು ಸುಮ್ಮನಾಗುತ್ತಾನೆ.
ಹಣ ಕಳೆದುಕೊಂಡು ತಾತ ಕಂಗಾಲು
ಸಂಧ್ಯಾ ಹಣ ತೆಗೆದುಕೊಂಡು ಹೋಗಿರುವುದಕ್ಕೆ ದತ್ತ ತಾತ ಬಹಳ ನೋವು ಅನುಭವಿಸುತ್ತಿರುತ್ತಾರೆ. ಊಟ ಮಾಡದೇ ಯೋಚಿಸುತ್ತಿರುತ್ತಾರೆ. ಈ ವಿಚಾರ ತಿಳಿದ ಸಮರ್ಥ್ ಮನೆಗೆ ಬಂದು ತಾತನಿಗೆ ಸಮಾಧಾನ ಮಾಡುತ್ತಾನೆ. ಪೊಲೀಸ್ ಠಾಣೆಗೆ ಹೋಗಿ ದೂರು ಕೊಡೋಣ ಎಂದು ಹೇಳುತ್ತಾನೆ. ಆದರೆ, ದತ್ತ ತಾತ ಇದು ಮನೆಯ ವಿಚಾರ ಹಾಗೆಲ್ಲಾ ಮಾಡುವುದು ಬೇಡ ಎಂದು ಹೇಳುತ್ತಾರೆ.
ಹತ್ತು ಲಕ್ಷ ರೂಪಾಯಿ ಕಳೆದು ಹೋಯ್ತು ಎಂಬ ಆವೇಷದಲ್ಲಿ ಸಮರ್ಥ್, ಇಂತಹ ಸಂದರ್ಭದಲ್ಲೇ ಸ್ನೇಹಿತರು ಅಂತ ಯಾರ್ಯಾರನ್ನೋ ಮನೆಗೆ ಕರೆದುಕೊಂಡು ಬಂದಿದ್ದೀರಾ. ಈ ಮನೆ ಛತ್ರ ಆಗಿದೆ ಎನ್ನುತ್ತಾನೆ. ಈ ಮಾತನ್ನು ಶೇಷು ಹಾಗೂ ಗೋದಾವರಿ ಕೂಡ ಕೇಳಿಸಿಕೊಂಡು ಬಿಡುತ್ತಾರೆ.
ಸಂಧ್ಯಾ ಫುಲ್ ಎಂಜಾಯ್
ಸಂಧ್ಯಾ ತಾನು ಕದ್ದ ಹಣದಲ್ಲಿ ಹೋಟೆಲ್ ರೂಮ್ನಲ್ಲಿ ಗಂಡನ ಜೊತೆಗೆ ತಂಗಿರುತ್ತಾಳೆ. ಸೋಫಾ, ಫ್ರಿಡ್ಜ್, ವಾಶಿಂಗ್ ಮಿಷಿನ್ ಎಲ್ಲವನ್ನೂ ಬುಕ್ ಮಾಡಿರುತ್ತಾಳೆ. ಪ್ರಸಾದ್ ಸಂಧ್ಯಾಳಿಗೆ ನೀನು ಮಾಡಿರುವುದು ತಪ್ಪು. ಇದರಿಂದ ಕೋರ್ಟು, ಕಚೇರಿ ಅಂತ ಓಡಾಡಬೇಕಾಗುತ್ತದೆ ಎಂದು ಹೇಳುತ್ತಾನೆ. ಆದರೆ ಸಂಧ್ಯಾ, ಪ್ರಸಾದ್ ಮಾತನ್ನು ಕೇಳುವುದಕ್ಕೂ ತಯಾರಿರುವುದಿಲ್ಲ. ಕದ್ದ ಹಣದಲ್ಲಿ ಮಸ್ತ್ ಮಜಾ ಮಾಡುತ್ತಿರುತ್ತಾಳೆ. ಇದರಿಂದ ಮುಂದೇನಾಗುತ್ತದೋ ಗೊತ್ತಿಲ್ಲ.


Click it and Unblock the Notifications











