Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಂಗಳೆಯರ ಮನಗೆದ್ದ ಶ್ರುತಿಯ ಚಿತ್ತ ಈಗ ತಮಿಳರ ಮೇಲೆ
ಇದು ಗೊತ್ತಾಗುತ್ತಿದ್ದಂತೆ ಅನೇಕ ಕಲಾವಿದರು ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ಶ್ರುತಿ ಸರದಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ ಬೆರಳಣಿಕೆ ನಟಿಮಣಿಯರಲ್ಲಿ ಶ್ರುತಿ ಕೂಡಾ ಒಬ್ಬರು.
ತಮ್ಮ
ಅಳುಮುಂಜಿ
ಪಾತ್ರಗಳಿಂದಲೇ
ನಾಡಿನಾದ್ಯಂತ
ಹೆಂಗಳೆಯರ
ಮನಗೆದ್ದ
ಶ್ರುತಿ
ಆಗೊಮ್ಮೆ
ಈಗೊಮ್ಮೆ
ಎಂಬಂತೆ
ಈಗಲೂ
ಸಿನಿಮಾಗಳಲ್ಲಿ
ಕಾಣಿಸಿಕೊಳ್ಳುತ್ತಲೇ
ಇದ್ದಾರೆ.
ಅವರ
ಸಹೋದರ
ಶರಣ್
ನಿರ್ಮಾಣದ
Rambo
ಚಿತ್ರದಲ್ಲಿ
ಶ್ರುತಿ
ಜಿಲ್ಲಾಧಿಕಾರಿಯಾಗಿ
ಕಾಣಿಸಿಕೊಂಡಿದ್ದಾರೆ.
ಅದು
ಇತ್ತೀಚಿನ
ಉದಾಹರಣೆ.
ಆ ಚಿತ್ರ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಸನ್ ಟಿವಿಯಲ್ಲಿ ಪ್ರಸಾರ ಕಾಣಲಿರುವ 'ಕಾರ್ತಿಗೈ ಪೆಣ್ಣಳ್' ಧಾರಾವಾಹಿಗಾಗಿ ಶ್ರುತಿ ಇದೇ ಮೊಟ್ಟ ಮೊದಲಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ.
ಜುಲೈ ಮೂವತ್ತನೇ ತಾರೀಕಿನಿಂದ ಸನ್ ಟಿವಿಯಲ್ಲಿ ಈ ಧಾರವಾಹಿ ಈಗಾಗಲೇ ಪ್ರಸಾರ ಆರಂಭವಾಗಿದೆ. ಶ್ರುತಿ ತಮಿಳರಿಗೆ ಅಪರಿಚಿತ ಮುಖವೇನಲ್ಲ. ಈ ಹಿಂದೆ ಕೆ ಬಾಲಚಂದರ್ ನಿರ್ದೇಶನದ ಕಲ್ಕಿ ಚಿತ್ರಕ್ಕಾಗಿ ಶ್ರುತಿ ತಮಿಳಿಗೆ ವಲಸೆ ಹೋಗಿದ್ದರು.
ಅದರಲ್ಲಿನ ಪಾತ್ರ ಶ್ರುತಿಗೆ ತಮಿಳುನಾಡಿನಾದ್ಯಂತ ಜನಪ್ರಿಯತೆ ತಂದು ಕೊಟ್ಟಿತ್ತು ಅಲ್ಲದೆ ಆಕೆಗೆ ತಮಿಳುನಾಡು ರಾಜ್ಯ ಸರಕಾರದ ಅವಾರ್ಡ್ ಕೂಡಾ ಬಂದಿತ್ತು. ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ಶ್ರುತಿ ತಮಿಳು ಪ್ರೇಕ್ಷಕರಿಗೆ ಎದುರಾಗುತ್ತಿದ್ದಾರೆ.