Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಸಿನಿಮಾರಂಗಕ್ಕೆ ಸಿಕ್ಕಾಯ್ತು ಹೊಸ ಲೀಡರ್ !
Recommended Video
ಯಾವುದೇ ಸಿನಿಮಾರಂಗವಾದರೂ ಅದನ್ನ ನೆಡೆಸಿಕೊಂಡು ಹೋಗಲು ಒಬ್ಬ ಲೀಡರ್ ನ ಅವಶ್ಯಕತೆ ಇದ್ದೇ ಇರುತ್ತೆ. ಚಿತ್ರರಂಗದಲ್ಲಿ ಸಮಸ್ಯೆಗಳಾದ, ಶೂಟಿಂಗ್ ವೇಳೆಯಲ್ಲಿ ಏನಾದರೂ ಹೆಚ್ಚು ಕಮ್ಮಿ ಆದಾಗ ಸಿನಿಮಾದಲ್ಲಿ ಕೆಲಸ ಮಾಡುವ ಕಾರ್ಮಿಕರ ನೋವು ನಲಿವುಗಳನ್ನ ಹಂಚಿಕೊಳ್ಳಲು ಯಾರದರೂ ಒಬ್ಬರು ನಿಂತು ಚಿತ್ರರಂಗವನ್ನ ಮುನ್ನಡೆಸಬೇಕಾಗುತ್ತದೆ. ಸದ್ಯ ಕನ್ನಡ ಸಿನಿಮಾರಂಗವನ್ನ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಶಿವರಾಜ್ ಕುಮಾರ್ ಮುಂದೆ ನಿಂತು ನಡೆಸಿಕೊಂಡು ಹೋಗುತ್ತಿದ್ದಾರೆ.
ಮುಂದಿನ ಪೀಳಿಗೆಯನ್ನ ಮುನ್ನೆಡೆಸಲು ಸ್ಯಾಂಡಲ್ ವುಡ್ ಗೆ ಹೊಸ ಲೀಡರ್ ಸಿಕ್ಕಾಗಿದೆ. ಅದ್ಯಾರಪ್ಪಾ ಅಂದ್ರೆ ರಾಕಿಂಗ್ ಸ್ಟಾರ್ ಯಶ್. ಹೌದು ಈ ಮಾತನ್ನ ನಾವು ಹೇಳಿದಲ್ಲಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವ್ರೇ ಹೇಳಿದ್ದು.
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್
ಶಿವಣ್ಣ ನಡೆಸಿಕೊಡುವ 'ನಂ 1 ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್ ಶಿವರಾಜ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾರಂಗವನ್ನ ಯಾರು ಚೆನ್ನಾಗಿ ನಡೆಸಿಕೊಂಡು ಹೋಗಬಹುದು, ಕನ್ನಡ ಚಿತ್ರರಂಗವನ್ನ ಬೇರೆಯದ್ದೇ ಹಂತಕ್ಕೆ ಯಾರು ತೆಗೆದುಕೊಂಡು ಹೋಗುತ್ತಾರೆ ಎಂದು ಕೇಳಿದಾಗ ಶಿವಣ್ಣ ನನ್ನ ಪ್ರಕಾರ ಯಶ್ ಅಂತ ಉತ್ತರಿಸಿದ್ದಾರೆ.
ಚಿತ್ರರಂಗವನ್ನ ಮುನ್ನೆಡಿಸಿಕೊಂಡು ಹೋಗುವುದು ಸುಲಭವಾದ ಮಾತಲ್ಲ. ಎಲ್ಲರಿಗೂ ಸಮ್ಮತವಾಗುವಂತಹ ನ್ಯಾಯ ನೀಡುವ ಶಕ್ತಿ ಇರುವಂತವರಾಗಿರಬೇಕು. ಅದರ ಜೊತೆಯಲ್ಲಿ ಉತ್ತಮ ಸಿನಿಮಾಗಳನ್ನ ನೀಡಿ ಪ್ರೇಕ್ಷಕರ ಮನಸ್ಸು ಗೆದ್ದಿರಬೇಕು. ಯಶ್ ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅದನ್ನ ಈಗಾಗಲೇ ಸಾಕಷ್ಟು ಭಾರಿ ನಿರೂಪಿಸಿದ್ದಾರೆ. ಉತ್ತಮ ಸಿನಿಮಾ ಹಾಗೂ ಸಮಾಜ ಸೇವೆಯಿಂದಲೇ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ. ಹಾಗಾಗಿ ಶಿವರಾಜ್ ಕುಮಾರ್ ಯಶ್ ಅವರ ಹೆಸರನ್ನ ಹೇಳಿದ್ದಾರೆ.
'ಸಲಾಂ ಸಿನಿಮಾ' ಎನ್ನುತ್ತಿದ್ದಾರೆ ಮಾಸ್ಟರ್ ಡ್ಯಾನ್ಸರ್ಸ್