Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಪ್ರೇಯಸಿ ಶೆಹನಾಜ್
ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನದಿಂದ ಪ್ರೇಯಸಿ ಶೆಹನಾಜ್ ಗಿಲ್ ಕಂಗೆಟ್ಟಿದ್ದಾರೆ. ತನ್ನ ಮಡಿಲಲ್ಲೇ ಸಿದ್ಧಾರ್ಥ್ ಪ್ರಾಣ ಬಿಟ್ಟಿರುವುದನ್ನು ಶೆಹನಾಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳೆಯ ಸಿದ್ಧಾರ್ಥ್ ನನ್ನು ಕಳೆದುಕೊಂಡು ಶೆಹನಾಜ್ ಸಂಪೂರ್ಣವಾಗಿ ಕುಸಿದುಹೋಗಿದ್ದಾರೆ.
ಶೆಹನಾಜ್ ಪರಿಸ್ಥಿತಿ ನೋಡಿ ನೆಟ್ಟಿಗರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ಅಂತಿಮ ವಿಧಿವಿಧಾನದ ವೇಳೆ ಶೆಹನಾಜ್ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿದ್ಧಾರ್ಥ್ ನಿವಾಸದಿಂದ ಪಾರ್ಥಿವ ಶರೀರ ಹೊರಡುವಾಗ ಮನೆಯಿಂದ ಹೊರ ಬಂದ ಶೆಹನಾಜ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೋರಾಗಿ ಅಳುತ್ತಿರುವ ಶೆಹನಾಜ್ ನನ್ನು ಸಹೋದರ ಜೊತೆಯಲ್ಲಿ ಇದ್ದು ಸಮಾಧಾನ ಪಡಿಸುತ್ತಿದ್ದಾರೆ. ಮನೆಯಿಂದ ಹೊರಟು ಅಂತ್ಯಕ್ರಿಯೆ ಮುಗಿಸುವವರೆಗೂ ಶೆಹನಾಜ್ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.
ಸಿದ್ಧಾರ್ಥ್ ಸಾಯುವ ಕೊನೆ ಕ್ಷಣ ಏನಾಯ್ತು?
ಮೂಲಗಳ ಪ್ರಕಾರ, ಸಿದ್ಧಾರ್ಥ್ ಸಾಯುವ ಕೊೆನೆಯ ಕ್ಷಣದಲ್ಲಿ ಶೆಹನಾಜ್ ಗಿಲ್ ಜೊತೆಯಲ್ಲೇ ಇದ್ದರು, ಪ್ರೇಯಸಿಯ ಮಡಿಲಲ್ಲೇ ಸಿದ್ಧಾರ್ಥ್ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬುಧವಾರ (ಸೆಪ್ಟೆಂಬರ್ 01) ರಾತ್ರಿ 9.30ಕ್ಕೆ ಸಿದ್ದಾರ್ಥ್ ಶುಕ್ಲಾ ಅವರು ಮನೆಗೆ ಬಂದಿದ್ದರು. ಆಗಲೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಊಟ ಬೇಡ ಎಂದ ಸಿದ್ಧಾರ್ಥ್ ಗೆ ತಾಯಿ ಮತ್ತು ಗೆಳತಿ ಶೆಹನಾಜ್ ಗಿಲ್ ಸಿದ್ಧಾರ್ಥ್ ಗೆ ನಿಂಬು ಪಾನಿ ಮತ್ತು ಐಸ್ಕ್ರೀಮ್ ನೀಡಿದರು. ಬಳಿಕ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿದರು ಎಂಬ ಮಾಹಿತಿ ಕೇಳಿಬಂದಿದೆ.
ಪ್ರೇಯಸಿಯ ಮಡಿಲಲ್ಲೇ ಪ್ರಾಣ ಬಿಟ್ಟ ಸಿದ್ಧಾರ್ಥ್
ರಾತ್ರಿ ತುಂಬಾ ಸಮಯವಾದರೂ ನಿದ್ದೆ ಬಂದಿಲ್ಲ ಎಂದು ಸಿದ್ಧಾರ್ಥ್ ತಮ್ಮ ಜೊತೆಯೇ ಇರುವಂತೆ ಗೆಳತಿ ಶೆಹನಾಜ್ ನನ್ನು ಕೇಳಿಕೊಂಡರು. ಮಧ್ಯ ರಾತ್ರಿ 1.30ರ ಸುಮಾರಿಗೂ ಶೆಹನಾಜ್ ಮಡಿಲ ಮೇಲೆ ಸಿದ್ದಾರ್ಥ್ ನಿದ್ರಿಸಿದರು. ಬಳಿಕ ಸಿದ್ಧಾರ್ಥ್ ನನ್ನು ಪಕ್ಕಕ್ಕೆ ಸರಿಸಿ ಶೆಹನಾಜ್ ಕೂಡ ಮಲಗಿದರು. ಬೆಳಗ್ಗೆ 7.30ರ ಸುಮಾರಿಗೆ ಶೆಹನಾಜ್ಗೆ ಎಚ್ಚರವಾಗಿ ನೋಡಿದಾಗ ಸಿದ್ದಾರ್ಥ್ ರಾತ್ರಿ ನಿದ್ರಿಸುತ್ತಿದ್ದ ಹಾಗೆ ಮಲಗಿದ್ದರು. ಯಾವುದೇ ರೀತಿ ಚಲನೆ ಇಲ್ಲದಿರುವುದನ್ನು ನೋಡಿ ಶೆಹನಾಜ್ ಶಾಕ್ ಆದರು.
ಸಿದ್ಧಾರ್ಥ್ ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ
ಬಳಿಕ ಸಿದ್ಧಾರ್ಥ್ ಕುಟುಂಬದವರಿಗೆ ಶೆಹನಾಜ್ ಸುದ್ದಿ ತಿಳಿಸಿದರು. ಕೂಡಲೇ ಫ್ಯಾಮಿಲಿ ಡಾಕ್ಟರ್ರನ್ನು ಕರೆಸಿ ನೋಡಿದಾಗ ಸಿದ್ದಾರ್ಥ್ನಿಧನರಾಗಿದ್ದಾರೆ ಎಂದು ಹೇಳಿದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಸಿದ್ಧಾರ್ಥ್ ಇನ್ನಿಲ್ಲ ಎನ್ನುವುದನ್ನು ಶೆಹನಾಜ್ ಗೆ ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಸದಾ ಜೊತೆಯಲ್ಲೇ ಇರುತ್ತಿದ್ದ ಗೆಳೆಯ ಇನ್ನಿಲ್ಲ ಎನ್ನುವುದನ್ನು ಶೆಹನಾಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿಕ್ಕಿ ಬಿಕ್ಕಿ ಅಳುತ್ತಿರುವ ಶೆಹನಾಜ್
ಬಿಕ್ಕಿ ಬಿಕ್ಕಿ ಅಳುತ್ತಿರುವ ಶೆಹನಾಜ್ ಸ್ಥಿತಿ ನೋಡಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ಸಿದ್ಧಾರ್ಥ್ ಸಾವಿನ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇಂದು ಮಧ್ಯಾಹ್ನ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ನೆರವೇರಿದೆ. ಕಿರುತೆರೆಯಲ್ಲಿ ಮೆರೆದು, ಬಿಗ್ ಬಾಸ್ 13 ಗೆದ್ದು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದ ಸಿದ್ಧಾರ್ಥ್ ಇನ್ನು ನೆನಪು ಮಾತ್ರ.
ಬಿಗ್ ಬಾಸ್ ನಲ್ಲಿ ಸಿದ್ಧಾರ್ಥ್ ಗೆ ಶೆಹನಾಜ್ ಪರಿಚಯ
ಸಿದ್ಧಾರ್ಥ್ ಮತ್ತು ಶೆಹನಾಜ್ ಸ್ನೇಹ ಪ್ರಾರಂಭವಾಗಿದ್ದು ಬಿಗ್ ಬಾಸ್ 13 ಶೋನಿಂದ. ಬಿಗ್ ಬಾಸ್ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸ್ನೇಹಿತರರಾಗಿದ್ದರು, ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಭಿಮಾನಿಗಳು ಈ ಜೋಡಿಯನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು. ಇದೀಗ ಗೆಳೆಯನನ್ನು ಕಳೆದುಕೊಂಡು ಶೆಹನಾಜ್ ಒಂಟಿಯಾಗಿದ್ದಾರೆ.