'ಬಿಗ್ ಬಾಸ್' ಮನೆಯಿಂದ ರವಿ ಮುರೂರು ಔಟ್ ಆಗಿದ್ದು ಒಳ್ಳೇದಾಯ್ತು.!
ಹೀಗಂತ ನಾವ್ ಹೇಳ್ತಿಲ್ಲ ಸ್ವಾಮಿ...ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಬಿಗ್ ಬಾಸ್' ವೀಕ್ಷಕರು ಹೇಳುತ್ತಿರುವ ಮಾತು.
ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ರನ್ನ ಕೆಣಕಿ, ಅವರಿಂದ ಹೊಡೆತ ತಿಂದ ಗಾಯಕ ರವಿ ಮುರೂರು 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದಿರುವುದು ಒಳ್ಳೆಯ ನಿರ್ಧಾರ ಅಂತ ಬಹುತೇಕ ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ರವಿ ಮುರೂರುಗಿಂತ ಗಗನಸಖಿ ನೇಹಾ ಗೌಡ ಔಟ್ ಆಗ್ಬೇಕಿತ್ತು ಅಂತ ಕೆಲವರು ಹೇಳಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಗಾಯಕ ರವಿ ಮುರೂರು ಔಟ್.!]
ಕಳೆದ ವಾರದಂತೆ ಗದ್ದಲ-ಗಲಾಟೆ ಇಲ್ಲದೆ, ಮಜವಾಗಿ ನಡೆದ ಈ ವಾರದ 'ವಾರದ ಕಥೆ ಕಿಚ್ಚನ ಜೊತೆ' ಪಂಚಾಯತಿ ಮತ್ತು ಎಲಿಮಿನೇಷನ್ ಬಗ್ಗೆ ಫೇಸ್ ಬುಕ್ ನಲ್ಲಿ ವ್ಯಕ್ತವಾಗಿರುವ ವೀಕ್ಷಕರ ಅಭಿಪ್ರಾಯ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ರವಿ ಮುರೂರು-ರೆಹಮಾನ್ ಮೇಲೆ ಜೋಕ್.!
ಗಾಯಕ ರವಿ ಮುರೂರು ಮತ್ತು ಟಿವಿ9 ಆಂಕರ್ ರೆಹಮಾನ್ ಮೇಲೆ ಆಗಲೇ ಜೋಕ್ ಗಳು ಶುರುವಾಗಿದೆ. ಅಂತಹ ಒಂದು ಜೋಕ್ ಇಲ್ಲಿದೆ ನೋಡಿ....[ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!]

ಎಲ್ಲರ ಕಾಲೆಳೆಯುತ್ತೆ ಕಾಲ.!
ಹುಚ್ಚ ವೆಂಕಟ್ ಕಾಲೆಳೆದ ರವಿ ಕಾಲನ್ನೂ ಎಳೆದಿದೆ ಕಾಲ.! [ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?]

ರವಿ ಮುರೂರು ಫೇಮಸ್ ಆಗಿದ್ಹೇಗೆ?
ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ಮೇಲೆ ರವಿ ಮುರೂರು ಫೇಮಸ್ ಆದರಂತೆ.!

'ಬಿಗ್ ಬಾಸ್' ಮಾಡಿದ ಒಳ್ಳೆ ಕೆಲಸ
ಗಾಯಕ ರವಿ ಮುರೂರು ರವರನ್ನ ಔಟ್ ಮಾಡಿ 'ಬಿಗ್ ಬಾಸ್' ಒಳ್ಳೆ ಕೆಲಸ ಮಾಡಿದರಂತೆ.

ಮನರಂಜನೆ ನೀಡ್ಲಿಲ್ವಾ ರವಿ?
ರವಿ ಮುರೂರು ಮನರಂಜನೆ ಕೊಡ್ಲಿಲ್ಲ ಅನ್ನೋದು ವೀಕ್ಷಕರ ಬೇಸರಕ್ಕೆ ಕಾರಣ.

ಮಾಧ್ಯಮಗಳು ಕಾಯ್ತಿದ್ದಾರಂತೆ.!
ರವಿ ಮುರೂರು ಹೊರಗಡೆ ಬರಲಿ ಅಂತ ಮಾಧ್ಯಮಗಳು ಕಾಯ್ತಿದ್ದಾರಂತೆ.

ಮಿಶ್ರ ಪ್ರತಿಕ್ರಿಯೆ
'ಬಿಗ್ ಬಾಸ್' ಮನೆಯಲ್ಲಿ ಗಾಯಕ ರವಿ ಮುರೂರು ರವರ ಪಯಣದ ಬಗ್ಗೆ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ನೇಹಾ ಸೇಫ್ ಆಗಿದ್ದು ಹೇಗೆ?
ಕಡೆಘಳಿಗೆಯಲ್ಲಿ ನೇಹಾ ಸುತ್ತ ಆದ ವಿವಾದ ಆಕೆ ಸೇಫ್ ಆಗಲು ಕಾರಣವಾಯ್ತಾ?

ರವಿ ಒಳ್ಳೆ ವ್ಯಕ್ತಿ.!
ಗಾಯಕ ರವಿ ಮುರೂರುಗೆ ಫ್ಯಾನ್ಸ್ ಇದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.


Click it and Unblock the Notifications











