ಸ್ಯಾಂಡಲ್ವುಡ್ ಸ್ಟೈಲ್ನಲ್ಲಿ ಸುಗ್ಗಿ ಹಬ್ಬ: 'ಸುವರ್ಣ ಸಂಕ್ರಾಂತಿ ಸಂಭ್ರಮ' ದಲ್ಲಿ ಸುವರ್ಣ ತಾರೆಯರ ಸಮಾಗಮ
ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. ತನ್ನ ವಿಭಿನ್ನ ಕಥೆಗಳ ಮೂಲಕ ಜನರ ಮನಗೆದ್ದಿರುವ ಈ ವಾಹಿನಿ, ಈಗ ಒಂದು ಅದ್ಭುತ ಸಾಹಸಕ್ಕೆ ಕೈಹಾಕಿದೆ. ಈ ರಹಸ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಕಾತರರಾಗಿದ್ದಾರೆ. ಆದರೆ, ವಾಹಿನಿ ಮಾತ್ರ ಈ ಬಗ್ಗೆ ಎಲ್ಲಿಯೂ ಸಣ್ಣ ಸುಳಿವು ಬಿಟ್ಟುಕೊಟ್ಟಿಲ್ಲ. ಎಲ್ಲವೂ ಅದ್ದೂರಿಯಾಗಿರಲಿದೆ ಎಂಬುದು ಮಾತ್ರ ಸದ್ಯಕ್ಕೆ ತಿಳಿದಿರುವ ವಿಷಯ.

ಪ್ರತಿ ಬಾರಿಯೂ ಸುವರ್ಣ ವಾಹಿನಿ ತನ್ನ ವೀಕ್ಷಕರಿಗೆ ವಿಶೇಷ ಉಡುಗೊರೆ ನೀಡುತ್ತದೆ. ಈ ಬಾರಿಯೂ ಅಂತಹದ್ದೇ ಒಂದು ಬಿಗ್ ಇವೆಂಟ್ ರೆಡಿಯಾಗಿದೆ. ಅದು ಯಾವ ಮಟ್ಟಕ್ಕೆ ಇರಲಿದೆ ಎಂದರೆ ಪ್ರೇಕ್ಷಕರು ಕಣ್ಣು ಮಿಟುಕಿಸದೆ ನೋಡುವಂತಿರುತ್ತದೆ.
ಮನೆ ಮನೆಗೂ ತಲುಪಲಿದೆ ಸಂಕ್ರಾಂತಿ ಸಂಭ್ರಮ
ಹೌದು, ಇಡೀ ನಾಡಿಗೆ ಸಂಕ್ರಾಂತಿಯ ಸಂಭ್ರಮ ಶುರುವಾಗಿದೆ. ಈ ಸುಗ್ಗಿಯ ಸಡಗರವನ್ನು ಕೇವಲ ಮನೆಗಷ್ಟೇ ಸೀಮಿತ ಮಾಡದೆ, ಕಿರುತೆರೆಯ ತೆರೆಯ ಮೇಲೆ ತರಲು ವಾಹಿನಿ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಸುವರ್ಣ ಕುಟುಂಬದ ಎಲ್ಲಾ ಸದಸ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ಈ ಬಾರಿಯ ಸಂಭ್ರಮಕ್ಕೆ ವೇದಿಕೆಯಾಗಿರುವುದು 'ಆಸೆ' ಧಾರಾವಾಹಿಯ ಮನೆ. ಹಳ್ಳಿಯ ಸೊಗಡು, ಎತ್ತು-ಗಾಡಿ, ರಂಗೋಲಿಗಳ ನಡುವೆ ಸಾಂಪ್ರದಾಯಿಕವಾಗಿ ಹಬ್ಬದ ಸಿದ್ಧತೆ ನಡೆದಿದೆ. ಇದು ಕೇವಲ ಶೂಟಿಂಗ್ ಅಲ್ಲ, ಬದಲಾಗಿ ಒಂದು ಅದ್ಧೂರಿ ಜಾತ್ರೆಯಂತೆ ಕಾಣುತ್ತಿದೆ.

'ಸುವರ್ಣ ಸಂಕ್ರಾಂತಿ ಸಂಭ್ರಮ': ಕಲಾವಿದರ ನಡುವೆ ಬಿಗ್ ಫೈಟ್
ಈ ಹಬ್ಬದ ಆಚರಣೆಯಲ್ಲಿ ಮನರಂಜನೆಯ ಜೊತೆಗೆ ಸಖತ್ ಪೈಪೋಟಿ ಕೂಡ ಇದೆ. 'ನೀ ಇರಲು ಜೊತೆಯಲಿ', 'ಶಾರದೆ', 'ಜೈ ಲಲಿತಾ' ಮತ್ತು 'ಸ್ನೇಹದ ಕಡಲಲ್ಲಿ' ತಂಡಗಳ ನಡುವೆ ಟಾಸ್ಕ್ ಗಳ ಜಟಾಪಟಿ ನಡೆದಿದೆ. ಯಾರು ಗೆಲ್ಲುತ್ತಾರೆ? ಯಾರಿಗೆ ಸೋಲು? ಎಂಬುದು ಕೌತುಕ ಮೂಡಿಸಿದೆ.
ಹಾಸ್ಯದ ಪಟಾಕಿ: ಹಿತೇಶ್ ಕಾಪಿನಡ್ಕ ಅವರ ವಿಭಿನ್ನ ಅವತಾರ ಇಡೀ ಶೋಗೆ ಮೆರುಗು ನೀಡಿದೆ. ಅವರ ಕಾಮಿಡಿ ಪಂಚ್ಗಳಿಗೆ ಕಲಾವಿದರೇ ಬಿದ್ದು ಬಿದ್ದು ನಗುತ್ತಿದ್ದಾರೆ.
ಸ್ಟಾರ್ ಆಕರ್ಷಣೆ: ಸ್ಟಾರ್ ಸುವರ್ಣದ ಎಲ್ಲಾ ಜನಪ್ರಿಯ ನಟಿಯರು ಸೀರೆಯಲ್ಲಿ ಮಿಂಚುತ್ತಿದ್ದರೆ, ನಟರು ಪಂಚೆ-ಶರ್ಟ್ನಲ್ಲಿ ಮಿಂಚುತ್ತಿದ್ದಾರೆ.
ಧಮಾಕಾ ನಿರೂಪಣೆ: ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ತಮ್ಮದೇ ಶೈಲಿಯಲ್ಲಿ ಇಡೀ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ.
ಫ್ಯಾನ್ಸ್ಗಳಿಗೆ ಕಾದಿದೆ ಒಂದು 'ಬಿಗ್ ಸರ್ಪ್ರೈಸ್'
ಕಾರ್ಯಕ್ರಮದ ಕೊನೆಯಲ್ಲಿ ಸುವರ್ಣ ವಾಹಿನಿ ತನ್ನ ಅಭಿಮಾನಿಗಳಿಗೆ ಒಂದು ವಿಶೇಷ ಸರ್ಪ್ರೈಸ್ ನೀಡಲಿದೆ. ಇದು ಯಾವುದೋ ಹೊಸ ಮೆಗಾ ಸೀರಿಯಲ್ ಇರಬಹುದು ಅಥವಾ ನಿಮ್ಮ ನೆಚ್ಚಿನ ನಟರೊಬ್ಬರ ಹೊಸ ಪ್ರಾಜೆಕ್ಟ್ ಇರಬಹುದು. ಈ ಗುಟ್ಟನ್ನು ವಾಹಿನಿ ಕಾರ್ಯಕ್ರಮದ ಅಂತ್ಯದವರೆಗೂ ಕಾಪಾಡಿಕೊಂಡಿದೆ.
ಮಿಸ್ ಮಾಡ್ಲೇಬೇಡಿ ಈ ಮನರಂಜನೆಯ ಮಹಾಪೂರ
ಒಟ್ಟಿನಲ್ಲಿ ಎಳ್ಳು-ಬೆಲ್ಲದ ಸವಿಯ ಜೊತೆಗೆ ಸುವರ್ಣ ತಾರೆಯರ ಈ ಸಂಗಮ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಮೂರು ಗಂಟೆಗಳ ಕಾಲ ನಿಮ್ಮನ್ನು ನಗಿಸಲು, ರಂಜಿಸಲು ಈ ಕಾರ್ಯಕ್ರಮ ಸಿದ್ಧವಾಗಿದೆ. ಇದೇ ಶುಕ್ರವಾರ, ಜನವರಿ 16 ರಂದು ಸಂಜೆ 6.30 ರಿಂದ ರಾತ್ರಿ 9.30 ರವರೆಗೆ ಸತತ ಮೂರು ಗಂಟೆಗಳ ಕಾಲ ನಿರಂತರ ವೀಕೆಂಡ್ನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸುವರ್ಣ ಕಲಾವಿದರ ಆಟ. ಮಸ್ತಿಯನ್ನು ನೋಡಿ ಎಂಜಾಯ್ ಮಾಡಿ.


Click it and Unblock the Notifications











