Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
6 ವರ್ಷದ 'ಮೆಗಾ ಧಾರಾವಾಹಿ' ಅಂತ್ಯ
Recommended Video
ಟಿವಿ ಪ್ರೇಕ್ಷಕರಿಗೊಂದು ಬೇಸರದ ಸಂಗತಿ. ಅದರಲ್ಲೂ ಸ್ಟಾರ್ ಸುವರ್ಣ ವೀಕ್ಷಕರಿಗೆ ಇದು ನಿರಾಸೆ ಮೂಡಿಸಬಹುದು. ಸುಮಾರು 6 ವರ್ಷದಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದ ಮೆಗಾ ಧಾರಾವಾಹಿಯೊಂದು ಅಂತ್ಯವಾಗುತ್ತಿದೆ.
ಇಂದಿನ ಸೀರಿಯಲ್ ಗಳ ಸ್ಪರ್ಧೆಯಲ್ಲಿ ಕೆಲವು ಧಾರಾವಾಹಿಗಳು ಜನರ ಮನ್ನಣೆ ಸಿಗದೆ ಕೆಲವೇ ಎಪಿಸೋಡ್ ಗಳ ನಂತರ ನಿಂತು ಹೋಗುತ್ತೆ. ಇನ್ನು ಕೆಲವೂ ಧಾರಾವಾಹಿಗಳು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾದರೇ, ವರ್ಷಾನುಗಟ್ಟಲೇ ಪ್ರಸಾರವಾಗುತ್ತೆ. ಹೀಗೆ, ವರ್ಷಗಳ ಕಾಲ ಸೂಪರ್ ಸಕ್ಸಸ್ ಕಂಡಿದ್ದ 'ಅಮೃತವರ್ಷಿಣೆ' ಈಗ ತನ್ನ ಕೊನೆಯ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.
ಹಾಗಿದ್ರೆ, 'ಅಮೃತ ವರ್ಷಣಿ'ಯ ಕೊನೆಯ ಶೋ ಯಾವಾಗ? ಎಂಬ ಮಾಹಿತಿ ತಿಳಿಯಲು ಮುಂದೆ ಓದಿ.....
ನವೆಂಬರ್ 24 ರಂದು ಅಂತ್ಯ
'ಅಮೃತವರ್ಷಣಿ' ಧಾರಾವಾಹಿ ತನ್ನ ಕೊನೆಯ ಪ್ರದರ್ಶನಕ್ಕೆ ಸಜ್ಜಾಗಿದ್ದು, ನವೆಂಬರ್ 24 ರಂದು ಕೊನೆಯ ಕಂತು ಪ್ರಸಾರವಾಗಲಿದೆ. ನಂತರ ನವೆಂಬರ್ 27 ರಿಂದ ಡಿಸೆಂಬರ್ 1 ರ ವರೆಗು ರಾತ್ರಿ 9.30ಕ್ಕೆ ಈ ವಿಶೇಷ ಸಂಚಿಕೆಗಳ ರಸದೌತಣ ನೀಡಲಿದೆ ಸ್ಟಾರ್ ಸುವರ್ಣ ವಾಹಿನಿ.
'ಹರ ಹರ ಮಹಾದೇವ' ಧಾರಾವಾಹಿಯ 'ಪಾರ್ವತಿ'ಯನ್ನ ಕಿಕ್ ಔಟ್ ಮಾಡಿದ ಸ್ಟಾರ್ ಸುವರ್ಣ .!
1700 ಕಂತುಗಳ ಮೆಗಾ ಧಾರಾವಾಹಿ
ಇಲ್ಲಿಯವರೆಗೂ ಸುಮಾರು 1700ಕ್ಕೂ ಅಧಿಕ ಕಂತುಗಳು 'ಅಮೃತವರ್ಷಿಣಿ' ಧಾರಾವಾಹಿ ಪ್ರಸಾರವಾಗಿತ್ತು. ಅತಿ ಹೆಚ್ಚು ವರ್ಷಗಳು ಪ್ರಸಾರವಾದ ಸೀರಿಯಲ್ ಗಳ ಪೈಕಿ ಅಮೃತವರ್ಷಿಣಿಯೂ ಒಂದಾಗಿದೆ.
'ಕನ್ನಡದ ಕೋಟ್ಯಾಧಿಪತಿ' ಆಗ್ತಾರ ರಾಕಿಂಗ್ ಸ್ಟಾರ್ ಯಶ್ !
2012ರಲ್ಲಿ ಆರಂಭವಾಗಿದ್ದ 'ಅಮೃತವರ್ಷಿಣಿ'
19 ಮಾರ್ಚ್ 2012....ಸುವರ್ಣ ಯುಗ ಪ್ರಾರಂಭವಾದ ದಿನ. ಅಂದು ಸ್ಟಾರ್ ಸುವರ್ಣ ಪರಿವಾರಕ್ಕೆ ಹೊಸದಾಗಿ ಸೇರ್ಪಡೆಗೊಂಡ ಧಾರಾವಾಹಿ ಅಮೃತವರ್ಷಿಣಿ. ತನ್ನ ಮೊದಲ ಪ್ರಸಾರದಿಂದಲೇ ಪ್ರೇಕ್ಷಕರ ಮನ ಸೆಳೆದು ಕಿರುತೆರೆ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಸೃಷ್ಠಿಸಿದೆ. ಅಮ್ಮನಂತ ಅತ್ತೆ, ಮಗಳಂತ ಸೊಸೆ.. ಇದೇ ಅಮೃತವರ್ಷಿಣಿಯ ಕಥೆಯಾಗಿತ್ತು.
ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಂತಿವೆ ಕಿರುತೆರೆಯ ಧಾರಾವಾಹಿಗಳು!
ವೀಕ್ಷಕರು ಬೇಸರ
'ಅಮೃತವರ್ಷಿಣಿ' ಧಾರಾವಾಹಿ ಅಂತ್ಯವಾದ ಹಿನ್ನೆಲೆ ಟಿವಿ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಳ್ಳೆ ಧಾರಾವಾಹಿ ಮಿಸ್ ಆಯ್ತು ಎಂದು ಕಾಮೆಂಟ್ ಮಾಡ್ತಿದ್ದಾರೆ.