Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೇನುಗೂಡು: ಬಿಯರ್ ಕೊಟ್ಟು ನಡುಕೋಟೆ ಮನೆಗೆ ಶುಭಾಂಗಿಯಿಂದ ಅವಮಾನ!
ನಡುಕೋಟೆ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಮನೆ ಮಾಡಿದೆ. ಎಲ್ಲಾ ತಯಾರಿಗಳು ಮುಗಿದು ಈಗ ಶಾಸ್ತ್ರಗಳು ಆರಂಭವಾಗಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿಯೇ ಶಾಸ್ತ್ರಗಳು ನಡೆಯುತ್ತಿದೆ. ಇಷ್ಡು ದಿನ ಮಿಸ್ ಮಾಡಿಕೊಂಡ ವಿಭಿನ್ನ ಶಾಸ್ತ್ರಗಳನ್ನು 'ಜೇನುಗೂಡು' ಧಾರಾವಾಹಿ ಮೂಲಕ ಕಣ್ತುಂಬಿಕೊಳ್ಳುವಂತೆ ಮಾಡುತ್ತಿದೆ. ಇದರಿಂದಾಗಿಯೇ ಪ್ರೇಕ್ಷಕ ವರ್ಗ ಕೂಡ ಕೌತುಕತೆಯಿಂದ ನೋಡುತ್ತಿದೆ.
ಶಾಸ್ತ್ರ-ಸಂಪ್ರದಾಯದ ಜೊತೆಗೆ ಮನೆ ಮಂದಿಯೆಲ್ಲಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಖುಷಿಯ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿರುವುದು ಶುಭಾಂಗಿ. ಮಗಳು ಮಗುವಾಗಿದ್ದಾಗ ತಲೆ ಕೆಡಿಸಿಕೊಳ್ಳದ ಶುಭಾಂಗಿ ಮದುವೆಯಾಗುವಾಗ ಬಂದು ಕಿರಿಕ್ ಮಾಡುತ್ತಿದ್ದಾಳೆ. ಪ್ರತಿಯೊಂದರಲ್ಲೂ ಮೂಗು ತೂರಿಸಿ, ಬೇರೆಯವರಿಗೆ ನೋವು ಮಾಡುತ್ತಿದ್ದಾಳೆ. ಇದು ಹಲವು ಬಾರಿ ಜಗಳ, ಮನಸ್ತಾಪಕ್ಕೂ ಕಾರಣವಾಗಿದೆ.
ಚಿಕ್ಕಮಗಳೂರಿನಲ್ಲಿ ರೌಂಡ್ಸ್ ಹೊಡೆಯುತ್ತಿರುವ 'ಜೊತೆ ಜೊತೆಯಲಿ' ನಟಿ ಮೀರಾ!
ಶುಭಾಂಗಿ ತೆಗೆದುಕೊಂಡ ಸೀರೆ ಬೆಲೆ ಇಲ್ಲಿದೆ
ಸದ್ಯ ಮದುವೆ ಶಾಸ್ತ್ರಗಳಲ್ಲಿ ಮೊದಲ ಶಾಸ್ತ್ರ ಜವಳಿ ಖರೀದಿ. ನಡುಕೋಟೆ ಮನೆಯಲ್ಲಿ ಆ ಶಾಸ್ತ್ರವು ಶುರುವಾಗಿದೆ. ನಡುಕೋಟೆ ಮನೆಗೆ ಜವಳಿ ಹೊತ್ತು ತಮ್ಮಣ್ಣನ ಪಾತ್ರದಲ್ಲಿ ಉಮೇಶ್ ಬಂದಿದ್ದಾರೆ. ಈ ಶಾಸ್ತ್ರದಲ್ಲಿ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ, ಹೆಣ್ಸಿನ ಮನೆಯವರು ಗಂಡಿನ ಕಡೆಯವರಿಗೆ ಬಟ್ಟೆ ಕೊಡಿಸಬೇಕಾಗುತ್ತದೆ. ಆದರೆ ಯಾವಾಗಲೂ ಅಂತಸ್ತು, ಬ್ರ್ಯಾಂಡೆಡ್ ಅಂತ ನೋಡುವ ಶುಭಾಂಗಿ, ಕೋಟೆ ಮನೆಯವರು ಕೊಡುವ ಬಟ್ಟೆಗಳನ್ನು ಒಪ್ಪುವುದಾದರೂ ಹೇಗೆ? ಆದರೆ ಅಲ್ಲಿ ಒಪ್ಪದೆ ಇರಲು ಅವಕಾಶವೇ ಇಲ್ಲ. ಡಾ.ಶ್ರೀಧರ್ ಹಾಗೋ ಹೀಗೋ ಮಾಡಿ ಒಪ್ಪಿಸಿ ಆಗಿದೆ. ಹೀಗಾಗಿಯೇ ಶುಭಾಂಗಿ ಎರಡು ಸಾವಿರದ ಸೀರೆಯನ್ನೆ ಇಟ್ಟುಕೊಂಡಿದ್ದಾಳೆ.
ಪುಟ್ಟಕ್ಕನ ಮಕ್ಕಳು: ರಾಜೇಶ್ವರಿಗೆ ಸ್ನೇಹಾ ಕೊಟ್ಟ ಗೌರವಕ್ಕೆ ಗೋಪಾಲನ ಮುಖದಲ್ಲಿ ನಗು..!
ದಿಯಾಳ ಕಾಳಜಿಗೆ ಶಶಾಂಕ್ ಫಿದಾ
ಮಾತೆತ್ತಿದ್ದರೆ ದಿಯಾ ಮತ್ತು ಶಶಾಂಕ್ ಜಗಳವಾಡುತ್ತಾ ನಿಲ್ಲುತ್ತಾರೆ. ಪ್ರೀತಿ ಇದ್ದರೂ ಆ ಪ್ರೀತಿಗೆ ಜಾಗವೇ ಸಿಗಬಾರದು ಆ ರೀತಿ ಜಗಳವಾಡುತ್ತಿರುತ್ತಾರೆ. ಆದರೆ ದಿಯಾ ಈ ಜಗಳದ ನಡುವೆಯೂ ಶಶಾಂಕ್ನನ್ನು ಗಮನಿಸುತ್ತಿದ್ದಾಳೆ. ಜವಳಿ ಖರೀದಿ ವೇಳೆ ಆಕೆಯ ಮಮ್ಮಿ ಮಾಡಿದ ಅವಮಾನ ಶಶಾಂಕ್ ಮನಸ್ಸನ್ನು ಕದಡಿದ್ದು ದಿಯಾಳ ಗಮನಕ್ಕೂ ಬಂದಿದೆ. ಹೀಗಾಗಿ ಅವರ ಮನೆಯ ಜವಳಿ ಖರೀದಿಗೆ ಬರುವುದಿಲ್ಲ ಎಂದಿದ್ದ ಶಶಾಂಕ್ನನ್ನು ದಿಯಾಳೇ ಸಮಾಧಾನ ಮಾಡಿದ್ದಾನೆ. ಆಕೆಯ ಮಾತು ರಫ್ ಇರಬಹುದು, ತುಂಟಾಟವೂ ಇರಬಹುದು. ಆದರೆ ಆಕೆಯ ನಿಜವಾದ ಕಾಳಜಿ ಶಶಾಂಕ್ ಮನಸ್ಸಿಗೆ ನಾಟಿದೆ. ಕೂತು ಅವಳ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.
ಶುಭಾಂಗಿ ವರ್ತನೆ ಮಿತಿ ಮೀರಿದೆ
ನಡುಕೋಟೆ ಮನೆಯಲ್ಲಿ ಜವಳಿ ಶಾಸ್ತ್ರ ಮಾಡಬೇಕಾದ್ದು ಪದ್ಧತಿ. ಆದರೆ ಶುಭಾಂಗಿಗೆ ಇದು ಸ್ಟೇಟಸ್ ಪ್ರಶ್ನೆಯಾಗಿ ಕನ್ವರ್ಟ್ ಆಗಿತ್ತು. ಇದಕ್ಕಾಗಿಯೇ ನಮ್ಮ ಮನೆಯಲ್ಲಿಯೂ ಜವಳಿ ಖರೀದಿ ಇಟ್ಟುಕೊಳ್ಳುತ್ತೇವೆ ಎಂದು ಎಲ್ಲರೂ ಬರಲೇಬೇಕು ಎಂದು ಶುಭಾಂಗಿ ಹೇಳಿದಳು. ಈ ಮಾತಿಗೆ ಗೌರವ ನೀಡಿದ ವಿನಾಯಕ್ ದಾದಾ ಎಲ್ಲರನ್ನು ಕರೆದುಕೊಂಡು ಡಾಕ್ಟರ್ ಮನೆಗೆ ಹೊರಟಿದ್ದಾರೆ. ಆದರೆ ಶುಭಾಂಗಿಯ ವರ್ತನೆ ಅಲ್ಲಿಯೂ ದುರ್ವರ್ತನೆಯಾಗಿ ಬದಲಾಗಿದೆ. ಹೇಳಿ ಕೇಳಿ ಸುಮ್ಮನಿರುವಾಗಲೇ ಆಕೆಯ ಮಾತುಗಳು ಎಲ್ಲರನ್ನು ಕೆಣಕುತ್ತೆ. ಇನ್ನು ತಾನೇ ಅರೆಂಜ್ ಮಾಡಿದ ಕಾರ್ಯಕ್ರಮಗಳಲ್ಲಿ ಕೇಳಬೇಕಾ..?
ರಾಘವೇಂದ್ರ ರಾಜ್ಕುಮಾರ್ ನಿರ್ಮಾಣದಲ್ಲಿ 'ವಿಜಯದಶಮಿ' ಧಾರಾವಾಹಿ: ಯಾವ ಸಿನಿಮಾಗೂ ಕಮ್ಮಿಯಿಲ್ಲ!
ಕುಡಿಯಲು ಚಿಲ್ಡ್ ಬಿಯರ್ ಕೊಟ್ಟ ಶುಭಾಂಗಿ
ಕೊಟ್ಟ ಮಾತಿಗೆ ತಪ್ಪ ಬಾರದು ಎಂದು ನಡುಕೋಟೆ ಮನೆಯವರು ಶ್ರೀಧರ್ ಮನೆಗೆ ಬಂದಿದ್ದಾರೆ. ಆದರೆ ಇಲ್ಲಿ ಜವಳಿ ಶಾಸ್ತ್ರಕ್ಕೆ ಶುಭಾಂಗಿ ಮಾಡೆಲ್ಗಳನ್ನ ಕರೆಸಿದ್ದಳು. ಅವರು ಡ್ರೆಸ್ ಹಾಕಿಕೊಂಡು ನಡುಕೋಟೆ ಮನೆಯವರೆದುರು ಓಡಾಡಿದರು. ಅಷ್ಟೇ ಅಲ್ಲ ಸಂಪ್ರದಾಯಸ್ಥ ಕುಟುಂಬ ಎಂದು ಗೊತ್ತಿದ್ದರು, ಜ್ಯೂಸ್ ಬದಲಿಗೆ ಶುಭಾಂಗಿ ಚಿಲ್ಡ್ ಬಿಯರ್ ಕೊಟ್ಟು ಅವಮಾನ ಮಾಡಿದ್ದಾಳೆ. ಅಷ್ಟು ಪಾಷ್ ಆಗಿ ಬೆಳೆದ, ಪಬ್ಬು ಪಾರ್ಟಿ ಅಂತ ಓಡಾಡುವ ದಿಯಾನೇ ಡ್ರಿಂಕ್ಸ್ ಮುಟ್ಟುವವಳಲ್ಲ. ಇನ್ನು ನಡುಕೋಟೆ ಮನೆಯವರಿಗೆ ಅದನ್ನು ಕೊಟ್ಟರೆ ಶಶಾಂಕ್ ಸುಮ್ಮನಿರುತ್ತಾನಾ..? ಅದಕ್ಕೂ ಮುನ್ನ ದಿಯಾ ಸುಮ್ಮನೆ ಇರುತ್ತಾಳಾ..? ನೋವೇ ಚಾನ್ಸೆ ಇಲ್ಲ. ಆದರೆ ಈ ಥ್ರಿಲ್ಲಿಂಗ್ ಎಪಿಸೋಡಿನಲ್ಲಿ ಏನೆಲ್ಲಾ ಆಗುತ್ತೆ ನೋಡಬೇಕಿದೆ.