Don't Miss!
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೇನುಗೂಡು: ವಧು-ವರನಿಗೆ ಮಾಡುವ ಮಾತೃ ಭೋಜನದ ಬಗ್ಗೆ ನಿಮಗೆ ಗೊತ್ತಾ..?
ಭಾರತ ಸಂಸ್ಕೃತಿಯ ನಾಡು ಅಂತ ಸುಮ್ಮನೆ ಹೇಳುವುದಿಲ್ಲ. ಒಂದೊಂದು ರಾಜ್ಯ, ಒಂದೊಂದು ಜಿಲ್ಲೆಯಲ್ಲೂ ವಿಭಿನ್ನವಾದ ಸಂಸ್ಕೃತಿಯನ್ನು ನೋಡುತ್ತೇವೆ. ಆದರೆ ಇತ್ತೀಚಿನ ದಿನದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿದ್ದ ಸಂಸ್ಕೃತಿಗಳೇ ನಮಗೆ ಗೊತ್ತಿಲ್ಲ. ಜೀವನದ ಜಂಜಾಟ, ಬ್ಯುಸಿ ಶೆಡ್ಯೂಲ್ನಿಂದ ಪದ್ಧತಿಗಳಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಹಲವು ಪದ್ಧತಿಗಳು ನಮಗೆ ತಿಳಿದಿರುವುದೇ ಇಲ್ಲ.
ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇರುವ ವಿಭಿನ್ನವಾದ ಪದ್ಧತಿಗಳ ಬಗ್ಗೆ 'ಜೇನುಗೂಡು' ಧಾರಾವಾಹಿ ಮೂಲಕ ಪರಿಚಯ ಮಾಡಿಕೊಡಲು ಹೊರಟಿದ್ದಾರೆ. ಕಳೆದ ವಾರದಿಂದ ನಡುಕೋಟೆಯಲ್ಲಿ ಮದುವೆ ತಯಾರಿ ಶುರುವಾಗಿದ್ದು, ಪ್ರತಿದಿನ ಕೂಡ ಒಂದೊಂದು ಸಂಸ್ಕೃತಿ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.

ನಡುಕೋಟೆ ಮನೆಯಲ್ಲಿ ಮಾತೃ ಭೋಜನಾ!
ಮದುವೆ ಎಂದರೆ ಒಂದಷ್ಟು ಶಾಸ್ತ್ರಗಳು ಇರುತ್ತವೆ. ಸಾಮಾನ್ಯವಾಗಿ ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರ, ಬಳೆ ಶಾಸ್ತ್ರ ತೀರಾ ತಿಳಿದುಕೊಂಡಿದ್ದರೆ ಚಪ್ಪರ ಶಾಸ್ತ್ರವೊಂದು ಗೊತ್ತಿರುತ್ತೆ. ಆದರೆ ಈ ಮಾತೃ ಭೋಜನ ಎಂಬುದು ಸ್ವಲ್ಪ ಹೊಸದೇ ಇದೆ. ಅದನ್ನ ಹೇಗೆಲ್ಲಾ ಆಚರಿಸಿತ್ತಾರೆ ಎಂಬ ಕ್ಯೂರಿಯಾಸಿಟಿ ಎಲ್ಲರದ್ದು. ನಡುಕೋಟೆ ಮನೆಯಲ್ಲಿ ಸೋಮವಾರ ಆ ಭೋಜನ ನಡೆಯಲಿದೆ. ಅದಕ್ಕೂ ಮುನ್ನ ಕೊಂಚ ಮಾಹಿತಿಯನ್ನು ನೀಡಿದ್ದಾರೆ. ಮಾತೃ ಭೋಜನವೆಂದರೆ ಮನೆಯಲ್ಲಿರುವ ತಾಯಂದಿರೆಲ್ಲಾ ಸೇರಿ, ವರನಿಗೆ ಏನೆಲ್ಲಾ ಇಷ್ಟವೋ ಅದೆಲ್ಲವನ್ನು ಮಾಡಿ, ತಿನ್ನಿಸುವುದು. ಹೆಂಡತಿ ಬಂದ ಮೇಲೆ ಗಂಡನಿಗೆ ತಾಯಂದಿರ ಕೈಯಲ್ಲಿ ಊಟ ತಿನ್ನುವ ಸಮಯ ಕಡಿಮೆ ಅಂತ.

ದಿಯಾ ಕೂಡ ಮಾತೃ ಭೋಜನದಲ್ಲಿ ಭಾಗಿ
ದಿಯಾಗೆ ಮೊದಲಿನಿಂದಲೂ ತಾಯಿ ಪ್ರೀತಿ ಸಿಕ್ಕಿಲ್ಲ ಎಂಬ ಬೇಸರ ಇದೆ. ಅದನ್ನು ಆಕೆ ಯಾವಾಗಲೂ ಹೇಳಿಕೊಂಡಿದ್ದಾಳೆ. ಆದರೆ ದಿಯಾಗೆ ಮಾತೃ ಭೋಜನ ಎಂದ ಕೂಡಲೆ ಮನಸ್ಸು ಭಾರವಾಗಿದೆ. ನನ್ನ ಹೆತ್ತವಳಿಗೆ ನನಗೇನು ಇಷ್ಟ ಎಂಬುದೇ ತಿಳಿದಿಲ್ಲ ಎಂಬ ಬೇಸರ ಹೊರ ಹಾಕಿದ್ದಾಳೆ. ಆದರೆ ನಡುಕೋಟೆ ಮನೆಯ ಕುಕ್ಕಿ ಅಂಡ್ ಗ್ಯಾಂಗ್ ಇರುವಾಗ ಇದಕ್ಕೆಲ್ಲಾ ಎಲ್ಲಿಯ ಅವಕಾಶ. ದಿಯಾಳನ್ನು ಸಹ ತಮ್ಮ ಮನೆಯಲ್ಲಿಯೆ ಮಾಡುವ ಮಾತೃ ಭೋಜನಕ್ಕೆ ಕರೆದಿದ್ದಾರೆ. ವರನ ಜೊತೆಗೆ ವಧುವಿಗೂ ತಮ್ಮ ಮನೆಯಲ್ಲಿಯೇ ಮಾತೃ ಭೋಜನ ಅರೆಂಜ್ ಮಾಡಿದ್ದಾರೆ.

ದಿಯಾ-ಶಶಾಂಕ್ ನಡುವೆ ಮಾಯಾ
ದಿಯಾ ಮತ್ತು ಶಶಾಂಕ್ ನಡುವೆ ಪ್ರೀತಿ ಇದೆ. ಆದರೆ ಅದು ಜಗಳದ ನಡುವೆ ಕಳೆದು ಹೋಗುತ್ತಿದೆ. ಇದರ ಜೊತೆಗೆ ಮಾಯಾ ಬೇರೆ ಮಧ್ಯಪ್ರವೇಶ ಮಾಡಿ ಜಗಳ ಬರಿಸುತ್ತಲೇ ಇದ್ದಾಳೆ. ಸಾರಿಕ ಬಳಿ ಹೋಗಿ ನಿನ್ನನ್ನು ತಾಯಿ ಆಗಿ ಸ್ವೀಕರಿಸಬೇಕೆಂದರೆ ದಿಯಾ ಶಶಾಂಕ್ ಮದುವೆ ನಿಲ್ಲಿಸಬೇಕೆಂದು ಹೇಳಿದ್ದಾಳೆ. ಆದರೆ ಸಾರಿಕಾ ಇದೆಲ್ಲದಕ್ಕು ಸೊಪ್ಪಿ ಕೂಡ ಹಾಕಿಲ್ಲ. ಆದರೆ ಇದೀಗ ಮದುವೆಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ ಶಶಾಂಕ್ಗೆ ಅಕ್ಷರಶಃ ಮಾಯಾ ಬರುವುದು ಇಷ್ಟವಿರಲಿಲ್ಲ. ಬಾಯಲ್ಲಿ ಅಷ್ಟೇ ಅವನ ಕರೆಯುವಿಕೆಯಾಗಿತ್ತು. ಇದೀಗ ಮದುವೆ ಮನೆಗೆ ಎಂಟ್ರಿ ಕೊಟ್ಟಾಗಿದೆ.
ಯಾರಿಗೆಲ್ಲಾ ಆಮಂತ್ರಣ ಇದೆ
ಸೋಮವಾರದಿಂದ ಶುಕ್ರವಾರದವರೆಗೆ ನಡೆಯುವ ಶಾಸ್ತ್ರಗಳ ಪೈಕಿ ಈ ವಾರದಲ್ಲಿಯೇ ಮದುವೆಯೂ ನಡೆಯಲಿದೆ. ಹೀಗಾಗಿ ದಿಯಾ ಮತ್ತು ಶಶಾಂಕ್ ಮದುವೆಯ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಬಾವಿ ಪತಿ ಪತ್ನಿ ಸೇರಿಯೇ ಎಲ್ಲರಿಗೂ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಆಂಕರ್, ನಟಿ ಸೇರಿದಂತೆ ಇದೀಗ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಓಡಾಡುತ್ತಿದ್ದಾರೆ.