Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಿಗರ ಕಿಡ್ನಿ ಸಿಂಗಾಪುರದಲ್ಲಿ ಮಾರಾಟ !
ರಾಮನಗರ ಮೂಲದ ಅತ್ತ ಯುವಕನೂ ಅಲ್ಲದ ಇತ್ತ ಇಳಿ ವಯಸಿನವನೂ ಅಲ್ಲದ ವ್ಯಕ್ತಿ ಈ ತಂಡಕ್ಕೆ ಕ್ಯಾಪ್ಟನ್, ಈತನ ಹೆಸರು ಮಹಾದೇವಯ್ಯ. ಈತನಿಗೆ ಮೂರು ಜನ ಸಹಚರರು. ಕನ್ನಡ ಬಿಟ್ಟರೆ ಬೇರೆ ಭಾಷೆ ಬರಲೊಲ್ಲದು. ಈ ತಂಡ ತಮ್ಮ ವ್ಯವಹಾರಕ್ಕೆ ಹೆಚ್ಚಾಗಿ ನಂಬಿ ಕೊಂಡಿರುವುದು ಹಳ್ಳಿಯ ಮುಗ್ದ ಜನರನ್ನು. ಮುಗ್ದ ಜನರನ್ನು ಯಾವ ರೀತಿ ಯಾಮಾರಿಸ ಬಹುದು ಎನ್ನುವುದರ ಬಗ್ಗೆ ತಂಡದ ಕ್ಯಾಪ್ಟನ್ ಬೇಕಾದರೆ ಒಂದು ಸೆಮಿನಾರ್ ನಡೆಸಬಲ್ಲ. ಮೋಸ ಹೋಗುವವರು ಇದ್ದರೆ ಮೋಸ ಮಾಡುವವರು ಇದ್ದೇ ಇರುತ್ತಾರೆ, ಅದು ಬೇರೆ ಪ್ರಶ್ತ್ನೆ.
ಬಡತನ ಮತ್ತು ಹಣಕ್ಕಾಗಿ ಹಾತೊರೆಯುತ್ತಿರುವ ಕುಟುಂಬ ಈ ತಂಡದ ಮೊದಲ ಟಾರ್ಗೆಟ್. ಒಂದು ಕಿಡ್ನಿ ಮಾರಿದರೆ ನೀವೇನು ಸತ್ತು ಹೋಗಲ್ಲಾ ಎಂದು ನಂಬಿಸಿ ಬೆಂಗಳೂರಿಗೆ ಇಂತಹ ಆಮಿಷಕ್ಕೆ ಒಳಗಾದವರನ್ನು ಕರೆದು ಕೊಂಡು ಬರುತ್ತಾರೆ.
ವೈದ್ಯರು ಕೇಳಿದರೆ ಬೀಡಿ, ಸಿಗರೆಟ್, ಡ್ರಿಂಕ್ಸ್ ಅಂದ್ರೆ ಏನಂತಾನೆ ಗೊತ್ತಿಲ್ಲ. ನನಗೆ ಯಾವ ರೀತಿಯ ಹವ್ಯಾಸ ಕೂಡಾ ಇಲ್ಲ ಎನ್ನ ಬೇಕು. ಇಲ್ಲದಿದ್ದರೆ ನಿನ್ನ ಕಿಡ್ನಿ ಮಾರಾಟ ಆಗಲ್ಲಾ ಅಥವಾ ಕಡಿಮೆ ದುಡ್ಡಿಗೆ ಕೊಡಬೇಕಾಗುತ್ತೆ ಎಂದು ತಪಾಸಣೆಗೆ ಮೊದಲೇ ತಂಡ ಎಚ್ಚರಿಸುತ್ತೆ.
ಕಿಡ್ನಿ ತೆಗೆಯುವ ಸರ್ಜರಿಗೆ ನಿಮ್ಮನ್ನು ಸಿಂಗಾಪುರಿಗೆ ಕರ್ಕೊಂಡು ಹೋಗ್ತೀವಿ ಅಂದು ಬೆಂಗಳೂರಿನಲ್ಲೇ ಸಿಂಗಾಪುರ ತೋರಿಸುವ ಮಹಾನ್ ಕಿಲಾಡಿಗಳ ತಂಡ ಇದು. ಆಮಿಷಕ್ಕೆ ಒಳಗಾದವರು ಸ್ವಲ್ಪ ಹೆಬ್ಬೆಟ್ಟು ಗಳಾದರೆ ಇವರಿಗೆ ಭರ್ಜರಿ ಚಾನ್ಸ್. ನಿನ್ನ ಕಿಡ್ನಿ ಫೈಲ್ ಆಗಿದೆ ಎಂದು ನಂಬಿಸಿ ಸಾವಿರ ಲೆಕ್ಕಾಚಾರದಲ್ಲೇ ವ್ಯವಹಾರ ಮುಗಿಸಿ ಲಕ್ಷ ಲಕ್ಷ ಲಾಭ ಮಾಡ್ಕೊತಾರೆ.
ನಿಮ್ಮ ಒಂದು ಕಿಡ್ನಿಯನ್ನು ಮಾರಾಟ ಮಾಡಿ ನಿಮ್ಮ ಕಷ್ಟವೂ ದೂರವಾಗುತ್ತೆ, ಕಿಡ್ನಿಯ ತುರ್ತು ಅವಶ್ಯಕತೆ ಇರುವವರಿಗೆ ಸಹಾಯನೂ ಆಗುತ್ತೆ, ನಿಮಗೆ ಮೂರು ಲಕ್ಷ ಕೊಡಿಸುತ್ತೇನೆ ಎಂದು ಸೆಂಟಿಮೆಂಟ್ ಡೈಲಾಗ್ ಹೊಡೆದು ಬೆಂಗಳೂರಿಗೆ ಕರೆದು ಕೊಂಡು ಬರುವ ಈ ತಂಡಕ್ಕೆ ಒಂದು ಕಿಡ್ನಿಯಿಂದ ಬರುವ ಕಮಿಷನ್ ಒಂದು ಲಕ್ಷ!!
ಕಿಡ್ನಿಯನ್ನು ಸಿಂಗಾಪುರದಲ್ಲಿ ಯಾರಿಗೆ ಮಾರಾಟ ಮಾಡುತ್ತಿದ್ದಾರೆ.. ಇದರಲ್ಲಿ ಬೇರೆ ಯಾರ ಕೈವಾಡವಿದೆ ಎನ್ನುವ ಮಾಹಿತಿ ವಾಹಿನಿ ಕಲೆ ಹಾಕುವ ಸಮಯಕ್ಕೆ ಆ ಕಿಡ್ನಿ ಕಳ್ಳರಿಗೆ ಗುಪ್ತ ಕಾರ್ಯಾಚರಣೆಯ ಮಾಹಿತಿ ಸಿಗುತ್ತದೆ.. ತಮ್ಮ ಹೊಟ್ಟೆಯೊಳಗೆ ಕ್ಯಾಮೆರ ಇಟ್ಟುಕೊಂಡು ಈ ಗುಪ್ತ ಕಾರ್ಯಾಚರಣೆ ನಡೆಸಿದ ಟಿವಿ9 ತಂಡಕ್ಕೆ ಅಭಿನಂದನೆಗಳು.