ಬಿಗ್ ಬಾಸ್ ಮೇಲಿನ ಅನುಮಾನಕ್ಕೆ ಸುದೀಪ್ ತೆರೆ
ಬಳಿಕ ಚಂದ್ರಿಕಾ ಅವರು ಜಾರಿ ಬಿದ್ದಾಗ ಅರುಣ್ ಎಲ್ಲಿ ಏಟಾಯಿತು ಎಂದು ಕೇಳಿದ್ದರು. ಇದಕ್ಕೆ ಆಗ ಉತ್ತರ ಸಿಕ್ಕಿರಲಿಲ್ಲ. ಸುದೀಪ್ ಇದೇ ಪ್ರಶ್ನೆಯನ್ನು ಚಂದ್ರಿಕಾ ಅವರಿಗೆ ಕೇಳಿದರು, ಎಲ್ಲಿ ಪೆಟ್ಟಾಯಿತು ಚಂದ್ರಿಕಾ ಅವರೇ ಎಂದು. ಇದಕ್ಕೆ ಚಂದ್ರಿಕಾ ಹೇಳೋ ಹಾಗಿಲ್ಲ. ಆದರೆ ಸ್ವಲ್ಪ ನೋವಾಯಿತು ಎಂದರು.
ಈ ಬಾರಿ ಯಾರು ಪಾಸು ಯಾರಿಗೆ ಗೇಟ್ ಪಾಸು ಎಂದು ಹೇಳುತ್ತಲೇ ಎಲಿಮಿನೇಷನ್ ನಲ್ಲಿದ್ದವರ ಹೃದಯಬಡಿತವನ್ನು ಹೆಚ್ಚಿಸಿದರು. ಬ್ರೇಕ್ ಮೇಲೆ ಬ್ರೇಕ್ ತೆಗೆದುಕೊಂಡು ಸ್ಪರ್ಧಿಗಳಲ್ಲಿ ಇನ್ನೊಂದಿಷ್ಟು ಟೆನ್ಷನ್ ಕ್ರಿಯೇಟ್ ಮಾಡಿ ಮಜಾ ನೋಡಿದರು.

ಬೆಳಗ್ಗೆಯಿಂದ ಸಂಜೆ ತನಕ ಎಲ್ಲರೂ ಚೆನ್ನಾಗಿಯೇ ಇರುತ್ತೀರಾ. ಆದರೆ ಕನ್ಫೆಷನ್ ರೂಮಿನಲ್ಲಿ ನಾಮಿನೇಟ್ ಮಾಡಬೇಕಾದರೆ ಆತ್ಮೀಯರ ಹೆಸರನ್ನೇ ಸೂಚಿಸುತ್ತೀರಾ. ಈ ಬಗ್ಗೆ ವೀಕ್ಷಕರಿಗೆ ಅನುಮಾನಗಳು ಶುರುವಾಗಿದೆ. ಎಲ್ಲೋ ಏನೋ ನಡೀತಿದೆ ಎಂಬ ಸಂದೇಹಗಳು ಸುಳಿದಾಡುತ್ತಿವೆ. ಈ ಬಗ್ಗೆ ನೀವೇನು ಹೇಳ್ತೀರಾ ಅನುಶ್ರೀ ಎಂದಾಗ.
ವೈಯಕ್ತಿಕ ವಿಚಾರಕ್ಕೆ ಬಂದಾಗ ನಾವೆಲ್ಲಾ ಆತ್ಮೀಯವಾಗಿಯೇ ಇದ್ದೇವೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಆಟ ಎಂದು ಪರಿಗಣಿಸಿದಾಗ ಅದನ್ನು ಆಟವಾಗಿಯೇ ನೋಡುತ್ತಿದ್ದೇವೆ. ಇದರಲ್ಲಿ ಯಾವುದೇ ಗಿಮ್ಮಿಕ್ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜರತಾರಿ ಸೀರೆಯಲ್ಲಿ ಕಂಗೊಳಿಸುತ್ತಿದ್ದ ನಿಕಿತಾ ಅವರು ಕನ್ನಡ ಭಾಷೆ ಕಲಿಯದೆ ಇರುವ ಬಗ್ಗೆಯೂ ಗಮನಸೆಳೆದರು. ಇದೇ ವಿಚಾರಕ್ಕೆ ಅರುಣ್ ಹಾಗೂ ನಿಕಿತಾ ನಡುವೆ ನಡೆದ ಮಾತಿನ ಚಕಮಕಿಗೂ ಪರಿಹಾರ ಸೂಚಿಸಿದರು.


Click it and Unblock the Notifications











