Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್'ಗೆ ಸ್ಪರ್ಧಿಯಾಗಿ ಮಾಡಬಹುದು ಎಂದು ಸುದೀಪ್ ಸೂಚಿಸಿದ್ದು ಈ ಒಬ್ಬರನ್ನು ಮಾತ್ರ
Recommended Video
'ಬಿಗ್ ಬಾಸ್' ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ನನ್ನ ಭಾಗವಹಿಸುವಿಕೆ ಇರುವುದಿಲ್ಲ ಎಂದು ನಟ ಸುದೀಪ್ ತಿಳಿಸಿದ್ದಾರೆ. ನಿನ್ನೆ (ಅಕ್ಟೋಬರ್ 10) ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಚಾರದ ಬಗ್ಗೆಯೂ ಕಿಚ್ಚ ಮಾತನಾಡಿದರು.
'ಬಿಗ್ ಬಾಸ್'ಗೆ ಹೋಗಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಇದು ಸುದೀಪ್ ಮೇಲೆಯೂ ಕೆಲವು ಬಾರಿ ಒತ್ತಡ ಆಗಿದೆ. ''ನಮ್ಮ ಹುಡುಗ ಒಬ್ಬ ಬಿಗ್ ಬಾಸ್ ಗೆ ಹೋಗಬೇಕು, ಸಹಾಯ ಮಾಡಿ'' ಎಂದು ಕೆಲ ರಾಜಕಾರಣಿಗಳು ಕೂಡ ಸುದೀಪ್ ಆಗಾಗ ಕರೆ ಮಾಡಿದ್ದಾರಂತೆ.
ಮಲ್ಟಿಫ್ಲೆಕ್ಸ್ ನಲ್ಲಿ ಬಿಗ್ ಬಾಸ್ ಕನ್ನಡ ನೇರ ಪ್ರಸಾರ
ಆದರೆ, ಸುದೀಪ್ ಈ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಸ್ಪರ್ಧಿಗಳ ಆಯ್ಕೆಯನ್ನು ಬಿಗ್ ಬಾಸ್ ಆಯೋಜಕರಿಗೆ ಬಿಡುತ್ತಾರೆ. ಆದರೆ, 'ಬಿಗ್ ಬಾಸ್' ಸೀಸನ್ 2 ರಲ್ಲಿ ಮಾತ್ರ ಸುದೀಪ್ ಕ್ರಿಕೆಟ್ ಆಟಗಾರ ಅಯ್ಯಪ್ಪರನ್ನು ರೆಫರ್ ಮಾಡಿದ್ದರು.
'ಬಿಗ್ ಬಾಸ್' ಸೀಸನ್ 3 ಕಾರ್ಯಕ್ರಮ ಪ್ರಾರಂಭ ಆಗಲು ಕೆಲವೇ ದಿನಗಳ ಇರುವಾಗ ಒಬ್ಬ ಕ್ರಿಕೆಟ್ ಆಟಗಾರನನ್ನು ಹಾಕಬೇಕು ಎನ್ನುವ ಮಾತು ಬಂತು. ಕೊನೆಯ ಘಳಿಗೆ ಆಗಿರುವ ಕಾರಣ ಸುದೀಪ್ ನಟಿ ಪ್ರೇಮ ಸಹೋದರ, ಕ್ರಿಕೆಟ್ ಆಟಗಾರ ಅಯ್ಯಪ್ಪ ಹೆಸರುನ್ನು ಸೂಚಿಸಿದರು.
Bigg Boss Kannada 7: ದೊಡ್ಮನೆ ಟಿಕೆಟ್ ಪಡೆದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ
''ಅಯ್ಯಪ್ಪ ನನಗೆ ಪರಿಚಯ ಇಲ್ಲ. ನಿಮಗೆ ಬೇಕಾದರೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಬಹುದು'' ಎಂದು ಸುದೀಪ್ ಹೇಳಿದ್ದರಂತೆ. ಅಯ್ಯಪ್ಪ ಹೆಸರನ್ನು ಸುದೀಪ್ ಸೂಚಿಸಿದರೆ ವಿನಃ, ಒತ್ತಡ ಹಾಕಿಲ್ಲ. 'ಬಿಗ್ ಬಾಸ್' ಆಯೋಜಕರಿಗೂ ಅಯ್ಯಪ್ಪ ಇಷ್ಟ ಆಗಿದ್ದು, ಸ್ಪರ್ಧಿಯಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಬಿಟ್ಟರೆ, ಸುದೀಪ್ ಇದುವರೆಗೆ ಯಾವ ಸ್ಪರ್ಧಿಯನ್ನು ರೆಫರ್ ಮಾಡಿಲ್ಲ.