Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ್ ರಾಘವೇಂದ್ರ ಅವರಿಗೆ ಬೆಂಡೆತ್ತಿದ ಸುದೀಪ್
ಅರುಣ್ ಹಾಗೂ ಚಂದ್ರಿಕಾ ಅವರ ಶೃಂಗಾರ, ಹಾಸ್ಯ ರಸದ ಬಳಿಕ ಸುದೀಪ್ ಅವರು ಕೊಂಚ ಭಯಾನಕ ರಸ ಸ್ಫುರಿಸಿದರು. ಬರುಬರುತ್ತಾ ನಿಮ್ಮಲ್ಲಿ ಉತ್ಸಾಹ ಕಡಿಮೆಯಾಗುತ್ತಿದೆ. ಮೆಂಟಲಿ ಡ್ರೈನ್ ಔಟ್ ಆಗಿದ್ದೀರಾ. ಆಸಕ್ತಿ ತೋರಿಸುತ್ತಿಲ್ಲ. ನನ್ನ ಪ್ರಕಾರ ಕಷ್ಟ ಇಲ್ಲದೆ ಬರುವಂತಹ ಗೆಲುವು ಗೆಲುವೇ ಅಲ್ಲ. ಸೈಕಲ್ ಟಾಸ್ಕ್ ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಕ್ಲಾಸ್ ತೆಗೆದುಕೊಂಡರು.
ಸೈಕಲ್ ತುಳಿಯುವ ಟಾಸ್ಕನ್ನು ಎಲ್ಲರೂ ಅರ್ಧಕ್ಕೆ ಬಿಟ್ಟ ಬಗ್ಗೆ ಬೆಂಡೆತ್ತಿದರು. ಬಳಿಕ ವಿಜಯ್ ರಾಘವೇಂದ್ರ ಅವರು ಮಾಡಿದ ಆರೋಪಗಳಿಗೂ ವಿವರಣೆ ನೀಡಿತ್ತಾ ಅವರನ್ನೂ ತರಾಟೆಗೆ ತೆಗೆದುಕೊಂಡರು. ಟೆಕ್ನಿಕಲಿ ಸರಿಯಿಲ್ಲ, ಲೈಟ್ ಇರಲಿಲ್ಲ, ಮಾನವೀಯತೆ ಇಲ್ಲ ಎಂಬ ಆರೋಪಗಳಿಗೆ ಖಡಕ್ ಉತ್ತರವನ್ನೂ ಕೊಟ್ಟರು.
ಬಿಗ್ ಬಾಸ್ ನಮಗೆ ಚೀಟ್ ಮಾಡಿದ ಎಂದು ಎಲ್ಲರೂ ಆರೋಪಿಸಿದಿರಿ. ಈಗ ನಿಮ್ಮ ಮುಂದೆಯೇ ನಾನು ಪಾಯಿಂಟ್ಸನ್ನು ಲೆಕ್ಕ ಮಾಡುತ್ತೇನೆ ಎಂದು ಹೇಳಿ ಲೆಕ್ಕಾಚಾರ ತಪ್ಪಿದ ಬಗ್ಗೆ ತೋರಿಸಿದರು. ಏಳು ಸಾವಿರ ಚಿಲ್ಲರೆ ಪಾಯಿಂಟ್ಸ್ ಗೆ ಬದಲಾಗಿ ಏಳು ಸಾವಿರ ಪಾಯಿಂಟ್ಸ್ ಎಂದು ಲಗ್ಜುರಿ ಬಜೆಟನ್ನು ತಪ್ಪಾಗಿ ಲೆಕ್ಕಹಾಕಿದ್ದನ್ನು ತೋರಿಸಿದರು. ಇದಕ್ಕೆ ಮನೆಯ ಸದಸ್ಯರ ಮೌನವೇ ಉತ್ತರವಾಗಿತ್ತು.
ಇನ್ನು ನಿಮಗೆ ಉಳಿದಿರುವುದು ನಾಲ್ಕೇ ನಾಲ್ಕು ವಾರ. ಫೈನಲ್ಸ್ ಬರುತ್ತಿದ್ದಂತೆ ಟಾಸ್ಕ್ ಗಳು ಟಫ್ ಆಗುತ್ತಾ ಹೋಗುತ್ತವೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಎಲ್ಲವನ್ನೂ ನೀಟಾಗಿ ನಿಭಾಯಿಸಿ. ಗೆಲುಗು ನಿಮ್ಮ ಕೈಯಲ್ಲೇ ಇದೆ ಎಂದೂ ಎಚ್ಚರಿಸಿದರು.