ಬಿಗ್ ಬಾಸ್ ಫೈನಲ್ ಗೂ ಮುಂಚೆ ಸುದೀಪ್ ಅಂತರಾಳದ ಮಾತು
ಕಳೆದ ಮೂರು ತಿಂಗಳಿನಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಿರುವ ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಶನಿವಾರ ಮತ್ತು ಭಾನುವಾರ ಫೈನಲ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಈಗಾಗಲೇ ಕಿಚ್ಚ ಸುದೀಪ್ ಬಿಗ್ ಬಾಸ್ ತಂಡ ಸೇರಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 6ರ ಫಿನಾಲೆ ವೇದಿಕೆ ಏರುವುದಕ್ಕೂ ಮುನ್ನಾ ಕಿಚ್ಚ ಟ್ವಿಟ್ಟರ್ ನಲ್ಲಿ ಈ ಆವೃತ್ತಿಯ ಬಗ್ಗೆ ತಮ್ಮ ಮನದಾಳವನ್ನ ವ್ಯಕ್ತಪಡಿಸಿದ್ದಾರೆ.
''ಫಿನಾಲೆಗೆ ಕ್ಷಣಗಣನೆ, ಇನ್ನೊಂದು ಅದ್ಭುತವಾದ ಆವೃತ್ತಿ ಅಂತಿಮ ಹಂತಕ್ಕೆ ಬಂದಿದೆ. ಮುಂದಿನ ಆವೃತ್ತಿ ಬರೋವರೆಗೂ ನನ್ನ ಬಿಗ್ ಬಾಸ್ ತಂಡವನ್ನ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ. ಬಿಗ್ ಬಾಸ್ ಫೈನಲ್ ಸ್ಪರ್ಧಿಗಳಿಗೆ ನನ್ನ ಧನ್ಯವಾದ ಹಾಗೂ ಎಲ್ಲರಿಗೂ ಆಲ್ ದಿ ಬೆಸ್ಟ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಶನಿವಾರ ಮತ್ತು ಭಾನುವಾರ ಎರಡು ದಿನ ಫೈನಲ್ ನಡೆಯಲಿದ್ದು, ಭಾನುವಾರ ವಿನ್ನರ್ ಯಾರೆಂದು ಪ್ರಕಟಿಸಲಾಗುವುದು. ನಿರೀಕ್ಷೆಯಂತೆ ಶನಿವಾರ ಕೆಲವು ಮನರಂಜನೆ ಕಾರ್ಯಕ್ರಮಗಳು, ಬಿಗ್ ಬಾಸ್ ಸ್ಪರ್ಧಿಗಳ ನೃತ್ಯ, ಹಾಗೂ ಒಬ್ಬರು ಅಥವಾ ಇಬ್ಬರ ಎಲಿಮಿನೇಷನ್ ಇರುವು ಸಾಧ್ಯತೆ ಇದೆ.

ಇನ್ನುಳಿದಂತೆ ಫೈನಲ್ ಹಂತದಲ್ಲಿ ನವೀನ್ ಸಜ್ಜು, ಕವಿತಾ ಗೌಡ, ಆಂಡ್ರ್ಯೂ, ಶಶಿಕುಮಾರ್ ಹಾಗೂ ರ್ಯಾಪಿಡ್ ರಶ್ಮಿ ಉಳಿದುಕೊಂಡಿದ್ದಾರೆ. ಈ ಐವರಲ್ಲಿ ಯಾರು ವಿನ್ ಆಗಬಹುದು ಎಂಬ ಚರ್ಚೆ ಹೆಚ್ಚಾಗಿದೆ.


Click it and Unblock the Notifications











