Don't Miss!
- Finance April 23 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಫೈನಲ್ ಗೂ ಮುಂಚೆ ಸುದೀಪ್ ಅಂತರಾಳದ ಮಾತು
ಕಳೆದ ಮೂರು ತಿಂಗಳಿನಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಿರುವ ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಶನಿವಾರ ಮತ್ತು ಭಾನುವಾರ ಫೈನಲ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಈಗಾಗಲೇ ಕಿಚ್ಚ ಸುದೀಪ್ ಬಿಗ್ ಬಾಸ್ ತಂಡ ಸೇರಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 6ರ ಫಿನಾಲೆ ವೇದಿಕೆ ಏರುವುದಕ್ಕೂ ಮುನ್ನಾ ಕಿಚ್ಚ ಟ್ವಿಟ್ಟರ್ ನಲ್ಲಿ ಈ ಆವೃತ್ತಿಯ ಬಗ್ಗೆ ತಮ್ಮ ಮನದಾಳವನ್ನ ವ್ಯಕ್ತಪಡಿಸಿದ್ದಾರೆ.
'ಬಿಗ್ ಬಾಸ್' ಶಶಿ ಕುಮಾರ್ 'ಫೇಕ್' ರೈತ ಅಲ್ಲ.. ಸಾಕ್ಷಿ ಬೇಕಾ.?
''ಫಿನಾಲೆಗೆ ಕ್ಷಣಗಣನೆ, ಇನ್ನೊಂದು ಅದ್ಭುತವಾದ ಆವೃತ್ತಿ ಅಂತಿಮ ಹಂತಕ್ಕೆ ಬಂದಿದೆ. ಮುಂದಿನ ಆವೃತ್ತಿ ಬರೋವರೆಗೂ ನನ್ನ ಬಿಗ್ ಬಾಸ್ ತಂಡವನ್ನ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ. ಬಿಗ್ ಬಾಸ್ ಫೈನಲ್ ಸ್ಪರ್ಧಿಗಳಿಗೆ ನನ್ನ ಧನ್ಯವಾದ ಹಾಗೂ ಎಲ್ಲರಿಗೂ ಆಲ್ ದಿ ಬೆಸ್ಟ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಂಡಿಗೆ ಮದುವೆ.!
ಶನಿವಾರ ಮತ್ತು ಭಾನುವಾರ ಎರಡು ದಿನ ಫೈನಲ್ ನಡೆಯಲಿದ್ದು, ಭಾನುವಾರ ವಿನ್ನರ್ ಯಾರೆಂದು ಪ್ರಕಟಿಸಲಾಗುವುದು. ನಿರೀಕ್ಷೆಯಂತೆ ಶನಿವಾರ ಕೆಲವು ಮನರಂಜನೆ ಕಾರ್ಯಕ್ರಮಗಳು, ಬಿಗ್ ಬಾಸ್ ಸ್ಪರ್ಧಿಗಳ ನೃತ್ಯ, ಹಾಗೂ ಒಬ್ಬರು ಅಥವಾ ಇಬ್ಬರ ಎಲಿಮಿನೇಷನ್ ಇರುವು ಸಾಧ್ಯತೆ ಇದೆ.
ಇನ್ನುಳಿದಂತೆ ಫೈನಲ್ ಹಂತದಲ್ಲಿ ನವೀನ್ ಸಜ್ಜು, ಕವಿತಾ ಗೌಡ, ಆಂಡ್ರ್ಯೂ, ಶಶಿಕುಮಾರ್ ಹಾಗೂ ರ್ಯಾಪಿಡ್ ರಶ್ಮಿ ಉಳಿದುಕೊಂಡಿದ್ದಾರೆ. ಈ ಐವರಲ್ಲಿ ಯಾರು ವಿನ್ ಆಗಬಹುದು ಎಂಬ ಚರ್ಚೆ ಹೆಚ್ಚಾಗಿದೆ.