Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣದಲ್ಲಿ ಮೀರಾ ಮಾಧವರ ಲವ್ ಸ್ಟೋರಿ
ಇದು ಶ್ರೀಮಂತ ಹುಡುಗಿ ಹಾಗೂ ಮಧ್ಯಮ ವರ್ಗದ ಹುಡುನ ನಡುವಿನ ಲವ್ ಸ್ಟೋರಿ. ಶ್ರೀಮಂತ ಕುಟುಂಬದ ಹುಡುಗಿ ಹೆಸರು ಮೀರಾ. ಆಕೆ ಸಹೃದಯಿ. ಮಧ್ಯಮ ವರ್ಗದ ಮಾಧವ ಎಂಬ ಹುಡುಗನನ್ನು ಪ್ರೀತಿಸುತ್ತಾಳೆ. ಅವನ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಾಳೆ.
ಮಾಧವನಿಗೆ ಎಲ್ಲವೂ ಗೊತ್ತು. ಆದರೆ ಯಾವುದರಲ್ಲೂ ಪರಿಣಿತನಲ್ಲ. ಅವನಿಗೆ ಪ್ರೀತಿಯಲ್ಲಿ ಆಸಕ್ತಿ ಇಲ್ಲವೇ ಇಲ್ಲ. ಆದರೆ ಕಾಲಚಕ್ರ ಉರುಳಿದಂತೆ ಮೀರಾ ಅವನ ಮನಸ್ಸನ್ನು ಗೆಲ್ಲುತ್ತಾಳೆ. ಇಬ್ಬರು ಮದುವೆಯಾಗುತ್ತಾರೆ. ಇವರಿಬ್ಬರ ಬದುಕಿನ ಪಯಣ ಮತ್ತು ಬರುವ ಕಷ್ಟಗಳನ್ನು ಎದುರಿಸುವ ರೀತಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ.
ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನರಂಜನಾ ಸುವರ್ಣದಲ್ಲಿ ಮತ್ತೊಂದು ಹೊಸ ಧಾರಾವಾಹಿ 'ಮೀರಾ ಮಾಧವ' ಇದೇ ಡಿಸೆಂಬರ್ 9, 2013 ರಿಂದ ಆರಂಭವಾಗುತ್ತಿದೆ. ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 10 ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ.
ರಿಯಾಲಿಟಿ ಶೋನ ಸ್ಪರ್ಧಿ ಕಾವ್ಯ ಗೌಡ ನಾಯಕಿ
ಪ್ರೀತಮ್ ಶೆಟ್ಟಿ ಈ ಧಾರಾವಾಹಿ ನಿರ್ದೇಶಕರು. 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋನ ಸ್ಪರ್ಧಿ ಕಾವ್ಯ ಗೌಡ ಮತ್ತು ಶೈನ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರ್ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಒಂದೆರಡು ಮಾತನ್ನೂ ಹೇಳಿದ್ದಾರೆ.
ಇದೊಂದು ವಿಭಿನ್ನ ಪ್ರೇಮಕಥೆಯಾಗಿದೆ
"ಇದೊಂದು ವಿಭಿನ್ನ ಪ್ರೇಮಕಥೆಯಾಗಿದೆ. ನಾವು ಈ ಕಥೆಯ ಥೀಮ್ ಗಾಗಿ ಸಾಕಷ್ಟು ಕೆಲಸ ಮಾಡಿದ್ದು, ಇಲ್ಲಿರುವ ಎರಡೂ ಮುಖ್ಯ ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದೆ.
ಕುಟುಂಬಸಮೇತ ನೋಡಬಹುದಾದ ಸೀರಿಯಲ್
ನಮ್ಮ ವೀಕ್ಷಕರು ಖಂಡಿತ ನೋಡಿ ಆನಂದಿಸ್ತಾರೆ ಅನ್ನೋ ನಂಬಿಕೆ ನನ್ನದು ಹಾಗೂ ಈ ಧಾರಾವಾಹಿಯನ್ನು ಕುಟುಂಬಸಮೇತರಾಗಿ ಕುಳಿತು ಮನೆಮಂದಿಯೆಲ್ಲಾ ನೋಡಬಹುದು" ಎಂದಿದ್ದಾರೆ.
ಮೀರಾ ಮಾಧವ ಹೊಸ ಸೇರ್ಪಡೆ
"ಮೀರಾ ಮಾಧವ" ಸುವರ್ಣವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಪ್ರಿಯದರ್ಶಿನಿ, ಮಿಲನ, ಅರಗಿಣಿ, ಪಂಚರಂಗಿ ಪೋಂ ಪೋಂ, ಪಲ್ಲವಿ ಅನುಪಲ್ಲವಿ, ಆಕಾಶದೀಪ, ಸರಸ್ವತಿ ಮತ್ತು ಕರ್ಪೂರದಗೊಂಬೆ ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತದೆ.
ಕನ್ನಡ ಕುಟುಂಗಳ ಮನೆಮಾತಾದ ಸುವರ್ಣ ವಾಹಿನಿ
ಸುವರ್ಣವಾಹಿನಿಯು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ವೈವಿಧ್ಯತೆಯನ್ನು ಸೃಷ್ಟಿಸಿ ಕನ್ನಡ ಕುಟುಂಗಳ ಮನೆಮಾತಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.