Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪಲ್ಲವಿ ಅನುಪಲ್ಲವಿ' ನೂರೈವತ್ತರ ಸುವರ್ಣ ಸಂಭ್ರಮ
ಈ ಹಿಂದೆಯೂ ವಿವಿಧ ಧಾರಾವಾಹಿಗಳ ಕಲಾವಿದರು ವೀಕ್ಷಕರೊಂದಿಗೆ ಸಂವಾದ, ಚರ್ಚೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈಗ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಂಡವು ದಾವಣಗೆರೆಯಲ್ಲಿ ತಮ್ಮ ವೀಕ್ಷಕ ಬಳಗದೊಂದಿಗೆ ಮುಖಾಮುಖಿಯಾಗಿ ಸಂವಾದ ನಡೆಸಿತು.
ಸಂವಾದದ ಜೊತೆಗೆ ನಡೆದ ಮನರಂಜನಾ ಕಾರ್ಯಕ್ರಮ ದಾವಣಗೆರೆ ಮಂದಿಯ ಬೆಣ್ಣೆಯಂತ ಮನಸ್ಸನ್ನು ಗೆದ್ದಿದೆ. ಈ ಕಾರ್ಯಕ್ರಮದಲ್ಲಿ 'ಚಾರ್ ಮಿನಾರ್' ಚಿತ್ರದ ನಾಯಕ ಪ್ರೇಮ್ ಹಾಗೂ ಮೇಘನಾ ಗಾವ್ಕರ್ ಅವರೂ ಪಾಲ್ಗೊಂಡು ಹೆಜ್ಜೆ ಹಾಕಿ ಮತ್ತಷ್ಟು ಮೆರುಗು ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ 'ಪಲ್ಲವಿ ಅನುಪಲ್ಲವಿ 150' ಸುವರ್ಣ ಸಂಭ್ರಮ ಕಾರ್ಯಕ್ರಮ ಶನಿವಾರ (ಫೆ.23) ಪ್ರಸಾರವಾಗಲಿದೆ. ಸಂಜೆ 6ಕ್ಕೆ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು. ಕುತೂಹಲ ತಿರುವುಗಳಿಂದ ಕೂಡಿರುವ ಈ ಧಾರಾವಾಹಿ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ಮಧುಸೂಧನ್ ಜಿ ನಿರ್ದೇಶಿಸಿರುವ ಈ ಧಾರಾವಾಹಿಗೆ ರಘು ಚರಣ್ ತಿಪಟೂರು ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪಾತ್ರವರ್ಗದಲ್ಲಿ ಮಧು ಹೆಗಡೆ, ರಶ್ಮಿ, ರಕ್ಷಾ ಹೊಳ್ಳ, ಅಶ್ವಿನ್, ಸುಪ್ರೀತಾ, ಸೌಮ್ಯಾ ಅಲೆಕ್ಸ್, ಕೃಷ್ಣ ನಾಡಿಗ್, ಲಕ್ಷ್ಮಿ ಭಟ್ ಮುಂತಾದವರಿದ್ದಾರೆ.
ನಂದಿನಿ ಹಾಗೂ ಕಿಶೋರ್ ಸುತ್ತ ಸುತ್ತವ ಕಥೆ ಇದು. ಕಿಶೋರ್ ಒಬ್ಬ ಮಲ್ಟಿ ಮಿಲಿಯನೇರ್ ಉದ್ಯಮಿ. ಮೊದಲಿನಿಂದಲೂ ನಂದಿನಿಯನ್ನು ಪ್ರೀತಿಸುತ್ತಿರುತ್ತಾನೆ. ಆದರೆ ನಂದಿನಿ ಗಂಡ ಅಪಘಾತದಲ್ಲಿ ಕಣ್ಮುಚ್ಚುತ್ತಾನೆ. ವಿಧವೆಯಾದ ನಂದಿನಿಗೆ ಒಬ್ಬ ಮಗಳು ಇದ್ದಾಳೆ. ಇವರಿಬ್ಬರು ಒಂದಾಗುತ್ತಾರಾ? ಎಂಬುದೇ ಕಥೆ. (ಒನ್ಇಂಡಿಯಾ ಕನ್ನಡ)