Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
In Pics: ಸ್ಟಾರ್ ಸುವರ್ಣ ತಾರೆಗಳ ಬೆಳಕಿನ ಹಬ್ಬ 'ಸುವರ್ಣ ದೀಪೋತ್ಸವ'
ಕಲರ್ ಫುಲ್ ಮನರಂಜನೆಯನ್ನು ವೀಕ್ಷಕರಿಗೆ ನೀಡುತ್ತಾ ಬರುತ್ತಿರುವ ಎಲ್ಲರ ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿ, 'ದೀಪಾವಳಿ' ಹಬ್ಬದ ಸಂದರ್ಭದಲ್ಲೂ ವಿಶೇಷ ಕಾರ್ಯಕ್ರಮದ ಮೂಲಕ ಮನರಂಜನೆ ನೀಡಲಿದೆ.
ಕಿರುತೆರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತೀ ವಿಜೃಂಭಣೆಯಿಂದ ಸ್ಟಾರ್ ತಾರೆಗಳ ಜೊತೆ ವೈಭವ ಹಾಗೂ ಸಂಭ್ರಮದಿಂದ ಕೂಡಿದ 'ಬೆಳಕಿನ ಹಬ್ಬ' ದೀಪಾವಳಿಯನ್ನು ಕಿಕ್ಕಿರಿದ ಅಭಿಮಾನಿಗಳ ಜೊತೆ ಆಚರಿಸಲಾಯಿತು.
ಇದೇ ಮೊದಲ ಬಾರಿಗೆ ಪ್ರೇಕ್ಷಕರ ಜೊತೆ, ಎಲ್ಲರ ಮೆಚ್ಚಿನ ಧಾರಾವಾಹಿ 'ಹರಹರ ಮಹಾದೇವ' ತಂಡ ಬೆಳಕಿನ ಹಬ್ಬವನ್ನು ಆಚರಿಸಿಕೊಂಡಿತು. ಸತಿ-ಮಹಾದೇವನಿಗೆ, ಸುವರ್ಣ ತಾರೆಯರು ಸಾತ್ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.['ಮಹಾದೇವ'ನೊಂದಿಗೆ ಸುವರ್ಣ ತಾರೆಗಳ ಬೆಳಕಿನ ಹಬ್ಬ]
ಸ್ವಾರ್ ಸುವರ್ಣದ ಸೀರಿಯಲ್ ಮತ್ತು ರಿಯಾಲಿಟಿ ಶೋಗಳ ತಾರೆಯರು ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕಿ, ತಮ್ಮ ಮನದಾಳದ ಮಾತುಗಳಿಂದ ಎಲ್ಲರನ್ನು ರಂಜಿಸಿ, ಅಭಿಮಾನಿಗಳ ಜೊತೆ ತಾವೂ ಸಂಭ್ರಮಿಸಿದರು. ಮುಂದೆ ಓದಿ.....
ಸ್ಟೆಪ್ ಹಾಕಿದ ಕಿರುತೆರೆ ತಾರೆಗಳು
ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಕಲಾವಿದರು ಮತ್ತು ರಿಯಾಲಿಟಿ ಸ್ಟಾರ್ ಗಳು ತಮ್ಮ ಪರಿವಾರದೊಂದಿಗೆ, ದೀಪಾವಳಿ ಹಬ್ಬದ ವಿಶೇಷತೆಯನ್ನು ತಿಳಿಸುವುದರ ಜೊತೆ-ಜೊತೆಗೆ ಒಂದಿಷ್ಟು ಜಬರ್ದಸ್ತ್ ಸ್ಟೆಪ್ ಹಾಕಿ ಎಲ್ಲರನ್ನು ಮನರಂಜಿಸಿದರು.[ಚಿತ್ರಗಳು: 'ಸುವರ್ಣ ಮಹೋತ್ಸವ'ದಲ್ಲಿ ಸ್ಟಾರ್ ಗಳ ದರ್ಬಾರ್]
ದಿಗ್ಗಜರನ್ನು ಅನುಕರಣೆ ಮಾಡಿದ ಕಲಾವಿದರು
ಇದೇ ಸಂದರ್ಭದಲ್ಲಿ ಚಿತ್ರರಂಗದ ದಿಗ್ಗಜ ನಟರಾದ, ವರನಟ ಡಾ.ರಾಜ್ ಕುಮಾರ್, 'ಅಭಿನಯ ಭಾರ್ಗವ' ಡಾ.ವಿಷ್ಣುವರ್ಧನ್, 'ಕರಾಟೆ ಕಿಂಗ್' ಶಂಕರ್ ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರತಿರೂಪದ ನಟರು, ಅವರದೇ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕುವುದರ ಜೊತೆಗೆ ಅವರಂತೆ ಡೈಲಾಗ್ ಗಳನ್ನು ಹೇಳಿ ನೆರೆದಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕ ಬಂಧುಗಳನ್ನು ರಂಜಿಸಿದರು. [ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು']
ಡಿಂಪಲ್ ಕ್ವೀನ್ ರಚಿತಾ ರಾಮ್
ಕಿರುತೆರೆಯಲ್ಲಿ ಪರಿಚಯವಾಗಿ ಇದೀಗ ಬೆಳ್ಳಿತೆರೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಚೆಲುವೆ, ಕಣ್ಣ ನೋಟದಲ್ಲೇ ಕಾಡೋ ಮದನಾರಿ ಕನ್ನಡಿಗರ 'ಬುಲ್ ಬುಲ್' ನಟಿ ರಚಿತಾ ರಾಮ್ ಈ ಸಂಭ್ರಮದ ದೀಪೋತ್ಸವಕ್ಕೆ ಆಗಮಿಸಿದ್ದರು. ಜೊತೆಗೆ ಅವರು ಕೂಡ ತಮ್ಮ ಅಭಿಮಾನಿಗಳೊಂದಿಗೆ ಸೇರಿ ಹೆಜ್ಜೆ ಹಾಕಿ 'ಸುವರ್ಣ ದೀಪೋತ್ಸವ'ಕ್ಕೆ ಇನ್ನಷ್ಟು ಮೆರಗು ನೀಡಿದರು.
ಮೋಜು-ಮಸ್ತಿಯಿಂದ ಕೂಡಿದ 'ದೀಪೋತ್ಸವ'
ಈ ಸಂಭ್ರಮದ ಕಾರ್ಯಕ್ರಮದಲ್ಲಿ ನೃತ್ಯ-ಗೀತೆಗಳ ಜೊತೆಗೆ ಒಂದಿಷ್ಟು ಹಾಸ್ಯ ಚಟಾಕಿಯು ಎಲ್ಲರ ನಗುವಿಗೆ ಕಾರಣವಾಯಿತು. ಹಾಸ್ಯ ಮಾತುಗಾರ ರಿಚರ್ಡ್ ಲೂಯಿಸ್ ಅವರ ಹಾಸ್ಯ ಚಟಾಕಿ ಈ ವೇದಿಕೆಗೆ ಮತ್ತಷ್ಟು ರಂಗು ನೀಡಿತು.
ಯಾವಾಗ ಪ್ರಸಾರ?
ರಂಗು ರಂಗಿನ ವೇದಿಕೆಯಲ್ಲಿ ಗುಂಗೇರಿಸಿ, ಕಂಗೊಳಿಸುವ 'ಬೆಳಕಿನ ಹಬ್ಬ' ದೀಪಾವಳಿ, ಇದೇ ಭಾನುವಾರ (ಅಕ್ಟೋಬರ್ 30ರಂದು), ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ನಿಮ್ಮೆಲ್ಲರ ಮನೆಗೆ ಬರಲಿದೆ.