Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನರಂಜನೆ ಮಹಾಪೂರ ಸುವರ್ಣ ಪರಿವಾರ ಅವಾರ್ಡ್ಸ್
ಸ್ಟಾರ್ ನೆಟ್ ವರ್ಕ್ ಕನ್ನಡ ಮನೋರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು 3ನೇ ಪರಿವಾರ ಅವಾರ್ಡ್ಸ್ ಕಾರ್ಯಕ್ರಮವನ್ನು ಇದೇ ಏಪ್ರಿಲ್ 18 ಮತ್ತು 19 ರಂದು ಸಂಜೆ 6 ಗಂಟೆಗೆ ಪ್ರಸಾರ ಮಾಡಲಿದೆ.
ಸುವರ್ಣ ತಾರೆಯರಾದ ಅಮೃತ, ಸಮರ್ಥ ಮತ್ತು ಪ್ರಾರ್ಥನಾ; ಸೂರ್ಯ ಮತ್ತು ಶ್ರಾವಣಿ; ಮಧು, ಕೃಷ್ಣ ಮತ್ತು ಸೋನಿಯಾ; ಪ್ರೀತಂ ಮತ್ತು ಭಾಗ್ಯ ಹಾಗೂ ಮೊದಲಾದವರು ಅದ್ಭುತ ಪರ್ಫಾಮನ್ಸ್ ಗಳನ್ನು ನೀಡಿ ಮನರಂಜನೆಯ ಮಹಾಪೂರವನ್ನೇ ಹರಿಸಿದ್ದಾರೆ.
ಸುಂದರ ರಸಸಂಜೆಯ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಾದ ಗೋಲ್ಡನ್ ಸ್ಟಾರ್ ಗಣೇಶ್, ಅಕುಲ್ ಬಾಲಾಜಿ, ನೀತು, ಸಂತೋಷ್, ಆದಿ ಲೋಕೇಶ್ ಮತ್ತು ಸೃಜನಶೀಲ ನಿರ್ದೇಶಕ ಗುರುಪ್ರಸಾದ ಸಾಕ್ಷಿಯಾದರು.
ಫೆವರಿಟ್ ವಿಭಾಗದಲ್ಲಿ ಸುವರ್ಣದ ಫೆವರಿಟ್ ಸೀರಿಯಲ್, ಫೆವರಿಟ್ ಗಂಡ ಹೆಂಡ್ತಿ ಜೋಡಿ, ಫೆವರಿಟ್ ಕಾಮಿಡಿಯನ್, ಫೆವರಿಟ್ ನಟಿ, ಫೆವರಿಟ್ ನಟ, ಫೆವರಿಟ್ ಹೊಸ ಸದಸ್ಯ, ಫೆವರಿಟ್ ಹೊಸ ಸದಸ್ಯೆ ಮೊದಲಾದವು.
ವಾಹಿನಿ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಎಲ್ಲ ತಾರೆಯರು ಒಂದೇ ವೇದಿಕೆಯಲ್ಲಿ ಪರ್ಫಾರ್ಮ ಮಾಡುವುದರಿಂದ ಜನರು ಪ್ರೀತಿಯಿಂದ ನೋಡುವ ವಿಶೇಷ ಕಾರ್ಯಕ್ರಮ ಇದಾಗಿದೆ. ಅಲ್ಲದೇ ಇದು ಕಿರುತೆರೆ ತಾರೆಯರಿಗೆ ನೀಡುವ ಪ್ರೋತ್ಸಾಹ ಮತ್ತು ಪ್ರೇರಣೆಯಾಗಿದೆ.
ಸುವರ್ಣ ಒಂದು ವಿಭಿನ್ನ ಹಾಗೂ ತಾಜಾ ಕಾರ್ಯಕ್ರಮಗಳನ್ನು ಬಿತ್ತರಿಸುವ ವಾಹಿನಿಯಾಗಿ ಎಲ್ಲರ ಮುಂದಿದೆ. ವಾಹಿನಿಯಲ್ಲಿ ಬರುವ ಅಮೃತವರ್ಷಿಣಿ, ಮಿಲನ, ಅವನು ಮತ್ತೆ ಶ್ರಾವಣಿ, ಅನುರೂಪ, ಖುಷಿ, ಪಂಚರಂಗಿ ಪೋಂ ಪೋಂ, ಮಧುಬಾಲ, ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ಅಂಬಾರಿ. (ಫಿಲ್ಮಿಬೀಟ್ ಕನ್ನಡ)